ಗುಜರಾತ್‌ಗೆ ಕರ್ನಾಟಕ ಕಡಿವಾಣ


Team Udayavani, Dec 15, 2018, 11:19 AM IST

untitled-1.jpg

ಸೂರತ್‌: ಶುಕ್ರವಾರ ಸೂರತ್‌ನಲ್ಲಿ ಮೊದಲ್ಗೊಂಡ ಎಲೈಟ್‌ “ಎ’ ಗುಂಪಿನ ರಣಜಿ ಪಂದ್ಯದಲ್ಲಿ ಆತಿಥೇಯ ಗುಜರಾತ್‌ಗೆ ಕರ್ನಾಟಕ ಕಡಿವಾಣ ಹಾಕಿದೆ. ಗುಜರಾತ್‌ 216ಕ್ಕೆ ಆಲೌಟ್‌ ಆಗಿದ್ದು, ಜವಾಬು ನೀಡಲಾರಂಭಿಸಿದ ಕರ್ನಾಟಕ 2 ವಿಕೆಟಿಗೆ 45 ರನ್‌ ಗಳಿಸಿದೆ. ಹಿಂದಿನ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಸೋಲು ಕಂಡಿದ್ದ ರಾಜ್ಯ ತಂಡ ಇನ್ನಿಂಗ್ಸ್‌ ಮುನ್ನಡೆ ಪಡೆಯಲು ಇನ್ನೂ 172 ರನ್‌ ಗಳಿಸಬೇಕಿದೆ. 8 ವಿಕೆಟ್‌ ಇದೆ. ಆರ್‌. ಸಮರ್ಥ್ (7) ಕ್ರೀಸ್‌ನಲ್ಲಿದ್ದಾರೆ.

ಎಡವಿದ ಮಾಯಾಂಕ್‌, ನಿಶ್ಚಲ್‌
ತಂಡಕ್ಕೆ ಮರಳಿದ ಆರಂಭಿಕ ಬ್ಯಾಟ್ಸ್‌ಮನ್‌ ಮಾಯಾಂಕ್‌ ಅಗರ್ವಾಲ್‌ ಮೇಲೆ ಕರ್ನಾಟಕ ಭಾರೀ ಭರವಸೆ ಇರಿಸಿತ್ತು. ಆದರೆ ಅವರು 25 ರನ್‌ ಮಾಡಿ ನಿರ್ಗಮಿಸಿದರು. ಆಗ ಸ್ಕೋರ್‌ 38 ರನ್‌ ಆಗಿತ್ತು. 7 ರನ್‌ ಆಗುವಷ್ಟರಲ್ಲಿ ನಿಶ್ಚಲ್‌ ಕೂಡ ಔಟಾದರು. ಕರ್ನಾಟಕ ತಂಡ ಮತ್ತೂಂದು ಆಘಾತ ಅನುಭವಿಸಿತು. ದಿನದಾಟವನ್ನು ಇಲ್ಲಿಗೇ ಕೊನೆಗೊಳಿಸಲಾಯಿತು. ಸೂರತ್‌ನಲ್ಲಿ ಬ್ಯಾಟಿಂಗ್‌ ಕಠಿನವಾಗಿ ಪರಿಣಮಿಸುವ ಸಾಧ್ಯತೆ ಇದ್ದು, ಶನಿವಾರ ಕರ್ನಾಟಕ ಎಚ್ಚರಿಕೆಯ ಆಟವಾಡಿ ಇನ್ನಿಂಗ್ಸ್‌ ಮುನ್ನಡೆಗೆ ಪ್ರಯತ್ನಿಸಬೇಕಿದೆ.

ಪ್ರಿಯಾಂಕ್‌ ಅರ್ಧ ಶತಕ
ಇದಕ್ಕೂ ಮೊದಲು ಇನಿಂಗ್ಸ್‌ ಆರಂಭಿಸಿದ ಗುಜರಾತ್‌ ರಾಜ್ಯದ ಬೌಲಿಂಗ್‌ ದಾಳಿಗೆ ಸಿಲುಕಿ ಒದ್ದಾಟ ನಡೆಸಿತು. ಇನ್ನಿಂಗ್ಸ್‌ ಆರಂಭಿಸಿದ ಕಥನ್‌ ಪಟೇಲ್‌ (13 ರನ್‌) ಹಾಗೂ ಪ್ರಿಯಾಂಕ್‌ ಪಾಂಚಾಲ್‌ ಮೊದಲ ವಿಕೆಟಿಗೆ 48 ರನ್‌ ಜತೆಯಾಟ ನಡೆಸಿ ಭರವಸೆ ಮೂಡಿಸಿದರು. ಈ ಹಂತದಲ್ಲಿ ದಾಳಿಗಿಳಿದ ಕೆ. ಗೌತಮ್‌ ಅವರು ಪಟೇಲ್‌ ವಿಕೆಟ್‌ ಕಿತ್ತರು. ಭಾರ್ಗವ್‌ ಮೆರಾಯ್‌ (4), ರುಜುಲ್‌ ಭಟ್‌ (12), ಮನ್‌ಪ್ರೀತ್‌ ಜುನೇಜ (15), ಅಕ್ಷರ್‌ ಪಟೇಲ್‌ (3) ಬೇಗನೇ ವಿಕೆಟ್‌ ಕಳೆದುಕೊಂಡರು. 

ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಕಪ್ತಾನನ ಆಟವಾಡಿದ ಪ್ರಿಯಾಂಕ್‌ ಪಾಂಚಾಲ್‌ 47ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡು 74 ರನ್‌ ಬಾರಿಸಿದರು (135 ಎಸೆತ, 8 ಬೌಂಡರಿ). ಶ್ರೇಯಸ್‌ ಸ್ಪಿನ್‌ ಮೋಡಿಗೆ ಸಿಲುಕಿ 7ನೇ ವಿಕೆಟ್‌ ರೂಪದಲ್ಲಿ ಪೆವಿಲಿಯನ್‌ ಸೇರಿಕೊಂಡರು. ಕೆಳ ಕ್ರಮಾಂಕದಲ್ಲಿ ಪೀಯೂಷ್‌ ಚಾವ್ಲಾ (34) ಹಾಗೂ ಮೆಹುಲ್‌ ಪಟೇಲ್‌ (ಅಜೇಯ 31) ಉತ್ತಮ ಪ್ರದರ್ಶನ ನೀಡಿದ್ದರಿಂದ ಗುಜರಾತ್‌ಗೆ ಇನ್ನೂರರ ಗಡಿ ದಾಟಲು ಸಾಧ್ಯವಾಯಿತು. 

ಕರ್ನಾಟಕ ಪರ ವಿನಯ್‌ ಕುಮಾರ್‌ (33ಕ್ಕೆ 2), ಪ್ರತೀಕ್‌ ಜೈನ್‌ (28ಕ್ಕೆ 2), ರೋನಿತ್‌ ಮೋರೆ (63ಕ್ಕೆ 2), ಕೆ. ಗೌತಮ್‌ (58ಕ್ಕೆ 2) ಹಾಗೂ ಶ್ರೇಯಸ್‌ ಗೋಪಾಲ್‌ (21ಕ್ಕೆ 2) ಉತ್ತಮ ಪ್ರದರ್ಶನ ನೀಡಿದರು. ಸಂಕ್ಷಿಪ್ತ ಸ್ಕೋರ್‌: ಗುಜರಾತ್‌-216 (ಪಾಂಚಾಲ್‌ 74, ಚಾವ್ಲಾ 34, ಮೆಹುಲ್‌ ಔಟಾಗದೆ 31, ಗೋಪಾಲ್‌ 21ಕ್ಕೆ 2, ಪ್ರತೀಕ್‌ 28ಕ್ಕೆ 2). ಕರ್ನಾಟಕ-2 ವಿಕೆಟಿಗೆ 45.
 

ಟಾಪ್ ನ್ಯೂಸ್

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.