ಹಿರಿಯ ನಟ ರಿಷಿ ಕಪೂರ್‌ ಆರೋಗ್ಯ ಏನಾಗಿದೆ ? ಕ್ಯಾನ್ಸರ್‌ ವದಂತಿ


Team Udayavani, Jan 4, 2019, 10:41 AM IST

rishi-kapoor-700.jpg

ಹೊಸದಿಲ್ಲಿ : ಹಿರಿಯ ಬಾಲಿವುಡ್‌ ನಟ ರಿಷಿ ಕಪೂರ್‌ ಆರೋಗ್ಯಕ್ಕೆ  ಏನಾಗಿದೆ ? ಪ್ರಕೃತ ಅಮೆರಿಕದಲ್ಲಿ ರಿಷಿ ಚಿಕಿತ್ಸೆ ಪಡೆಯುತ್ತಿದ್ದು ಅವರು ಕ್ಯಾನ್ಸರ್‌ ಪೀಡಿರಾಗಿದ್ದಾರೆಯೇ ಎಂಬ ಶಂಕೆ ಈಗ ಅವರ ಅಭಿಮಾನಿಗಳನ್ನು ಕಾಡುತ್ತಿದೆ. 

ಈ ಶಂಕೆಗೆ ಕಾರಣ ರಿಷಿ ಕಪೂರ್‌ ಪತ್ನಿ ನೀತೂ ಕಪೂರ್‌ (ಮಾಜಿ ಬಾಲಿವುಡ್‌ ನಟಿ ನೀತೂ ಸಿಂಗ್‌) ಅವರು ಇನ್‌ಸ್ಟಾಗ್ರಾಂ ನಲ್ಲಿ  ಹಾಕಿರುವ ಒಂದು ಪೋಸ್ಟ್‌. ಅದರಲ್ಲಿ ಆಕೆ “ಕ್ಯಾನ್ಸರ್‌ ಅನ್ನೋದು ಕೇವಲ zodiac sign (ರಾಶಿ ಚಿಹ್ನೆ) ಮಾತ್ರವೇ ಆಗಿರಲಿ ಅಂತ ನಾನು ಹಾರೈಸುತ್ತೇನೆ’ ಎಂದು ಹೇಳಿದ್ದಾರೆ. ನೀತೂ ಅವರ ಈ ಪೋಸ್ಟ್‌ ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ. 

ನೀತೂ ಹಾಕಿರುವ ಈ ಪೋಸ್ಟ್‌  ಅಮೆರಿಕದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ 
ರಿಷಿ ಕಪೂರ್‌ ಬಗೆಗೋ ಅಥವಾ ಸ್ವತಃ ತನ್ನ ಬಗೆಗೋ ಎಂಬುದೀಗ ಅಭಿಮಾನಿಗಳಿಗೆ ಯಕ್ಷ ಪ್ರಶ್ನೆಯಾಗಿದೆ. ಅಂತೆಯೇ ಅವರಲ್ಲಿ ಇದು ತೀವ್ರ ಕಳವಳ ಸೃಷ್ಟಿಸಿದೆ.

ಈ ನಡುವೆ ರಿಷಿ ಕಪೂರ್‌ ಅವರ ಸಹೋದರ, ನಟ ರಣಧೀರ್‌ ಕಪೂರ್‌, ಚಿಂತೂ (ರಿಷಿ) ಆರೋಗ್ಯದ ಬಗ್ಗೆ ಕೆಲವೊಂದು ಅಪ್‌ಡೇಟ್‌ ನೀಡಿದ್ದಾರೆ. 

ಹಿಂದುಸ್ಥಾನ್‌ ಟೈಮ್ಸ್‌ ಜತೆಗೆ ಮಾತನಾಡುತ್ತಾ ರಣಧೀರ್‌ ಕಪೂರ್‌ ಅವರು, “ಇದರ ಬಗ್ಗೆ (ಕ್ಯಾನ್ಸರ್‌) ನನಗೆ ಹೆಚ್ಚೇನೂ ಗೊತ್ತಿಲ್ಲ. ಜನರು ತಮಗೆ ಬೇಕಾದ ರೀತಿಯಲ್ಲಿ ಮಾತನಾಡಿಕೊಳ್ಳುವುದು ಸ್ವಾಭಾವಿಕ. ಆದರೆ ರಿಷಿ ಆರೋಗ್ಯದಿಂದಿದ್ದಾರೆ ಎಂದಷ್ಟೇ ಹೇಳಬಲ್ಲೆ; ಇಲ್ಲಿರುವ ಫೋಟೋ ಅದಕ್ಕೆ ಸಾಕ್ಷಿ. ಎಲ್ಲರೊಂದಿಗೂ ಬೆರೆತು ರಿಷಿ ಮಾತನಾಡುತ್ತಿದ್ದಾರೆ. ಒಳ್ಳೆಯ ಊಟ, ಆಹಾರ ಸೇವಿಸುತ್ತಿದ್ದಾರೆ. ಆತ ಬೇಗನೆ ಭಾರತಕ್ಕೆ ಮರಳಲಿದ್ದಾರೆ. ನಾವದನ್ನೀಗ ಎದುರು ನೋಡುತ್ತಿದ್ದೇವೆ’ ಎಂದು ಹೇಳಿದರು.

 

2018ರ ಸೆಪ್ಟಂಬರ್‌ನಲ್ಲಿ ರಿಷಿ ಕಪೂರ್‌ ‘ನಾನು ಕೆಲವು ವೈದ್ಯಕೀಯ ಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ಹೋಗುತ್ತಿದ್ದೇನೆ; ಯಾರೂ ದಯವಿಟ್ಟು ನನ್ನ ಆರೋಗ್ಯದ ಬಗ್ಗೆ ವದಂತ ಹಬ್ಬಿಸಬಾರದು’ ಎಂದು ಸಾಮಾಜಿಕ ಜಾಲ ತಾಣದಲ್ಲಿ ಮನವಿ ಮಾಡಿಕೊಂಡಿದ್ದರು. 

ತಾಯಿ ಕೃಷ್ಣ ರಾಜ್‌ ಕಪೂರ್‌ ನಿಧನ ಹೊಂದಿದ್ದಾಗ ಅವರ ಅಂತ್ಯಕ್ರಿಯೆಗೂ ರಿಷಿ ಬಂದಿರಲಿಲ್ಲ. ಇದರಿಂದಾಗಿ ಸಾಮಾಜಿಕ ಜಾಲ ತಾಣದಲ್ಲಿ ‘ರಿಷಿ ಕಪೂರ್‌  ಕ್ಯಾನ್ಸರ್‌ ನಿಂದ ಬಳಲುತ್ತಿದ್ದಾರೆ’ ಎಂಬ ವದಂತಿ ವ್ಯಾಪಕವಾಗಿ ಹರಡಿತ್ತು.

ಈ ವರೆಗೂ ರಿಷಿ ಕಪೂರ್‌ ಯಾವ ವ್ಯಾದಿಯಿಂದ ಬಳಲುತ್ತಿದ್ದಾರೆ ಎಂಬ ಬಗ್ಗೆ ಅವರಿಂದಾಗಲೀ ಅವರ ಕುಟುಂಬದವರಿಂದಾಗಲೀ ಯಾವುದೇ ಮಾಹಿತಿ, ದೃಢೀಕರಣ ಇಲ್ಲ. 

ಇದೇ ವೇಳೆ ರಿಷಿ ಕಪೂರ್‌ ಅವರ ಮಕ್ಕಳಾದ ರಣಬೀರ್‌ ಕಪೂರ್‌ ಮತ್ತು ರಿದ್ಧಿಮಾ ಕಪೂರ್‌ ಸಾಹಿನಿ ಅವರು ನ್ಯೂಯಾರ್ಕ್‌ ನಲ್ಲೇ ಇದ್ದಾರೆ. ಅಲ್ಲಿಯೇ ಎಲ್ಲರೂ ಜತೆಗೂಡಿ ಹೊಸ ವರ್ಷ ಆಚರಿಸಿದ್ದಾರೆ. 

ರಿದ್ಧಿಮಾ ಜತೆಗೆ ಆಕೆಯ ಪತಿ ಭರತ್‌ ಮತ್ತು ಪುತ್ರಿ ಸಮರಾ ಇದ್ದಾರೆ. ರಣಬೀರ್‌ ಜತೆಗೆ ಆತನ ಗರ್ಲ್ ಫ್ರೆಂಡ್‌ ಎಂದು ವದಂತಿಯಾಗಿರುವ ಅಲಿಯಾ ಭಟ್‌ ಇದ್ದಾರೆ.  

ಟಾಪ್ ನ್ಯೂಸ್

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.