ಕಿವುಡ-ಮೂಗನಿಂದ ಬೆದರಿಕೆ
Team Udayavani, Feb 21, 2019, 12:30 AM IST
ಹೊಸದಿಲ್ಲಿ: ಪುಲ್ವಾಮಾ ದಾಳಿಯ ಮೂಲಕ ಜಮ್ಮು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಉಗ್ರರು ಸ್ಥಳೀಯ ಯುವಕರನ್ನು ಬಳಸಿಕೊಳ್ಳುತ್ತಿರುವ ಅಂಶ ಬಹಿರಂಗವಾದ ಬೆನ್ನಲ್ಲೇ ಮತ್ತೂಂದು ಆತಂಕಕಾರಿ ವಿಚಾರ ಬಯಲಾಗಿದೆ. ಸ್ಥಳೀಯ ದಿವ್ಯಾಂಗರನ್ನು ಕೂಡ ಉಗ್ರರು ಸೆಳೆದು ಅವರನ್ನೂ ರಕ್ತಪಿಪಾಸುಗಳನ್ನಾಗಿಸುವತ್ತ ಹೆಜ್ಜೆ ಇಟ್ಟಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ, ಕಿವುಡ ಮತ್ತು ಮೂಗ ಉಗ್ರನೊಬ್ಬ ಸಂಜ್ಞಾ ಭಾಷೆಯ (ಸೈನ್ ಲ್ಯಾಂಗ್ವೇಜ್) ಮೂಲಕ ಭಾರತದ ಮೇಲೆ ಮತ್ತಷ್ಟು ದಾಳಿ ಮಾಡುವ ಬೆದರಿಕೆಯೊಡ್ಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.
ಈತನ ಸಂಜ್ಞಾ ಭಾಷೆಯನ್ನು ಮಧ್ಯಪ್ರದೇಶದ ಸಂಜ್ಞಾ ಭಾಷೆ ತಜ್ಞರಾದ ಜ್ಞಾನೇಂದ್ರ ಪುರೋಹಿತ್ ಎಂಬುವರು ಬಿಡಿಸಿ ಹೇಳಿದ್ದು, ಮುಂಬರುವ ದಿನಗಳಲ್ಲಿ ಹೊಸದಿಲ್ಲಿ ಹಾಗೂ ಇತರೆಡೆ ಭೀಕರ ದಾಳಿಗಳನ್ನು ನಡೆಸಲು ಸಂಚು ರೂಪಿಸಲಾಗಿದೆ. ತನಗೆ ದಾಳಿ ಮಾಡುವ ಅವಕಾಶ ಸಿಕ್ಕರೆ, ಕಿವುಡ ಮತ್ತು ಮೂಗರನ್ನು ಬಿಟ್ಟು ಮಿಕ್ಕೆಲ್ಲ ಭಾರತೀಯರನ್ನು ನಿರ್ನಾಮ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುವುದಾಗಿ ತಿಳಿಸಿದ್ದಾರೆ. ಈ ವಿಡಿಯೊ 2016-18ರ ನಡುವೆ ಅಂತರ್ಜಾಲಕ್ಕೆ ಅಪ್ಲೋಡ್ ಆಗಿದ್ದು, ಪುಲ್ವಾಮಾ ದಾಳಿಯ ವೇಳೆ ಮತ್ತೆ ಕಾಣಿಸಿದೆ ಎಂದಿರುವ ಪುರೋಹಿತ್, ಕಣಿವೆ ರಾಜ್ಯದಲ್ಲಿ ಅಂಗವಿಕಲರನ್ನು ಉಗ್ರರು ಯಾವ ರೀತಿ ಹಾಳು ಮಾಡುತ್ತಿದ್ದಾರೆಂದು ಈ ವಿಡಿಯೋ ಸಾಬೀತುಪಡಿಸುತ್ತದೆ ಎಂದಿದ್ದಾರೆ.
ಕಿವುಡ-ಮೂಗರನ್ನು ಬಿಟ್ಟು ಮಿಕ್ಕೆಲ್ಲ ಭಾರತೀಯರನ್ನು ಕೊಲ್ಲುವ ಉದ್ದೇಶ
ದಿಲ್ಲಿ ಸಹಿತ ಭಾರತದ ಇತರೆಡೆ ದಾಳಿ ಮಾಡುವ ಬೆದರಿಕೆ
ಸಂಜ್ಞಾ ಭಾಷೆಯ ವಿಡಿಯೋದಲ್ಲಿ ದಾಳಿಯ ಮುನ್ಸೂಚನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ