ಸಿದ್ದಗಂಗಾಶ್ರೀಗಳ ಗದ್ದುಗೆ, ಕ್ರಿಯಾ ಸಮಾಧಿ ಹೇಗೆ ನೆರವೇರುತ್ತೆ ?
Team Udayavani, Jan 22, 2019, 7:46 AM IST
ತುಮಕೂರು: ಸಿದ್ದಗಂಗಾಮಠದ ಕಾಯಕ ಯೋಗಿ, ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ(111ವರ್ಷ) ಸೋಮವಾರ ಶಿವೈಕ್ಯರಾಗಿದ್ದು, ಮಂಗಳವಾರ ಸಂಜೆ ಲಿಂಗಶರೀರದ ಕ್ರಿಯಾ ಸಮಾಧಿಯ ಅಂತಿಮ ವಿಧಿ ವಿಧಾನ ವೀರಶೈವ ಲಿಂಗಾಯತ ಆಗಮೋಕ್ತ ಸಂಪ್ರದಾಯದ ಪ್ರಕಾರ ನೆರವೇರಲಿದೆ.
ಶ್ರೀಗಳ ಕ್ರಿಯಾ ಸಮಾಧಿ ಹೇಗೆ ನಡೆಯುತ್ತೆ?
ಸಿದ್ದಗಂಗಾಶ್ರೀಗಳ ಆಸೆಯಂತೆಯೇ ಕ್ರಿಯಾ ವಿಧಿ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಮೊದಲಿಗೆ ನಾಡಿನ ಪುಣ್ಯ ನದಿಗಳಿಂದ ತರಲಾದ ತೀರ್ಥಗಳಿಂದ ಪಾರ್ಥಿವ ಶರೀರಕ್ಕೆ ಪುಣ್ಯಸ್ನಾನ ನೆರವೇರಿಸಲಾಗುತ್ತದೆ. ಬಳಿಕ ಹೊಸ ಕಾಷಾಯ ವಸ್ತ್ರ ಧಾರಣೆ ಮಾಡಲಾಗುತ್ತದೆ. ತದನಂತರ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮಿಗಳಿಗೆ ಮಠದ ಅಧಿಕಾರ ಹಸ್ತಾಂತರ ನೆರವೇರಿಸಲಾಗುತ್ತದೆ.
ಈ ಎಲ್ಲಾ ವಿಧಿವಿಧಾನ ನಡೆದ ನಂತರ ಪಾರ್ಥಿವ ಶರೀರವನ್ನು ಗದ್ದುಗೆ ಒಳಗೆ ಪದ್ಮಾಸನ ಸ್ಥಿತಿಯಲ್ಲಿ ಕೂರಿಸಲಾಗುತ್ತದೆ. ಕೈಗೆ ಇಷ್ಟಲಿಂಗವನ್ನು ಇಟ್ಟು, ತಂಬಿಟ್ಟು ಚಗಲಿ. ಹಸಿ ಕಡೆಕಾಳು ನೈವೇದ್ಯ ನೆರವೇರಿಸಲಾಗುತ್ತದೆ. ನಂತರ ರುದ್ರಾಕ್ಷ ಚಮಕ ಪಠಣ ಮಾಡುತ್ತ ಶ್ರೀಗಳ ಪಾರ್ಥಿವ ಶರೀರಕ್ಕೆ ಪಂಚಾಮೃತಾಭಿಷೇಕ ಮಾಡಲಾಗುತ್ತದೆ. ನಂತರ ಮಹಾಮಂಗಳಾರತಿ ನಡೆಸಲಾಗುತ್ತದೆ.
ಪಾರ್ಥಿವ ಶರೀರದ ಕೆಳಭಾಗದಲ್ಲಿ ಉಪ್ಪು, ಮೆಣಸು, ಪುಷ್ಪಾಂಜಲಿ ವಿಭೂತಿ ಗಟ್ಟಿಗಳಿಂದ ಪಾರ್ಥಿವ ಶರೀರ ಮುಚ್ಚಲಾಗುತ್ತದೆ. ಪಾರ್ಥಿವ ಶರೀರದ ಶಿರೋ ಭಾಗವನ್ನು ಬಿಲ್ವಪತ್ರೆಗಳಿಂದ ಮುಚ್ಚಲಾಗುವುದು. ಅದರ ಮೇಲೆ ಮಣ್ಣು ಹಾಕಿದ ನಂತರ ಚಪ್ಪಡಿ ಕಲ್ಲನ್ನು ಇಟ್ಟು ಗದ್ದುಗೆ ನಿರ್ಮಾಣ ಮಾಡಲಾಗುತ್ತದೆ. ಗದ್ದುಗೆ ಮೇಲೆ ಲಿಂಗ ಸ್ಥಾಪನೆ ಮಾಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ