ಬಂಗಾಲವನ್ನು ಬಗ್ಗುಬಡಿದ ಕರ್ನಾಟಕ


Team Udayavani, Feb 23, 2019, 12:30 AM IST

z-9.jpg

ಕಟಕ್‌: ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಕರ್ನಾಟಕ ಸತತ 2ನೇ ಗೆಲುವು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಅಸ್ಸಾಂಗೆ ಸೋಲುಣಿಸಿದ್ದ ಮನೀಷ್‌ ಪಾಂಡೆ ಪಡೆ, ಶುಕ್ರವಾರದ ದ್ವಿತೀಯ ಪಂದ್ಯದಲ್ಲಿ ಬಂಗಾಲವನ್ನು 9 ವಿಕೆಟ್‌ಗಳಿಂದ ಭರ್ಜರಿಯಾಗಿ ಮಣಿಸಿತು.

ಕಟಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಬಂಗಾಲ 19.4 ಓವರ್‌ಗಳಲ್ಲಿ 131 ರನ್ನುಗಳಿಗೆ ಕುಸಿದರೆ, ಕರ್ನಾಟಕ 15.5 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 134 ರನ್‌ ಪೇರಿಸಿ ಗೆದ್ದು ಬಂದಿತು. ರವಿವಾರ ನಡೆಯುವ “ಡಿ’ ವಿಭಾಗದ ತನ್ನ 3ನೇ ಪಂದ್ಯದಲ್ಲಿ ಕರ್ನಾಟಕ ತಂಡ ದುರ್ಬಲ ಅರುಣಾಚಲ ಪ್ರದೇಶ ವಿರುದ್ಧ ಆಡಲಿದೆ.

ಕದಂ-ಶರತ್‌ ಶತಕದ ಜತೆಯಾಟ
ಅಭಿಮನ್ಯು ಮಿಥುನ್‌ (22ಕ್ಕೆ 3), ವಿನಯ್‌ ಕುಮಾರ್‌ (18ಕ್ಕೆ 2) ಮತ್ತು ಮನೋಜ್‌ ಭಾಂಡಗೆ (18ಕ್ಕೆ 2) ಬಂಗಾಲವನ್ನು ಸಾಮಾನ್ಯ ಮೊತ್ತಕ್ಕೆ ಹಿಡಿದು ನಿಲ್ಲಿಸಿದ ಬಳಿಕ ಆರಂಭಿಕರಾದ ರೋಹನ್‌ ಕದಂ ಮತ್ತು ಬಿ.ಆರ್‌. ಶರತ್‌ ಜೋಡಿಯ ಬ್ಯಾಟಿಂಗ್‌ ವೈಭವ ಮೊದಲ್ಗೊಂಡಿತು. ಬಂಗಾಲ ಬೌಲರ್‌ಗಳ ಮೇಲೇರಿ ಹೋದ ಇವರಿಬ್ಬರೂ ಸ್ಫೋಟಕ ಆಟದ ಮೂಲಕ ರಂಜಿಸತೊಡಗಿದರು. ಈ ಬ್ಯಾಟಿಂಗ್‌ ಆರ್ಭಟ ಕಂಡಾಗ ಇವರಿಬ್ಬರೇ ಸೇರಿಕೊಂಡು ಕರ್ನಾಟಕವನ್ನು ಗೆಲ್ಲಿಸುವ ಸಾಧ್ಯತೆಯೂ ಗೋಚರಿಸಿತ್ತು.

ರೋಹನ್‌-ಶರತ್‌ 14.3 ಓವರ್‌ಗಳ ಪ್ರಚಂಡ ಜತೆಯಾಟದಲ್ಲಿ 117 ರನ್‌ ಪೇರಿಸಿ ದರು. ಆಗ 37 ಎಸೆತಗಳಿಂದ 50 ರನ್‌ (9 ಬೌಂಡರಿ) ಹೊಡೆದ ಶರತ್‌ ಔಟಾದರು. ಈ ಏಕೈಕ ಯಶಸ್ಸು ಪ್ರದಿಪ್ತ ಪ್ರಾಮಾಣಿಕ್‌ ಪಾಲಾ ಯಿತು. ರೋಹನ್‌ ಕದಂ ಔಟಾಗದೆ 81 ರನ್‌ ಬಾರಿಸಿದರು. 55 ಎಸೆತ ಎದುರಿಸಿದ ಕದಂ 10 ಬೌಂಡರಿ ಜತೆಗೆ 2 ಸಿಕ್ಸರ್‌ ಬಾರಿಸಿ ಮೆರೆದರು.

ಬಂಗಾಲ ಪರ ಆರಂಭಕಾರ ಶ್ರೀವತ್ಸ ಗೋಸ್ವಾಮಿ 40, ನಾಯಕ ಮನೋಜ್‌ ತಿವಾರಿ 36 ರನ್‌ ಹೊಡೆದರು. 
ಮೊದಲ ಪಂದ್ಯದಲ್ಲಿ ದುರ್ಬಲ ಮಿಜೋರಂ ಮೇಲೆ ಸವಾರಿ ಮಾಡಿದ ಬಂಗಾಲ 159 ರನ್ನುಗಳ ಬೃಹತ್‌ ಗೆಲುವು ದಾಖಲಿಸಿತ್ತು.

ಸಂಕ್ಷಿಪ್ತ ಸ್ಕೋರ್‌: ಬಂಗಾಲ-19.4 ಓವರ್‌ಗಳಲ್ಲಿ 131 (ಗೋಸ್ವಾಮಿ 40, ತಿವಾರಿ 36, ಮಿಥುನ್‌ 22ಕ್ಕೆ 3, ವಿನಯ್‌ 18ಕ್ಕೆ 2, ಭಾಂಡಗೆ 18ಕ್ಕೆ 2). ಕರ್ನಾಟಕ-15.5 ಓವರ್‌ಗಳಲ್ಲಿ ಒಂದು ವಿಕೆಟಿಗೆ 134 (ಕದಂ ಔಟಾಗದೆ 81. ಶರತ್‌ 50).

ಟಾಪ್ ನ್ಯೂಸ್

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.