ಇಮ್ರಾನ್ ಹೊಸ ಪ್ರಧಾನಿ, ಅವರಿಗೊಂದು ಚಾನ್ಸ್ ಕೊಡಬೇಕು: ಮೆಹಬೂಬ
Team Udayavani, Feb 19, 2019, 12:21 PM IST
ಶ್ರೀನಗರ : ”ಪುಲ್ವಾಮಾ ಉಗ್ರ ದಾಳಿಯಲ್ಲಿ ಪಾಕ್ ಶಾಮೀಲಾಗಿರುವುದಕ್ಕೆ ಪುರಾವೆ ಇರುವುದರಿಂದಲೇ ಭಾರತ, ಪಾಕಿಸ್ಥಾನವನ್ನು ಹೊಣೆ ಮಾಡಿದೆ; ನಿಮ್ಮ ದೇಶ ಎಲ್ಲಕ್ಕಿಂತ ಮೊದಲು ನುಡಿದಂತೆ ನಡೆಯಬೇಕು” ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ಗೆ ಚಾಟಿ ಬೀಸಿದ್ದಾರೆ.
”ಪಠಾಣ್ಕೋಟ್ ಉಗ್ರ ದಾಳಿಯ ಬಗ್ಗೆಯೂ ನಿಮಗೆ ಪುರಾವೆ ನೀಡಲಾಗಿತ್ತು. ಆದರೂ ನೀವು ಆ ಬಗ್ಗೆ ಕ್ರಮತೆಗೆದುಕೊಳ್ಳಲಿಲ್ಲ” ಎಂದು ಇಮ್ರಾನ್ ಗೆ ಮೆಹಬೂಬ ತಿರುಗೇಟು ನೀಡಿದ್ದಾರೆ.
”ಹಾಗಿದ್ದರೂ ಇಮ್ರಾನ್ ಖಾನ್ ಈಚೆಗಷ್ಟೇ ದೇಶದ ಪ್ರಧಾನಿ ಆಗಿರುವುದರಿಂದ ಅವರಿಗೆ ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳುವಲ್ಲಿ ಒಂದು ಚಾನ್ಸ್ ಕೊಡಬೇಕು” ಎಂದಿರುವ ಮೆಹಬೂಬ, ”ಪಾಕ್ ವಿರುದ್ಧದ ಯುದ್ಧದ ಮಾತುಗಳು ಮುಂಬರುವ ಚುನಾವಣೆಯಿಂದಾಗಿ ಕೇಳಿ ಬರುತ್ತಿವೆಯೇ ಹೊರತು ಬೇರೇನೂ ಅಲ್ಲ” ಎಂದು ಪರೋಕ್ಷವಾಗಿ ಪ್ರಧಾನಿ ಮೋದಿಗೆ ಟಾಂಗ್ ನೀಡಿದ್ದಾರೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಇಂದು ಬಿಡುಗಡೆ ಮಾಡಿರುವ ವಿಡಿಯೋ ಸಂದೇಶದಲ್ಲಿ, ‘ಪಾಕಿಸ್ಥಾನ ಈ ಪ್ರಾಂತ್ಯದಲ್ಲಿ ಸ್ಥಿರತೆಯನ್ನು ಬಯಸುತ್ತದೆ; ಪುಲ್ವಾಮಾ ಉಗ್ರ ದಾಳಿಯನ್ನು ನಡೆಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಪೂರಕವಿರುವ ಪುರಾವೆಗಳನ್ನು ಹೊಸದಿಲ್ಲಿ ಕೊಟ್ಟರೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್