ಹುಳಿಯಾರು ಜನತೆಗೆ ನಿರಾಸೆ ಮೂಡಿಸಿದ ಬಜೆಟ್
Team Udayavani, Feb 9, 2019, 6:56 AM IST
ಹುಳಿಯಾರು: ಪ್ರತಿ ಬಾರಿಯ ಬಜೆಟ್ ಮಂಡಿಸುವಾಗಲೂ ಹುಳಿಯಾರು ಜನತೆ ನಿರೀಕ್ಷಿಸಿದಂತೆ ಈ ಬಾರಿಯ ಬಜೆಟ್ನಲ್ಲಾದರೂ ಹುಳಿಯಾರನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸ ಬಹುದೆಂದು ನಿರೀಕ್ಷಿಸಿದ್ದರು. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಹುಳಿಯಾರು ಜನತೆಗೆ ನಿರಾಸೆ ಮೂಡಿಸಿದ್ದಾರೆ.
ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ: ಈ ಹಿಂದೆಯೇ ಹುಂಡೇಕರ್, ಗದ್ದಿ ಗೌಡರ್ ಸಮಿತಿ ಸೇರಿದಂತೆ ಹಿಂದಿನ ಎಲ್ಲಾ ಆಯೋಗದ ಸಮಿತಿಗಳು ಹುಳಿಯಾರನ್ನು ತಾಲೂಕು ಆಗುವುದಕ್ಕೆ ಸೂಕ್ತ ಎಂದು ವರದಿ ಮಾಡಿದ್ದರೂ ಇದುವರೆಗೂ ತಾಲೂಕು ಮಾಡುವ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ. 1919ರಲ್ಲಿ ಹುಳಿಯಾರು ತಾಲೂಕು ಕೇಂದ್ರವಾಗಿದ್ದಕ್ಕೆ ದಾಖಲೆ ಪತ್ರಗಳಿವೆ.
ತಾಲೂಕು ಆಗಬೇಕಿತ್ತು: ತಾಲೂಕು ಆಗುವ ಎಲ್ಲ ಅರ್ಹತೆ ಹೊಂದಿದ್ದರೂ ಯಾವ ಸರ್ಕಾರವೂ ಗಂಭೀರವಾಗಿ ಪರಿಗಣಿಸಿಲ್ಲ. ಹೋಬಳಿ ಕೇಂದ್ರವಾಗಿರುವ ಹುಳಿಯಾರು ಸದ್ಯ ತಾಲೂಕು ಕೇಂದ್ರ ಮೀರಿ ಬೆಳೆದಿದ್ದು, ಜನಸಂಖ್ಯಾ ಆಧಾರದ ಮೇಲೆ ತಾಲೂಕು ಆಗ ಬೇಕಿತ್ತು. ಇದಕ್ಕಾಗಿ ಹೋರಾಟ, ಪ್ರತಿಭಟನೆ, ಬಂದ್ ಮಾಡಲಾಗಿತ್ತು.
ಈಗ ಕುಮಾರಸ್ವಾಮಿಯವರು 4 ಹೊಸ ತಾಲೂಕು ರಚಿಸುವುದಾಗಿ ಹೇಳಿದ್ದು, ಅವರೂ ಹುಳಿಯಾರು ಬಗ್ಗೆ ಪ್ರಸ್ತಾಪಿಸದಿರುವುದು ಬಹುಕಾಲದ ಬೇಡಿಕೆಗೆ ಕೊನೆಗೂ ಮಾನ್ಯತೆ ಇಲ್ಲದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Kunigal; ಬೈಕ್ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್
ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ