ವಿರೂಪಾಕ್ಷೇಶ್ವರ-ಪಂಪಾದೇವಿ ಹೇಮಕೂಟ ಪ್ರದಕ್ಷಿಣೆ


Team Udayavani, Jan 17, 2019, 7:20 AM IST

bell-2.jpg

ಹೊಸಪೇಟೆ: ಉತ್ತರಾಯಣ ಪುಣ್ಯಕಾಲದಲ್ಲಿ ಆರಂಭಗೊಂಡಿರುವ ಮಕರ ಸಂಕ್ರಮಣದ ಅಂಗವಾಗಿ ಹಂಪಿಯ ಶ್ರೀವಿರೂಪಾಕ್ಷೇಶ್ವರಸ್ವಾಮಿ ಹಾಗೂ ಪಂಪಾಂಬಿಕಾದೇವಿ ಉತ್ಸವ ಮೂರ್ತಿಗಳ ಹೇಮಕೂಟ ಪ್ರದಕ್ಷಿಣೆ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು.

ಗಜ ವಾಹನಾರೂಢ ಉತ್ಸವ ಮೂರ್ತಿಗಳ ಶ್ರೀವಿರೂಪಾಕ್ಷ ದೇವಾಲಯದ ಪ್ರದಕ್ಷಿಣೆಯ ನಂತರ ಹೇಮಕೂಟ ಪ್ರದಕ್ಷಿಣೆ ಆರಂಭವಾಯಿತು. ದೇವಾಲಯದ ಪಟ್ಟದ ಆನೆ ಲಕ್ಷ್ಮೀ ನೇತೃತ್ವದಲ್ಲಿ ದೇವಾಲಯದ ಪುರೋಹಿತರು, ಭಕ್ತರು, ಮಂಗಳವಾದ್ಯ, ದೀವಟಿಗೆಗಳನ್ನು ಒಳಗೊಂಡ ಫ‌ಲಕ್ಕಿ ಮೆರವಣಿಗೆ ಶ್ರೀವಿರೂಪಾಕ್ಷ ರಥ ಬೀದಿ, ಹೇಮಕೂಟ ರಸ್ತೆ, ಕಡ್ಡಿರಾಂಪುರ ರಸ್ತೆ, ನಂತರ ಶ್ರೀಗಾಯತ್ರಿ ಪೀಠದ ಹಿಂಭಾಗ, ಎಂ.ಪಿ.ಪ್ರಕಾಶ ನಗರ, ತುಂಗಭದ್ರಾ ನದಿ ತೀರ, ಮನ್ಮುಖ ಹೊಂಡಗಳನ್ನು ಪ್ರದಕ್ಷಿಣೆ ಹಾಕಿ ತೇರಿನವರೆಗೆ ತೆರಳಿ ಆನಂತರ ದೇವಾಲಯದ ಆವರಣ ಪ್ರವೇಶಿಸಿತು.

ಬಳಿಕ ಕಲ್ಯಾಣ ಮಂಟಪದಲ್ಲಿ ಉತ್ಸವ ಮೂರ್ತಿಗಳಿಗೆ ತೊಟ್ಟಿಲು ಸೇವೆ, ಏಕಾಂತ ಸೇವೆಗಳನ್ನು ಸಲ್ಲಿಸುವ ಮೂಲಕ ಈ ವಿಶೇಷ ಆಚರಣೆ ಪೂರ್ಣಗೊಂಡಿತು.

ಹೇಮಕೂಟ ಪ್ರದಕ್ಷಿಣೆ ಕಾರ್ಯಕ್ರಮದ ಮಾರ್ಗದುದ್ದಕ್ಕೂ ಬರುವ ಎಪ್ಪತ್ತಕ್ಕೂ ಅಧಿಕ ದೇವತೆಗಳಿಗೆ ತೆಂಗಿನಕಾಯಿ ನೈವೇದ್ಯ, ಕರ್ಪೂರ ಆರತಿ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಜಾತಿ, ಧರ್ಮಗಳ ಬೇಧವಿಲ್ಲದೇ ವಿವಿಧ ಸಮುದಾಯಗಳ ಜನರು ತಮ್ಮ ಮನೆಯ ಮುಂದೆ ಆಗಮಿಸಿದ ದೇವರಿಗೆ ಎಳ್ಳು ಸಕ್ಕರೆ, ಕಬ್ಬು, ಹೂಗಳು, ತೆಂಗಿನಕಾಯಿ, ಕರ್ಪೂರ ಸಮರ್ಪಿಸಿದರು.

ಲೋಕ ಕಲ್ಯಾಣಾರ್ಥ ಗ್ರಾಮದ ಸುಭೀಕ್ಷೆ, ಸಮೃದ್ಧ ಮಳೆ-ಬೆಳೆಗಾಗಿ ಅಂದು ವಿಜಯನಗರ ಸಾಮ್ರಾಜ್ಯದ ಅರಸರು ಶ್ರೀವಿರೂಪಾಕ್ಷ ಸ್ವಾಮಿ ಹಾಗೂ ಪಂಪಾದೇವಿಯರ ಉತ್ಸವ ಮೂರ್ತಿಗಳ ಹೇಮಕೂಟ ಗಿರಿ ಪ್ರದಕ್ಷಿಣೆ ಮಾಡುವ ಸಂಪ್ರದಾಯ ಆರಂಭಿಸಿದರು.

ಈ ಸಂಪ್ರದಾಯವನ್ನು ಇಂದಿಗೂ ಧಾರ್ಮಿಕ ದತ್ತಿ ಇಲಾಖೆ, ದೇವಾಲಯ ಸಮಿತಿ, ಹಂಪಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಂದ ಈ ವಿಶೇಷ ಉತ್ಸವವನ್ನು ಸಾಂಪ್ರದಾಯಿಕ ವಿಧಿ-ವಿಧಾನಗಳೊಡನೆ ಜರುಗಿಸಲಾಗುತ್ತಿದೆ. ವರ್ಷದಲ್ಲಿ ಎರಡು ಬಾರಿ ಅಂದರೆ ಮಕರ ಸಂಕ್ರಾಂತಿ ಹಾಗೂ ವೈಶಾಖ ಹುಣ್ಣಿಮೆಯ ದಿನ ಹೇಮಕೂಟ ಗಿರಿ ಪ್ರದಕ್ಷಿಣೆಯನ್ನು ಜರುಗಿಸುತ್ತೇವೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್‌ರಾವ್‌ ತಿಳಿಸಿದರು.

ಹೇಮಕೂಟ ಗಿರಿ ಪ್ರದಕ್ಷಿಣೆಯ ವಿಧಿ ವಿಧಾನಗಳನ್ನು ದೇವಾಲಯದ ಪ್ರಧಾನ ಅರ್ಚಕರಾದ ಪಿ.ಶ್ರೀನಾಥ ಶರ್ಮಾ, ಮುರಳೀಧರ ಶಾಸ್ತ್ರಿ, ಜೆ.ಎಸ್‌.ಶ್ರೀನಾಥ್‌, ಸಹಾಯಕರಾದ ಮಂಜುನಾಥ್‌, ಅರುಣ್‌ಕುಮಾರ್‌, ಪ್ರಶಾಂತ್‌ ನೆರವೇರಿಸಿದರು. ದೆವಾಲಯ ಸಮಿತಿಯ ಶ್ರೀನಿವಾಸ್‌ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.