ತರಾತುರಿಯಲ್ಲಿ ಜನಸ್ಪಂದನ ಸಭೆ ಬೇಡ


Team Udayavani, Feb 3, 2019, 6:17 AM IST

dvg-6.jpg

ಚಿಂಚೋಳಿ: ಸರಕಾರದಿಂದ ಮನೆ ಮಂಜೂರಾಗಿದ್ದರೂ ಎಂಟು ತಿಂಗಳಿಂದ ಮನೆ ಬಿಲ್‌ ಪಾವತಿ ಆಗಿಲ್ಲ. ಬೇರೆಯವರ ಹತ್ತಿರ ಮನೆ ಕಟ್ಟಿಕೊಳ್ಳಲು 40 ಸಾವಿರ ರೂ. ಸಾಲ ತಂದಿದ್ದೇನೆ. ಇತ್ತ ಕಟ್ಟಿದ ಮನೆಯೂ ಹಾಳಾಗುತ್ತಿದೆ ಎಂದು ಖೊದಂಪೂರ ಗ್ರಾಮದ ಶರಣಮ್ಮ ಜಟಿಂಗ ಶಾಸಕ ಡಾ| ಉಮೇಶ ಜಾಧವ್‌ ಎದುರು ಅಳಲು ತೋಡಿಕೊಂಡರು.

ತಾಲೂಕಿನ ಖೋದಂಪೊರ ಗ್ರಾಮದಲ್ಲಿ ಶನಿವಾರ ನಡೆದ ಜನಸ್ಪಂದನಾ ಸಭೆಯಲ್ಲಿ ಮಹಿಳೆಯೊಬ್ಬಳು ತಮ್ಮ ಸಮಸ್ಯೆ ತೋಡಿಕೊಂಡಳು. ಈ ಬಗ್ಗೆ ತಾಪಂ ಇಒ ಮಹಮ್ಮದ ಮೈನೋದ್ದೀನ ಪಟಲಿಕರ ಮಾತನಾಡಿ, ತಾಲೂಕಿಗೆ ಅಂಬೇಡ್ಕರ ವಸತಿ ಯೋಜನೆ, ಬಸವ ವಸತಿ ಯೋಜನೆ ಮತ್ತು ರಾಜೀವಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮಂಜೂರಿಗೊಂಡಿರುವ ಮನೆಗಳ ಬಿಲ್‌ಗ‌ಳು ಪಾವತಿಯಾಗಿಲ್ಲ. ಇದಕ್ಕಾಗಿ ನಿಗಮದಿಂದ ಕಳೆದ ನಾಲ್ಕು ತಿಂಗಳಿಂದ ಅನುದಾನ ಬಂದಿಲ್ಲವೆಂದು ಶಾಸಕರ ಎದುರು ಸಮಸ್ಯೆವಿವರಿಸಿದರು.

ಶಾಸಕ ಡಾ| ಉಮೇಶ ಜಾಧವ್‌ ಮಾತನಾಡಿ, ನಾನು ಶಾಸಕನಾಗಿ ಎಂಟು ತಿಂಗಳು ಕಳೆದಿದೆ. ಜನರ ಸಮಸ್ಯೆ ಇತ್ಯರ್ಥ ಆಗುತ್ತಿಲ್ಲ, ಯಾವುದೇ ಅಭಿವೃದ್ದಿ ಕಾರ್ಯ ಆಗುತ್ತಿಲ್ಲ. ಸಾರ್ವಜನಿಕರ ಕೆಲಸ ಕಾರ್ಯ ಆಗದ್ದಕ್ಕೆ ನಿರಾಸೆಯಾಗಿದ್ದೇನೆ ಎಂದರು.

ಹೊಸ ಮನೆ ಕಟ್ಟಿಕೊಳ್ಳಲು ಹಳೆ ಮನೆ ಕೆಡವಿದ್ದೇನೆ. ಇರಲು ಮನೆ ಇಲ್ಲ, ಚಳಿ ಮಳೆ ಎನ್ನದೇ ಮಕ್ಕಳೊಂದಿಗೆ ಇರಬೇಕಾಗಿದೆ. ಬಡ್ಡಿಯಿಂದ ತಂದ ಹಣ ಕಟ್ಟಲು ಆಗುತ್ತಿಲ್ಲ. ಮನೆ ಮಾರಿಕೊಳ್ಳುವ ಪರಿಸ್ಥತಿ ಇದೆ ಎಂದು ಗ್ರಾಮಸ್ಥ ಘಾಳಪ್ಪ ತಿಳಿಸಿದರು.

ಜನಸ್ಪಂದನಾ ಸಭೆ ಕಾಟಾಚಾರಕ್ಕಾಗಿ ನಡೆಯಬಾರದು. ಎಲ್ಲ ಅಧಿಕಾರಿಗಳು ಭಾಗವಹಿಸಬೇಕು. ಈ ಕುರಿತು ಡಂಗೂರ ಸಾರಬೇಕು ಎಂದು ಸೂಚನೆ ನೀಡಿದರು.

ಖೋದಂಪೂರ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಒಂಭತ್ತು ಬೋರವೆಲ್‌ ಗಳಿದ್ದರೂ ಒಂದೂ ಬೋರವೆಲ್‌ಗ‌ಳಲ್ಲಿ ನೀರು ಬರುತ್ತಿಲ್ಲ ಎಂದು ಗ್ರಾಪಂ ಸದಸ್ಯೆ ಬಂಡಯ್ಯ ಸ್ವಾಮಿ ಶಾಸಕರ ಗಮನಕ್ಕೆ ತಂದರು. ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿಗಾಗಿ ಎಚ್.ಕೆ.ಆರ್‌.ಡಿ ಬಿ.ಯಿಂದ ಅನುದಾನ ನೀಡಿ ಟ್ಯಾಂಕ್‌ ನಿರ್ಮಿಸಿ ಜನರಿಗೆ ಸವಲತ್ತು ನೀಡುತ್ತೇನೆಂದು ಶಾಸಕರು ಭರವಸೆ ನೀಡಿದರು.

ಕೋಡ್ಲಿ ಹೋಬಳಿಯಲ್ಲಿ ಬರುವ ಖೋದಂಪೂರ ಗ್ರಾಮ ಕಂದಾಯ ಇಲಾಖೆ ಸಾಫ್ಟವೇರ್‌ನಲ್ಲಿ ಬರುತ್ತಿಲ್ಲ. ಇದರಿಂದ ಪ್ರಮಾಣ ಪತ್ರ ಸಿಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ತೊಂದರೆ ಪಡಬೇಕಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಕಳೆದ ವರ್ಷ ಚಿಮ್ಮನಚೋಡ ತೊಗರಿ ಖರೀದಿ ಕೇಂದ್ರಕ್ಕೆ 40 ಕ್ಟಿಂಟಾಲ್‌ ತೊಗರಿ ಮಾರಾಟ ಮಾಡಿದ್ದೇನೆ. ಕೇವಲ 30ಕ್ವಿಂಟಾಲ್‌ ತೊಗರಿ ಹಣ ಬಂದಿದೆ ಇನ್ನು 10 ಕ್ವಿಂಟಾಲ್‌ ತೊಗರಿ ಹಣ ವರ್ಷವಾದರೂ ಬಂದಿಲ್ಲ ಎಂದು ರೈತ ಶಿವಪುತ್ರಪ್ಪ ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದಾಗ ಶಾಸಕರು, ಇಂತಹ ಅನೇಕ ಸಮಸ್ಯೆಗಳಿವೆ ತರಾತುರಿಯಲ್ಲಿ ಸಭೆ ನಡೆಸಬಾರದು. ಸಭೆಯನ್ನು ಮುಂದೂಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಡಾ| ಬಾಲರಾಜ, ಗ್ರೇಡ್‌ 2 ತಹಶೀಲ್ದಾರ್‌ ಮಾಣಿಕರಾವ್‌, ಗ್ರಾಪಂ ಅಧ್ಯಕ್ಷ ನಾಗರಾಜಶೆಟ್ಟಿಗೌಡ, ಉಪಾಧ್ಯಕ್ಷೆ ಅನ್ನಪೂರ್ಣ, ಎಇಇ ಮಹ್ಮದ ಅಹೆಮದ, ಎಇಇ ಬಸವರಾಜ ನೇಕಾರ, ಟಿಎಚ್ಒ ಡಾ| ಮಹಮ್ಮದ ಗಫಾರ, ಡಾ| ಧನರಾಜ ಬೊಮ್ಮ, ಎಇಇ ಶರಣಬಸಪ್ಪ ಕೇಶ್ವಾರ, ಅಬಕಾರಿ ಇನ್ಸಪೆಕ್ಟರ್‌ ನಾಜಿಯಾ ಬೇಗಂ, ಜೆಸ್ಕಾಂ ಎಇಇ ಪರಮೇಶ್ವರ ಬಿರಾದಾರ, ಸಹಾಯಕ ಕೃಷಿ ನಿರ್ದೇಶಕ ಅನೀಲಕುಮಾರ ರಾಠೊಡ, ಕೃಷಿ ಅಧಿಕಾರಿ ಶ್ರೀಮಂತ ಮೋತಕಪಳ್ಳಿ, ಕಾಶಿಮ ಪಟೇಲ ಕುಪನೂರ ಇನ್ನಿತರರಿದ್ದರು.

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.