ತುಳುನಾಡಿನ ವೀರ ಪುರುಷರ ತಾಯಿಯ ಕಥೆ ಈಗ ಸಿನೆಮಾ!


Team Udayavani, Jan 3, 2019, 7:02 AM IST

3-january-11.jpg

ತುಳುವ ಮಣ್ಣಿನಲ್ಲಿ ಬಲ್ಲಿದರ ಪರವಾಗಿ ಪರಾಕ್ರಮ ತೋರಿದ ವೀರರಾದ ‘ಕೋಟಿ ಚೆನ್ನಯ’ರ ತಾಯಿ ‘ದೇಯಿ ಬೈದ್ಯೆತಿ’ ಕಥೆ ಈಗ ಸಿನೆಮಾ ರೂಪದಲ್ಲಿ ತೆರೆಗೆ ಬರುವ ಸಿದ್ಧತೆಯಲ್ಲಿದೆ. ಸೂರ್ಯೋದಯ ಪೆರಂಪಳ್ಳಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ತುಳುನಾಡಿನ ಜನಪದ ಮಹಾಕಾವ್ಯವಾದ ಬೈದೆರ್ಲ ಪಾಡ್ದನದ ಬಗ್ಗೆ ಅಧ್ಯಯನ ಮಾಡಿದ್ದ ನಿರ್ದೇಶಕರು, ಹತ್ತು ವರ್ಷಗಳ ಹಿಂದೆಯೇ ‘ವಿದ್ಯಾಕ್ರಾಂತಿಯ ವೀರರು ಕೋಟಿ ಚೆನ್ನಯರು’ ಎಂಬ ಕೃತಿ ರಚಿಸಿದ್ದರು. ಹಾಗೆಯೇ ತುಳುನಾಡಿನಲ್ಲಿ ಆರಾಧನೆಗೊಳ್ಳುತ್ತಿರುವ ಗರಡಿ ಆಲಯಗಳನ್ನು ನಿರ್ಮಿಸುವ ಬಗ್ಗೆಯೂ ಈ ಮೊದಲು ಟೆಲಿ ಸಿನೆಮಾ ಮಾಡಿದ್ದರು. ಈ ಸಿನೆಮಾಕ್ಕಾಗಿ 500 ವರ್ಷಗಳ ಹಿಂದಿನ ಕಾಲವನ್ನು ಸೃಜಿಸಲಾಗಿದೆ. ಅಂದಿನ ಕಾಲದಲ್ಲಿದ್ದ ಸನ್ನಿವೇಶವನ್ನು ಕಟ್ಟಿಕೊಡಲಾಗಿದೆ. ಆಗಿನ ಸಂದರ್ಭಕ್ಕೆ ಸರಿಹೊಂದುವ ಭವ್ಯ ಮನೆಗಳ ಸೆಟ್‌ಗಳನ್ನು ನಿರ್ಮಿಸಿ, ಕರಾವಳಿಗರ ಜನಜೀವನ, ಆಚಾರ ವಿಚಾರ, ಉಡುಗೆ ತೊಡುಗೆಗಳ ಓರಣಗಳನ್ನು, ತುಳುನಾಡಿನ ಅಗೋಚರ ಸಂಪ್ರದಾಯಗಳ ಕಟ್ಟುಪಾಡುಗಳನ್ನು ಈ ಚಿತ್ರದಲ್ಲಿ ಬಿಂಬಿಸಲಾಗಿದೆ.

ದೇವರಾಜ್‌ ಪಾಲನ್‌, ರಾಜ್‌ಕೃಷ್ಣ, ಅಮಿತ್‌ರಾವ್‌ ಅವರ ಸಹನಿರ್ದೇಶನ ಹಾಗೂ ಸಂಜೀವ ಪೂಜಾರಿ ಹೆರ್ಗ, ಕಿರಣ್‌ ಹೆಗ್ಡೆ ಬಿಜ್ರಿ ಅವರು ನಿರ್ಮಾಣ ಜವಾಬ್ದಾರಿ ವಹಿಸಿದ್ದಾರೆ. ಕಲಾವತಿ ದಯಾನಂದ್‌ ಅವರ ಜತೆಗೆ ಸೂರ್ಯೋದಯ್‌ ಪೆರಂಪಳ್ಳಿ,ಲಹರಿ ಕೋಟ್ಯಾನ್‌, ಸುರೇಶ್‌ ಸಾಲ್ಯಾನ್‌, ಕಾಲೇಶ್‌ ಹಿನ್ನೆಲೆ ಗಾಯನವಿದೆ.

ತುಳುವ ಮಣ್ಣಿನಲ್ಲಿ ಬಲ್ಲಿದರ ಪರವಾಗಿ ಪರಾಕ್ರಮ ತೋರಿದ ವೀರರಾದ ‘ಕೋಟಿ ಚೆನ್ನಯ’ರ ತಾಯಿ ‘ದೇಯಿ ಬೈದ್ಯೆತಿ’ಯ ಜೀವನಗಾಥೆಯನ್ನು ಸಿನೆಮಾದಲ್ಲಿ ತೋರಿಸಲಾಗಿದೆ. ಸಂಶೋಧಕರಾದ ಬನ್ನಂಜೆ ಬಾಬು ಅಮೀನ್‌, ದಾಮೋದರ್‌ ಕಲ್ಮಾಡಿ, ಡಾ|ಗಣನಾಥ್‌ ಶೆಟ್ಟಿ ಎಕ್ಕಾರ್‌, ಚೆಲುವಾರಾಜ್‌ ಪೆರಂಪಳ್ಳಿ, ಬಾಬು ಶಿವಪೂಜಾರಿ ಮುಂಬಯಿಯವರ ಖ್ಯಾತ ಸಂಶೋಧಕರ ಆಲೋಚನೆಗಳನ್ನು ಈ ಸಿನೆಮಾದಲ್ಲಿ ಪ್ರತಿಬಿಂಬಿಸಲಾಗಿದೆ. 2 ಗಂಟೆ 50 ನಿಮಿಷಗಳ ಕಾಲ ಪ್ರೇಕ್ಷಕರನ್ನು 500 ವರ್ಷಗಳ ಹಿಂದಕ್ಕೆ ಕೊಂಡೊಯ್ಯುವ ಸಿನೆಮಾ ತಂಡದ ಶ್ರಮ ಕೆಲವೇ ದಿನದಲ್ಲಿ ಪ್ರತಿಧ್ವನಿಸಲಿದೆ.

ಕನ್ನಡ, ತಮಿಳು, ತುಳು ಚಿತ್ರರಂಗದಲ್ಲಿ ಸುಮಾರು 25 ವರ್ಷಗಳ ಕಾಲ ದುಡಿದಿರುವ ಸೂರ್ಯೋದಯ್‌ ಪೆರಂಪಳ್ಳಿ ನಿರ್ದೇಶನದ ಚೊಚ್ಚಲ ಚಲನಚಿತ್ರ ಇದು. ಭಾಸ್ಕರ್‌ ರಾವ್‌ ಸಂಗೀತ, ಮಣಿಕಾಂತ್‌ ಕದ್ರಿ ಅವರ ಹಿನ್ನೆಲೆ ಸಂಗೀತವಿದೆ. ರವಿ ಸುವರ್ಣ ಮತ್ತು ಹರೀಶ್‌ ಪೂಜಾರಿ ಕುಕ್ಕುಂಜೆ ಅವರ ಛಾಯಾಗ್ರಹಣ, ಮೋಹನ್‌ ಎಲ್‌. ಸಂಕಲನ ಮಾಡಿದ್ದಾರೆ. ರವಿ ಪೂಜಾರಿ ಹಿರಿಯಡ್ಕ ಹಾಗೂ ದಿನೇಶ್‌ ಸುವರ್ಣ ರಾಯಿ ಕಲಾ ನಿರ್ದೇಶಕರು. ಉಮೇಶ್‌ ಪೂಜಾರಿ ಬೆಳ್ತಂಗಡಿ ಸಹನಿರ್ಮಾಪಕರು.

ಸೀತಾ ಕೋಟೆ, ಚೇತನ್‌ ರೈ ಮಾಣಿ, ಸೌಜನ್ಯಾ ಹೆಗ್ಡೆ, ಅಮಿತ್‌ ರಾವ್‌, ಎಂ.ಕೆ. ಮಠ, ಪ್ರಕಾಶ್‌ ಧರ್ಮನಗರ, ಅಶ್ವಿ‌ನಿ ಕೋಟ್ಯಾನ್‌, ಕಾಜೋಲ್‌ ಕುಂದರ್‌, ಪ್ರವೀಣ್‌ ಶೆಟ್ಟಿ, ವಿಜಯ್‌ ಕುಮಾರ್‌, ಸುನಿಲ್‌ ನೆಲ್ಲಿಗುಡ್ಡೆ, ಲಕ್ಷ್ಮಣ್‌ ಮಲ್ಲೂರ್‌, ಸುನಿಲ್‌ ಪಲ್ಲಮಜಲು, ಎಚ್‌.ಕೆ. ನಯನಾಡು, ಸುನೀತಾ ಎಕ್ಕೂರ್‌, ಮಂಜುಭಾಷಿನಿ, ಕಿರ್ಲೋಸ್ಕರ್‌ ಸತ್ಯನಾರಾಯಣ್‌, ಸುಜಾತಾ ಶೆಟ್ಟಿ, ಮೋನಿಕಾ ಆಂಡ್ರದೆ, ನಾಗರಾಜ್‌ ವರ್ಕಾಡಿ, ಸುನಿಲ್‌ ಪಲ್ಲಮಜಲ್‌, ಭಾಸ್ಕರ್‌ ಮಣಿಪಾಲ್‌, ಎಂ. ಸುಬ್ರಹ್ಮಣ್ಯ ಪೈ, ಸೂರ್ಯೋದಯ್‌, ಪವಿತ್ರಾ ಶೆಟ್ಟಿ ಕಟಪಾಡಿ, ಇಡ್ಲಿ ರಾಜ, ಶ್ರೀನಾಥ್‌ ವಶಿಷ್ಟ, ತಾರನಾಥ್‌ ಸುರತ್ಕಲ್‌, ಪ್ರಕಾಶ್‌ ಭಟ್‌ ಪಡುಬೆಳ್ಳೆ, ಆನಂದ್‌, ಸಂಗೀತ, ರಾಜೇಶ್‌ ಸೈಲಾರ್ಕ್‌, ಯಶಸ್ಸ್ ಸೂರ್ಯ, ಶ್ರೇಜಲ್‌ ಪೂಜಾರಿ, ಸಮೃದ್ಧಿ ಪ್ರಕಾಶ್‌ ಭಟ್‌, ವರ್ಷ ಸಿ. ಶೆಟ್ಟಿ ಮುಂತಾದವರು ತಾರಾಗಣದಲ್ಲಿದ್ದಾರೆ.

 ದಿನೇಶ್‌ ಇರಾ

ಟಾಪ್ ನ್ಯೂಸ್

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.