“ಸಾಯ್‌’ ಕೋಚ್‌ ಆಗಲಿದ್ದಾರೆ ಆ್ಯತ್ಲೀಟ್‌ ಅಶ್ವಿ‌ನಿ ಅಕ್ಕುಂಜೆ


Team Udayavani, Feb 23, 2019, 12:30 AM IST

z-4.jpg

ಬೆಂಗಳೂರು: ಕಾಮನ್ವೆಲ್ತ್‌, ಏಶ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಆ್ಯತ್ಲೀಟ್‌ ಅಶ್ವಿ‌ನಿ ಅಕ್ಕುಂಜೆ ಈಗ ಕೋಚಿಂಗ್‌ನತ್ತ ಮುಖ ಮಾಡಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌)ದ ಕೋಚ್‌ ಆಗಿ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಸಾಯ್‌ ಪ್ರಕಟಿಸಿದ 14 ಮಂದಿ ತರಬೇತುದಾರರ ಯಾದಿ ಯಲ್ಲಿ ಅಶ್ವಿ‌ನಿ ಕೂಡ ಒಬ್ಬರು. ಈ ವಿಷಯವನ್ನು “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

31 ವರ್ಷದ ಅಶ್ವಿ‌ನಿ ಓರ್ವ ಸಮರ್ಥ ಆ್ಯತ್ಲೀಟ್‌. ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವರು. ಹಲವು ವರ್ಷ ಟ್ರ್ಯಾಕ್‌ನಲ್ಲಿ ಮಿಂಚಿ ಚಿನ್ನದ ಪದಕಗಳನ್ನು ಬೇಟೆಯಾಡಿದ ಸಾಧಕಿ. ಸಾಧನೆಯ ಜತೆಗೆ ಅವಮಾನ, ಅಪನಿಂದನೆ ಕೂಡ. ಉದ್ದೀಪನ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದಿದ್ದ ಅಶ್ವಿ‌ನಿ ನಿಷೇಧಕ್ಕೂ ತುತ್ತಾಗಿದ್ದರು. ನಿಷೇಧದಿಂದ ಹೊರಬಂದ ಅವರು ಪಟಿಯಾಲದಲ್ಲಿ ಆ್ಯತ್ಲೀಟ್‌ ಆಗಿ ಮುಂದುವರಿದರು. ಸದ್ಯ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಿದ್ದರೂ ಮುಂದಿನ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಕೊನೇ ಪ್ರಯತ್ನ ನಡೆಸುವ ಗುರಿ ಹೊಂದಿದ್ದಾರೆ. ಇದಕ್ಕೂ ಮೊದಲು ಕೋಚ್‌ ಆಗಿ ಕೆಲಸಕ್ಕೆ ಸೇರಿಕೊಳ್ಳುವ ಸುಳಿವನ್ನೂ ನೀಡಿದ್ದಾರೆ.

ಬೆಂಗಳೂರಲ್ಲೇ ಕೆಲಸ ನಿರ್ವಹಿಸುವ ಕನಸು
“ಹಲವಾರು ವರ್ಷಗಳಿಂದ ನನ್ನ ಊರು, ರಾಜ್ಯ ತೊರೆದು ಪಟಿಯಾಲದಲ್ಲೇ ಇದ್ದೆ. ಇಷ್ಟು ವರ್ಷ ದೇಶಕ್ಕಾಗಿ ಕುಟುಂಬ, ಮನೆ, ಬಂಧು, ಬಳಗ ಎಲ್ಲದರಿಂದಲೂ ದೂರವಿದ್ದೆ. ಇನ್ನು ಮುಂದಾದರೂ ಸ್ವಲ್ಪ ಸಮಯ ಕುಟುಂಬಕ್ಕೆ ಮೀಸಲಿಡ ಬೇಕು ಅಂದುಕೊಂಡಿದ್ದೇನೆ. ಜತೆಗೆ ರಾಜ್ಯದ ಕ್ರೀಡಾಪಟುಗಳನ್ನು ಬೆಳೆಸಲು ನಿರ್ಧರಿಸಿದ್ದೇನೆ. ಹೀಗಾಗಿ ಬೆಂಗಳೂರಿನ ಸಾಯ್‌ನಲ್ಲಿ ಕೆಲಸ ಸಿಗಲಿ ಎನ್ನುವುದು ನನ್ನ ಆಸೆ’ ಎಂದು ಅಶ್ವಿ‌ನಿ ಹೇಳಿದರು.

ಒಲಿಂಪಿಕ್ಸ್‌ ಕೊನೆಯ ಕನಸು
“ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕನಸು ಕಂಡಿದ್ದೇನೆ. ಗಾಯದಿಂದಾಗಿ ಇದು ಸಾಧ್ಯ ವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಕೊನೆಯ ದಾಗಿ ನನ್ನ ಪ್ರಯತ್ನ ನಡೆಸುತ್ತೇನೆ. ಇದರಲ್ಲಿ ವಿಫ‌ಲ ಳಾದರೆ ಬೇಸರವಾಗುವುದಿಲ್ಲ. ಪ್ರಯತ್ನಿಸಿದ ಸಂತೋಷ ನನಗಿರುತ್ತದೆ’ ಎನ್ನುತ್ತಾರೆ ಅಶ್ವಿ‌ನಿ. 

ಹೊಸ ಇನ್ನಿಂಗ್ಸ್‌, ಹೊಸ ಸವಾಲು
“ಬ್ಯಾಂಕ್‌ ಮ್ಯಾನೇಜರ್‌ ಹುದ್ದೆ ತೊರೆದು ಕೋಚ್‌ ಆಗಬೇಕೆಂದುಕೊಂಡಿರುವೆ. ಭವಿಷ್ಯದ ಆ್ಯತ್ಲೀಟ್‌ಗಳನ್ನು ರೂಪಿಸುವುದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡುವುದು ನನ್ನ ಜೀವನದ ಬಹುದೊಡ್ಡ ಕನಸು. ಕೆಲವರು ನನಗೆ ಅಕಾಡೆಮಿ ಆರಂಭಿಸಿದರೆ ಒಳ್ಳೆಯದು ಎನ್ನುವ ಸಲಹೆ ನೀಡಿದರು. ಆದರೆ ನಾನು ಅಕಾಡೆಮಿ ತೆರೆದು ಹಣ ಸಂಪಾದಿಸಲು ಇಷ್ಟಪಡುವುದಿಲ್ಲ. ಮುಂದಿನೆರಡು ತಿಂಗಳ ಒಳಗಾಗಿ ಸಾಯ್‌ ಕೋಚ್‌ ಆಗಿ ಕೆಲಸಕ್ಕೆ ಸೇರುವುದು ಬಹುತೇಕ ಖಚಿತಗೊಂಡಿದೆ. ಅದಕ್ಕೂ ಮೊದಲು ನಾನು ಕೆಲಸ ನಿರ್ವಹಿಸುತ್ತಿರುವ ಬ್ಯಾಂಕ್‌ನಿಂದ ಎನ್‌ಒಸಿ (ನಿರಾಕ್ಷೇಪಣಾ ಪತ್ರ) ಸಿಗಬೇಕಿದೆ’                           
ಅಶ್ವಿ‌ನಿ ಅಕ್ಕುಂಜೆ

ಹೇಮಂತ್‌ ಸಂಪಾಜೆ

ಟಾಪ್ ನ್ಯೂಸ್

kiccha sudeepa gave update about max

MAX; ಅಭಿಮಾನಿಗಳಿಗೆ ಸುದೀಪ್‌ ಅಪ್ಡೇಟ್

2-chikkamagaluru

Chikkamagaluru: ಗುಂಡೇಟಿನಿಂದ ಯುವಕ ಸಾವು: ಹೆಚ್ಚಿದ ಅನುಮಾನ

Anjali Ambigera Case; ದಾವಣಗೆರೆಯಲ್ಲಿ ಹಂತಕನನ್ನು ಬಂಧಿಸಿದ ಪೊಲೀಸರು

Anjali Ambigera Case; ದಾವಣಗೆರೆಯಲ್ಲಿ ಹಂತಕನನ್ನು ಬಂಧಿಸಿದ ಪೊಲೀಸರು

ICC T20 world cup 2024 warm up match schedule

T20 World Cup: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಒಂದೇ ಪಂದ್ಯ

Spicy Chip Challenge; ಅತ್ಯಂತ ಖಾರದ ಚಿಪ್ಸ್ ತಿಂದ 14ರ ಬಾಲಕ ಸಾವು!

Spicy Chip Challenge; ಅತ್ಯಂತ ಖಾರದ ಚಿಪ್ಸ್ ತಿಂದ 14ರ ಬಾಲಕ ಸಾವು!

Mumbai Hoarding Collapse; The main accused caught by the police in Rajasthan

Mumbai Hoarding Collapse; ರಾಜಸ್ಥಾನದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಪ್ರಮುಖ ಆರೋಪಿ

1-24-friday

Daily Horoscope: ವಿವಾಹಾಸಕ್ತರಿಗೆ ಯೋಗ್ಯ ಬಾಳ ಸಂಗಾತಿ ಲಭಿಸುವ ಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ICC T20 world cup 2024 warm up match schedule

T20 World Cup: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಒಂದೇ ಪಂದ್ಯ

IPL 2024: ಅಂತಿಮ ಪಂದ್ಯದಲ್ಲಿ ಮುಂಬೈಗೆ ಲಕ್ನೋ ಎದುರಾಳಿ

IPL 2024: ಅಂತಿಮ ಪಂದ್ಯದಲ್ಲಿ ಮುಂಬೈಗೆ ಲಕ್ನೋ ಎದುರಾಳಿ

32

Match fixing: ಭಾರತದ ಪ್ರಜೆಗಳಿಬ್ಬರ ಪಾಸ್‌ಪೋರ್ಟ್‌ ವಶಕ್ಕೆ ಆದೇಶ

30

ICC T20 Rankings : ಭಾರತ, ಸೂರ್ಯಕುಮಾರ್‌ ನಂ.1

Paris Olympics: ಟೇಬಲ್‌ ಟೆನಿಸ್‌; ಶರತ್‌, ಮಣಿಕಾ ನೇತೃತ್ವ

Paris Olympics: ಟೇಬಲ್‌ ಟೆನಿಸ್‌; ಶರತ್‌, ಮಣಿಕಾ ನೇತೃತ್ವ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

kiccha sudeepa gave update about max

MAX; ಅಭಿಮಾನಿಗಳಿಗೆ ಸುದೀಪ್‌ ಅಪ್ಡೇಟ್

2-chikkamagaluru

Chikkamagaluru: ಗುಂಡೇಟಿನಿಂದ ಯುವಕ ಸಾವು: ಹೆಚ್ಚಿದ ಅನುಮಾನ

Anjali Ambigera Case; ದಾವಣಗೆರೆಯಲ್ಲಿ ಹಂತಕನನ್ನು ಬಂಧಿಸಿದ ಪೊಲೀಸರು

Anjali Ambigera Case; ದಾವಣಗೆರೆಯಲ್ಲಿ ಹಂತಕನನ್ನು ಬಂಧಿಸಿದ ಪೊಲೀಸರು

ICC T20 world cup 2024 warm up match schedule

T20 World Cup: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಒಂದೇ ಪಂದ್ಯ

Spicy Chip Challenge; ಅತ್ಯಂತ ಖಾರದ ಚಿಪ್ಸ್ ತಿಂದ 14ರ ಬಾಲಕ ಸಾವು!

Spicy Chip Challenge; ಅತ್ಯಂತ ಖಾರದ ಚಿಪ್ಸ್ ತಿಂದ 14ರ ಬಾಲಕ ಸಾವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.