ಉತ್ತರ ಪ್ರದೇಶ : ಹೆಚ್ಚಿನ ವರದಕ್ಷಿಣೆಗಾಗಿ ನವ ವಿವಾಹಿತೆಯ ಕೊಲೆ
Team Udayavani, Feb 2, 2019, 6:49 AM IST
ಮುಜಫರನಗರ, ಉತ್ತರ ಪ್ರದೇಶ : ಶಾಮ್ಲಿ ಜಿಲ್ಲೆಯ ಗಢೀ ಪುಖ್ತಾ ಪೊಲೀಸ್ ಠಾಣೆ ವ್ಯಾಪ್ತಿಯ ಪಕ್ಕೀ ಗಢೀ ಗ್ರಾಮದಲ್ಲಿ, ಹೆಚ್ಚಿನ ವರದಕ್ಷಿಣೆಗಾಗಿ ನವ ವಿವಾಹಿತೆಯನ್ನು ಆಕೆಯ ಗಂಡ ಮತ್ತು ಮನೆಯವರು ಸೇರಿಕೊಂಡು ಕೊಂದಿರುವ ಘಟನೆ ವರದಿಯಾಗಿದೆ.
ಮೃತ ನವ ವಿವಾಹಿತೆ ಸನಾ ಖಾನ್ (28) ಒಂಬತ್ತು ತಿಂಗಳ ಹಿಂದೆ ಅರಿಝ್ ಹಸನ್ ಎಂಬಾತನನ್ನು ಮದುವೆಯಾಗಿದ್ದಳು. ಆಕೆಯನ್ನು ಕೊಂದಿರುವ ಆರೋಪದ ಮೇಲೆ ಪೊಲೀಸರು ಇದೀಗ ತಲೆ ಮರೆಸಿಕೊಂಡಿರುವ ಆಕೆಯ ಪತಿ ಮತ್ತು ಆತನ ಐವರು ಸಂಬಂಧಿಗಳ ವಿರುದ್ಧ ಕೊಲೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮೃತ ಮಹಿಳೆಯ ಸಹೋದರ ಹೇಹಾದ್ ಖಾನ್ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ ಆಕೆಯ ಗಂಡ ಮತ್ತು ಮನೆಯವರು 10 ಲಕ್ಷ ರೂ. ವರದಕ್ಷಿಣೆಗಾಗಿ ಕಳೆದ ಹಲವು ತಿಂಗಳಿಂದ ಸನಾಳನ್ನು ದೈಹಿತವಾಗಿ ಮಾನಸಿಕವಾಗಿ ಪೀಡಿಸುತ್ತಿದ್ದರು.
ಸನಾಳ ಸಾವಿನಿಂದ ಉದ್ರಿಕ್ತತೆ ತಲೆದೋರಿದ್ದು ಸಿಟ್ಟಿಗೆದ್ದಿರುವ ಗ್ರಾಮಸ್ಥರು ನವಾಲ್ತಿ ಚೌಕ್ ಸಮೀಪ ರಸ್ತೆ ತಡೆ ನಡೆಸಿ ಕೊಲೆಗಾರರ ತ್ವರಿತ ಬಂಧನವನ್ನು ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ