ಮಹಾ ಚುನಾವಣೆ ಮುಗಿಯುವ ತನಕ ರಾಮ ಮಂದಿರ ಅಭಿಯಾನ ಇಲ್ಲ : ವಿಎಚ್ಪಿ
Team Udayavani, Feb 6, 2019, 5:24 AM IST
ಹೊಸದಿಲ್ಲಿ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಅಭಿಯಾನವನ್ನು ವಿಶ್ವ ಹಿಂದೂ ಪರಿಷತ್ ಲೋಕಸಭಾ ಚುನಾವಣೆ ಮುಗಿಯುವ ತನಕ ಅಮಾನತು ಮಾಡಿದೆ.
ರಾಮ ಮಂದಿರ ನಿರ್ಮಾಣವು ಚುನಾವಣೆಯ ವಿಷಯ ಆಗುವುದನ್ನು ತಾನು ಬಯಸುವುದಿಲ್ಲ; ಹಾಗಾಗಿ ರಾಮ ಮಂದಿರ ನಿರ್ಮಾಣ ಅಭಿಯಾನವನ್ನು ತಾನು ಲೋಕಸಭಾ ಚುನಾವಣೆ ಮುಗಿಯುವ ತನಕದ ಅವಧಿಗೆ ಅಮಾನತುಗೊಳಿಸಿದ್ದೇನೆ ಎಂದು ವಿಹಿಂಪ ಹೇಳಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಂಬಂಧ ವಿಹಿಂಪ ಕಳೆದ ಕೆಲವು ತಿಂಗಳಿಂದ ದೇಶಾದ್ಯಂತ ಅಭಿಯಾನ ನಡೆಸುತಿತ್ತು. ಈ ಸಂಬಂಧ ಕಾನೂನು ತರುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುತ್ತಿತ್ತು.
ರಾಮ ಮಂದಿರ ನಿರ್ಮಾಣ ಅಭಿಯಾನದ ಅಂಗವಾಗಿ ವಿಎಚ್ಪಿ ದದೇಶದ ವಿವಿಧಡೆ ರಾಲಿಗಳನ್ನು ನಡೆಸುತ್ತಿತ್ತು ಮತ್ತು ಪಕ್ಷ ಭೇದವಿಲ್ಲದೆ ಸಂಸದರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿತ್ತು.