ಗೋವಿನ ಹೆಸರಲ್ಲಿ ಮತ ಯಾಚಿಸುವವರು ಮೇವನ್ನೂ ಕೊಡಬೇಕು: ಕೇಜ್ರಿ
Team Udayavani, Jan 12, 2019, 6:46 AM IST
ಹೊಸದಿಲ್ಲಿ : ಗೋವಿನ ಹೆಸರಲ್ಲಿ ಮತ ಯಾಚಿಸುವವರು ಗೋವುಗಳಿಗೆ ಮೇವನ್ನು ಕೂಡ ಒದಗಿಸಬೇಕು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಎಂಸಿಡಿ ಕಳೆದ ಎರಡು ವರ್ಷಗಳಲ್ಲಿ ಗೋಶಾಲೆಗಳಿಗೆ ಬಿಡುಗಡೆ ಮಾಡಬೇಕಾಗಿದ್ದ ಹಣವನ್ನು ಬಿಡುಗಡೆ ಮಾಡಿಲ್ಲ; ಆದರೆ ದಿಲ್ಲಿ ಆಪ್ ಸರಕಾರ ತನ್ನ ಪಾಲಿನ ವಂತಿಗೆಯನ್ನು ನೀಡಿದೆ ಎಂದು ಕೇಜ್ರಿವಾಲ್ ಹೇಳಿದರು.
ಈಶಾನ್ಯ ದಿಲ್ಲಿಯ ಬವಾನಾ ಪಟ್ಟದಲ್ಲಿ ದಿಲ್ಲಿ ಸರಕಾರ ಮತ್ತು ದಿಲ್ಲಿ ಮುನಿಸಿಪಲ್ ಕಾರ್ಪೊರೇಶನ್ ಜಂಟಿಯಾಗಿ ನಡೆಸುತ್ತಿರುವ ಶ್ರೀ ಕೃಷ್ಣ ಗೋಶಾಲೆಗೆ ಕೇಜ್ರಿವಾಲ್ ಅವರು ತನ್ನ ಸರಕಾರದ ಅಭಿವೃದ್ಧಿ ಸಚಿವ ಗೋಪಾಲ್ ರಾಯ್ ಅವರ ಜತೆಗೆ ಭೇಟಿ ನೀಡಿದಾಗ ಈ ಮಾತುಗಳನ್ನು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
Ban; ಎಂಡಿಎಚ್, ಎವರೆಸ್ಟ್ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?