ವಾರ್ಷಿಕ ಜಾತ್ರೆ: ಇಂದು ಕುಂಬಳೆ ಬೆಡಿ
Team Udayavani, Jan 17, 2019, 12:30 AM IST
ಕುಂಬಳೆ: ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರದ ವಾರ್ಷಿಕ ಜಾತ್ರೆಯ ತೃತೀಯ ದಿನವಾದ ಬುಧವಾರ ಬೆಳಗ್ಗೆ ಉತ್ಸವ ಶ್ರೀಬಲಿ, ಭಜನೆ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ನಿತ್ಯಬಲಿಯ ಬಳಿಕ ಅನ್ನಸಂತರ್ಪಣೆ ನಡೆಯಿತು.
ಸಂಜೆ ನಡೆ ತೆರೆದ ಬಳಿಕ ದೀಪಾ ರಾಧನೆ, ಸೀಮೆಯ ಭಕ್ತವೃಂದದ ವರಿಂದ ವಿಶ್ವರೂಪ ದರ್ಶನ ನಡೆ ಯಿತು. ರಾತ್ರಿ ಸಣ್ಣ ದೀಪೋತ್ಸವ, ಶ್ರೀಬಲಿ, ಪೂಜೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸೂರ್ಯ ಸಂಗೀತ ಬಳಗ ಯುವಪ್ರತಿಭೆ ಬಾಲಗಾಯಕಿ ಸೂರ್ಯ ಗಾಯತ್ರಿ ಅವರಿಂದ ಭಕ್ತಿ ಸಂಗೀತ ರಂಜಿಸಿತು.
ದ್ವಿತೀಯ ದಿನದಂದು ಬೆಳಗ್ಗೆ ಉತ್ಸವ ಶ್ರೀಬಲಿ, ಭಜನೆ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ನಿತ್ಯಬಲಿಯ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ನಡೆ ತೆರೆದ ಬಳಿಕ ದೀಪಾರಾಧನೆ, ಕೇಳಿಕೊಟ್ಟು ಸೇವೆ, ರಾತ್ರಿ ಸಣ್ಣ ದೀಪೋತ್ಸವ, ಶ್ರೀಬಲಿ, ಪೂಜೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಲ್ಪಾಡಿ ಕೂಟ ಮಹಾಜಗತ್ತು ಮಹಿಳಾ ವೇದಿಕೆಯ ಸದಸ್ಯೆಯರಿಂದ ಯಕ್ಷಗಾನ ತಾಳಮದ್ದಳೆ ಮತ್ತು ಕಟೀಲು ಮೇಳದಿಂದ “ಶ್ರೀ ಕಟೀಲು ಕ್ಷೇತ್ರ ಮಹಾತೆ¾’ ಯಕ್ಷಗಾನ ಬಯಲಾಟ ಜರಗಿತು. ಜ. 17ರಂದು ರಾತ್ರಿ 9.45ರಿಂದ ಇತಿಹಾಸ ಪ್ರಸಿದ್ಧ ಕುಂಬಳೆ ಬೆಡಿಯ ಸಿಡಿಮದ್ದು ಪ್ರದರ್ಶನ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ