ಏರೋ ಇಂಡಿಯಾ: ಬಿಎಂಟಿಸಿ ಬಸ್ ಸೇವೆ
Team Udayavani, Feb 20, 2019, 6:27 AM IST
ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಫೆ. 20ರಿಂದ 24ರವರೆಗೆ ನಡೆಯಲಿರುವ “ಏರೋ ಇಂಡಿಯಾ-2019′ ವೀಕ್ಷಿಸಲು ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನಗರದ ವಿವಿಧೆಡೆಯಿಂದ ವೈಮಾನಿಕ ಪ್ರದರ್ಶನ ನಡೆಯುವ ಸ್ಥಳಕ್ಕೆ ಬಿಎಂಟಿಸಿ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಕಲ್ಪಿಸಿದೆ.
ವೈಮಾನಿಕ ಪ್ರದರ್ಶನವು ಬೆಳಗ್ಗೆ 10ಗಂಟೆ ಹಾಗೂ ಮಧ್ಯಾಹ್ನ 2ಕ್ಕೆ ನಡೆಯಲಿದೆ. ಅದಕ್ಕೆ ಪೂರಕವಾಗಿ ನಿತ್ಯ ಬೆಳಗ್ಗೆ 8ರಿಂದ ನಗರದ ವಿವಿಧ ಭಾಗಗಳಿಂದ ಯಲಹಂಕ ವಾಯುನೆಲೆಗೆ ಹೆಚ್ಚುವರಿ ಬಸ್ಗಳು ಕಾರ್ಯಾಚರಣೆ ನಡೆಸಲಿವೆ.
ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಬಿಎಂಟಿಸಿಯ ಯಶವಂತಪುರ ಬಸ್ ನಿಲ್ದಾಣ, ಶಾಂತಿನಗರ, ಜಯನಗರ, ಕೋರಮಂಗಲ ನಿಲ್ದಾಣಗಳು ಸೇರಿದಂತೆ ಮತ್ತಿತರ ಕಡೆಗಳಲ್ಲಿ ಸಾರ್ವಜನಿಕರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚುವರಿ ಬಸ್ಗಳ ವಿವರ
ಎಲ್ಲಿಂದ ಎಲ್ಲಿಗೆ ಪ್ರಯಾಣ ದರ (ರೂ.ಗಳಲ್ಲಿ)
-ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಎಡಿವಿಎ ಗೇಟ್ 40
-ಎಚ್ಎಸ್ಆರ್ ಬಡಾವಣೆ ಎಡಿವಿಎ ಗೇಟ್ 50
-ಎಚ್ಎಎಲ್ ಕಲ್ಯಾಣ ಮಂಟಪ ಎಡಿವಿಎ ಗೇಟ್ 40
-ಬನಶಂಕರಿ ಎಡಿವಿಎ ಗೇಟ್ 45
-ಕೆಂಗೇರಿ ಎಡಿವಿಎ ಗೇಟ್ 45
-ಪೀಣ್ಯ 2ನೇ ಹಂತ ಎಡಿವಿಎ ಗೇಟ್ 40
-ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಎಡಿವಿಎ ಗೇಟ್ 45
-ಟಿನ್ ಫ್ಯಾಕ್ಟರ್ರಿ ಎಡಿವಿಎ ಗೇಟ್ 40
-ಯಶವಂತಪುರ ಬಸ್ ನಿಲ್ದಾಣ ಎಡಿವಿಎ ಗೇಟ್ 40
-ಕೆಂಪೇಗೌಡ ಬಸ್ ನಿಲ್ದಾಣ ಎಡಿವಿಎ ಗೇಟ್ 40
-ಹೆಬ್ಟಾಳ ಎಡಿವಿಎ ಗೇಟ್ 40
ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ವಿಶೇಷ ಸಾರಿಗೆ
ಎಲ್ಲಿಂದ ಎಲ್ಲಿಗೆ ಪ್ರಯಾಣ ದರ (ರೂ.ಗಳಲ್ಲಿ)
-ಕೆಂಪೇಗೌಡ ಬಸ್ ನಿಲ್ದಾಣದಿಂದ ಹುಣಸಮಾರನಹಳ್ಳಿ 160
-ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ/ಹೆಬ್ಟಾಳ ಹುಣಸಮಾರನಹಳ್ಳಿ 160
-ಇತರೆ ಸ್ಥಳಗಳಿಂದ (ಚಂದಾಪುರ, ಬನಶಂಕರಿ ಟಿಟಿಎಂಸಿ, ಐಟಿಪಿಎಲ್, ಸಿಲ್ಕ್ ಬೋರ್ಡ್, ಬಿಟಿಎಂ ಬಡಾವಣೆ, ಹೆಚ್ಎಸ್ಆರ್ ಬಡಾವಣೆ, ಎಲೆಕ್ಟ್ರಾನಿಕ್ -ಸಿಟಿ, ದೊಡ್ಡನೆಕ್ಕುಂದಿ ಮುಂತಾದ ಸ್ಥಳಗಳಿಂದ) ಹುಣಸಮಾರನಹಳ್ಳಿ 215
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ