ತೊಗರಿ ನೋಂದಣಿಗೆ ರಾತ್ರಿಯಿಡೀ ಜಾಗರಣೆ
Team Udayavani, Jan 4, 2019, 8:56 AM IST
ಹೂವಿನಹಿಪ್ಪರಗಿ: ರೈತರು ಬೆಳೆದ ತೊಗರಿಯಲ್ಲಿ ಸರಕಾರ ಬೆಂಬಲ ಬೆಲೆಯಲ್ಲಿ ಖರೀದಿಸಲು ಆಯಾ ಪಿಕೆಪಿಎಸ್ನಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಸಮೀಪದ ಕುದರಿ ಸಾಲವಾಡಗಿ ಗ್ರಾಮದ ಪಿಕೆಪಿಎಸ್ ಬ್ಯಾಂಕ್ ನಲ್ಲಿ ತೊಗರಿ ಖರೀದಿ ಕೇಂದ್ರ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಕಾರ್ಯನಿರ್ವಾಹಣಾಧಿಕಾರಿ ಅನಿಲಕುಮಾರ ದೇಸಾಯಿ ಮಾತನಾಡಿ, ರೈತರ ಅನುಕೂಲದ ದೃಷ್ಟಿಯಿಂದ ಸರಕಾರ ತೊಗರಿ ಖರೀದಿ ಕೇಂದ್ರವನ್ನು ನೀಡಿ ನಿಮಗೆ ಬೆಂಬಲ ಬೆಲೆ ನೀಡುತ್ತಿದೆ. ರೈತರು ಒಬ್ಬರಿಗೊಬ್ಬರು ಜಗಳವಾಡದೆ ಸಿಬ್ಬಂದಿಯೊಂದಿಗೆ ಸಹಕರಿಸಿ ಎಂದರು.
ಮೊದಲ ದಿನದಂದು ರೈತರು ರಾತ್ರಿಯಡೀ ಚಳಿ ಲೆಕ್ಕಿಸದೆ ಸರದಿ ಸ್ಥಳದಲ್ಲೆ ಮಲಗಿದ್ದರು. ನೋಂದಣಿಯ ಮೊದಲ ದಿನವಾದ ಬುಧವಾರ ತಾಂತ್ರಿಕ ದೋಷದಿಂದಾಗಿ ಕೆಲ ಕಾಲ ನೋಂದಣಿ ಕಾರ್ಯ ಸ್ಥಗಿತವಾಗಿತ್ತಾದರೂ ನಂತರ ಪುನಃ ಆರಂಭಿಸಿ ರೈತರ ಹಿತ ಕಾಪಾಡುವಲ್ಲಿ ಸಿಬ್ಬಂದಿ ಮುಂದಾದರು. ಎರಡನೇಯ ದಿನ ಗುರುವಾರ ಸರದಿಯಲ್ಲಿ ನಿಂತು ಸರಳ ರೀತಿಯಲ್ಲಿ ರೈತರು ತಮ್ಮ ನಂಬರ್ ಪಡೆದರು. ಗುರುವಾರ 120ಕ್ಕೂ ಹೆಚ್ಚು ರೈತರು ತಮ್ಮ ಹೆಸರು ನೋಂದಾಯಿಸಿದ್ದಾರೆ. ಗುರುವಾರ ಅವಕಾಶ ದೊರೆಯದ ರೈತರಿಗೆ ಕೋಪನ್ ನೀಡಿ ನಾಳೆ ಬನ್ನಿ ಎಂದು ಹೇಳಿ ಕಳುಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್