ರಾಗಿಗುಡ್ಡದಲ್ಲಿ ಸುವರ್ಣ ಸಂಭ್ರಮ
Team Udayavani, Dec 22, 2018, 3:15 PM IST
ಬೆಂಗಳೂರು ದಕ್ಷಿಣದ ಪ್ರಮುಖ ಹೆಗ್ಗುರುತಾದ ರಾಗಿಗುಡ್ಡದ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯದಲ್ಲಿ 50ನೇ ವರ್ಷದ ಹನುಮ ಜಯಂತಿ ನಡೆಯುತ್ತಿದೆ. ಡಿಸೆಂಬರ್ 12ರಂದು ಪ್ರಾರಂಭವಾದ ಸುವರ್ಣ ಮಹೋತ್ಸವ 30ರವರೆಗೆ ನಡೆಯಲಿದೆ.
ಡಿ. 23ರಿಂದ 30ರವರೆಗೆ ಕೃಷ್ಣ ಯಜುರ್ವೇದ ಸಂಹಿತಾ ಸ್ವಾಹಕಾರ ಯಾಗ ನಡೆಯಲಿದ್ದು, ಮಹೋತ್ಸವದ ಕೊನೆಯ ದಿನ ರಾಮತಾರಕ ಹೋಮ ಮತ್ತು ಸಂಹಿತಾಯಾಗದ ಪೂರ್ಣಾಹುತಿ ನಡೆಯಲಿದೆ. ಸ್ವರ್ಣ ಮಹೋತ್ಸವದ ಸವಿ ನೆನಪಿಗೆ 18 ಅಡಿ ಎತ್ತರದ ಶ್ರೀ ರಾಮತಾರಕನಾಮ ಕೋಟಿ ಲೇಖನ ಯಜ್ಞದ ಸ್ಮಾರಕ ಸ್ತಂಭವನ್ನು ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಸ್ಥಾಪನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಪವನಸುತ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದ್ದು, ಪ್ರಭಾತ್ ಕಲಾ ವಿದರಿಂದ ಶ್ರೀರಾಮ ಪ್ರತೀಕ್ಷ ನೃತ್ಯರೂಪಕ ನಡೆಯಲಿದೆ.
ಎಲ್ಲಿ?: ರಾಗಿಗುಡ್ಡದ ಪ್ರಸನ್ನ
ಆಂಜನೇಯ ಸ್ವಾಮಿ ದೇವಾಲಯ,
ಜಯನಗರ 9ನೇ ಬಡಾವಣೆ
ಯಾವಾಗ?: ಡಿ 22-30
ಹೆಚ್ಚಿನ ವಿವರಗಳಿಗೆ: 26580500/26594255
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!