ಮಹಾರಾಷ್ಟ್ರದತ್ತ ತೆರಳಲು ಮೀನುಗಾರರು ಹಿಂದೇಟು


Team Udayavani, Feb 24, 2019, 1:00 AM IST

maharastra.jpg

ಮಲ್ಪೆ: ಸುವರ್ಣ ತ್ರಿಭುಜ ಬೋಟ್‌ ನಾಪತ್ತೆ ಪ್ರಕರಣದ ಬಳಿಕ ರಾಜ್ಯ ಕರಾವಳಿಯ ಮೀನುಗಾರರು ಮಹಾರಾಷ್ಟ್ರದತ್ತ¤ ತೆರಳಲು ಹಿಂದೇಟು ಹಾಕುತ್ತಿರುವ ಪರಿಣಾಮ ಸ್ಥಳೀಯ ಮೀನು ಮಾರುಕಟ್ಟೆಯೂ ಕಳೆಗುಂದಿದೆ.

ಒಂದೆಡೆ ಮೀನು ಕೊರತೆ ಉದ್ಭವಿಸಿ ಮಾರುಕಟ್ಟೆಯಲ್ಲಿ ಲಭ್ಯ ಮೀನಿನ ದರ ದುಬಾರಿಯಾಗಿದ್ದರೆ, ಮತ್ತೂಂದೆಡೆ ಮೀನುಗಾರರು ಕನಿಷ್ಠ ಸಂಪಾದನೆಗೂ ಸಂಕಷ್ಟ ಎದುರಿಸುವಂತಾಗಿದೆ. ದೋಣಿಗಳೆಲ್ಲಾ ದಡ ಸೇರಿವೆ.

ಸುವರ್ಣ ತ್ರಿಭುಜ ಬೋಟ್‌ ಪ್ರಕರಣದ ಮೊದಲು 1000 ದಿಂದ 1200 ರಷ್ಟು ದೋಣಿಗಳು ಮಹಾರಾಷ್ಟ್ರದತ್ತ ಆಳ ಸಮುದ್ರ ಮೀನುಗಾರಿಕೆಗೆ ತೆರಳುತ್ತಿದ್ದವು.ಯಾಕೆಂದರೆ ಕರ್ನಾಟಕ, ಗೋವಾದ ಸಮುದ್ರದಲ್ಲಿ ಆಳದ ಪ್ರದೇಶಗಳು (ಗುಂಡಿ ಪ್ರದೇಶದಲ್ಲಿ ಸಿಗುವ ಮೀನುಗಳ ಪ್ರಮಾಣ ಹೆಚ್ಚು)ಸಿಗಬೇಕೆಂದರೆ ಸುಮಾರು 20 ರಿಂದ 24 ನಾಟಿಕಲ್‌ ಮೈಲು ದೂರ ಸಾಗಬೇಕು. ಮಹಾರಾಷ್ಟ್ರ ಪ್ರದೇಶದಲ್ಲಿ 12 ನಾಟಿಕಲ್‌ ಮೈಲ್‌ ಸಾಗಿದರೆ ಸಾಕು. ಹತ್ತರಿಂದ ಹನ್ನೊಂದು ದಿನಗಳ ಮೀನುಗಾರಿಕೆಯಲ್ಲಿ ಸುಮಾರು 5ರಿಂದ 7 ಲಕ್ಷ ರೂ. ಮೌಲ್ಯದ ಮೀನು ಸಿಗುತ್ತಿತ್ತು. ಇದಕ್ಕಾಗಿ ಕೆಲವೊಮ್ಮೆ ಆ ಭಾಗದ ಮೀನುಗಾರರ ಕಿರುಕುಳ, ಅಧಿಕಾರಿಗಳಿಂದ ದಂಡ ಇತ್ಯಾದಿ ಸಂಕಷ್ಟವನ್ನೂ ಎದುರಿಸಬೇಕಾಗುತ್ತಿತ್ತು. ಈಗ ಬೋಟ್‌ ನಾಪತ್ತೆ ಬಳಿಕ ಆ ಭಾಗಕ್ಕೆ ತೆರಳುವವರು ಕಡಿಮೆ ಎನ್ನುತ್ತಾರೆ ಕೆಲವರು.

ಪಸೀìನ್‌ ಮೀನುಗಾರಿಕೆ ಸ್ಥಗಿತ
ಅತ್ತ ದಡದಲ್ಲಿ ಶೇ. 30 ರಷ್ಟು ಆಳ ಸಮುದ್ರ ಮೀನುಗಾರಿಕೆಯ ಬೋಟುಗಳು ಲಂಗರು ಹಾಕಿದ್ದರೆ, ಇತ್ತ
ಮೀನಿನ ಅಲಭ್ಯತೆಯಿಂದ ಪಸೀìನ್‌ ಮೀನುಗಾರಿಕೆಯೂ ಸ್ಥಗಿತಗೊಂಡಿದೆ. ಡೀಸೆಲ್‌ ದರದ ಹೊರೆಗೂ ಸಿಗುವ ಮೀನಿನ ಪ್ರಮಾಣಕ್ಕೂ ಸರಿಹೊಂದದೇ ನಷ್ಟವಾಗುತ್ತಿದೆ. ಜತೆಗೆ ಸಣ್ಣಟ್ರಾಲ್‌ದೋಣಿ, ತ್ರಿಸೆವೆಂಟಿ ಬೋಟ್‌ಗಳಿಗೂ ಸಾಕಷ್ಟು ಪ್ರಮಾಣದಲ್ಲಿ ಮೀನು ಸಿಗುತ್ತಿಲ್ಲ ಎಂಬುದು ಹಲವರ ಕೊರಗು.

ಮೀನಿನ ದರ ಹೆಚ್ಚಳ
ಇದರ ಬೆನ್ನಿಗೇ ರಾಜ್ಯದ ಬಂದರುಗಳಲ್ಲದೇ, ಕೇರಳ ಹಾಗೂ ತಮಿಳುನಾಡಿನ ಬಂದರುಗಳಲ್ಲೂ ಸಾಕಷ್ಟು ಮೀನುಗಳು ಲಭ್ಯವಾಗುತ್ತಿಲ್ಲ. ಪ್ರತಿಕೂಲ ಹವಾಮಾನ, ಮೀನು ಇಳುವರಿಯ ಕುಸಿತವೂ ಮೀನು ಅಭಾವಕ್ಕೆ ಕಾರಣ ಎನ್ನಲಾಗುತ್ತಿದೆ. ಹಾಗಾಗಿ ಮೀನಿನ ದರ ವಿಪರೀತ ಏರಿಕೆಯಾಗಿದೆ.

ಬೋಟಿನಿಂದ ನೇರ ವ್ಯಾಪಾರಸ್ಥರಿಗೆ ರಖಂ ಆಗಿ ಮಾರಾಟವಾಗುವ ದರ ತಿಂಗಳ ಹಿಂದೆ ದೊಡ್ಡ ಬಂಗುಡೆಗೆ ಕೆ.ಜಿ.ಗೆ 90 ರೂ. ಇತ್ತು. ಅದೀಗ 130ರಿಂದ 140 ರೂ. ಇದೆ. 60ರೂ. ಇದ್ದ ಸಣ್ಣ ಬಂಗುಡೆಗೆ 80ರೂ., 2ಕೆಜಿ. ಮೇಲ್ಪಟ್ಟ ತೂಕದ ಅಂಜಲ್‌ ಮೀನಿಗೆ 650ರಿಂದ 700ರೂ., ಅದಕ್ಕಿಂತ ಕಡಿಮೆ ತೂಕದ್ದಕ್ಕೆ 500ರಿಂದ 550 ರೂ. ದರವಿದೆ. ಹಿಂದೆ 110 ರೂ. ಇದ್ದ ಅಡೆಮೀನಿಗೆ 150ರೂ. ಆಗಿದೆ.

700 ರೂ. ಇದ್ದ ಬಿಳಿ ಪಾಂಪ್ರಟ್‌ಗೆ 1000 ರೂ., 400ರೂ. ಕಪ್ಪು ಪಾಂಪ್ರಟ್‌ 500 ರಿಂದ 550 ರೂ. ಗೆ ಏರಿದೆ. ಈ ಹಿಂದೆ ಕೆ. ಜಿ 30 ರೂ.ಗಿಂತ ಹೆಚ್ಚಾಗದ ಸಣ್ಣಗಾತ್ರದ ರಾಣಿ ಮೀನು 55ರೂ. ವರೆಗೆ ಏರಿಕೆ ಕಂಡಿದೆ. ಪಟ್ಟೆರಾಣಿಗೆ 80 ರಿಂದ 90 ರೂ. ಇದೆ.

ಕರಾವಳಿಯಲ್ಲಿ ಮೀನಿನ ಅಭಾವದ ಜತೆಗೆ ಇಂಧನ ದರ ಹೊರೆಯೂ ಹೆಚ್ಚಿದೆ. ಕೆಲವು ಬೋಟ್‌ಗಳು ಕನಿಷ್ಟ ಸಂಪಾದನೆ ಇಲ್ಲದೆ ನಷ್ಟ ಎದುರಿಸುತ್ತಿವೆ. ಮೀನಿನ ಇಳುವರಿ ಕಡಿಮೆಯಾಗಿದ್ದರಿಂದ ಸಣ್ಣಪುಟ್ಟ ಮೀನಿಗೂ ಬೇಡಿಕೆ ಬಂದಿದೆ.
– ಸತೀಶ್‌ ಕುಂದರ್‌, ಅಧ್ಯಕ್ಷರು ಮಲ್ಪೆ ಮೀನುಗಾರರ ಸಂಘ

ದೇಶದ ಕರಾವಳಿ ಭಾಗದ ಎಲ್ಲ ಬಂದರುಗಳಲ್ಲಿ ಮೀನಿನ ಕೊರತೆ ಇದೆ. ಕೇರಳದಲ್ಲಿ ಹೆಚ್ಚು ಮೀನು ಮಾರುಕಟ್ಟೆ ಇರುವ ಕಾರಣ ಮಲ್ಪೆ ಬಂದರಿನ ಶೇ. 90ರಷ್ಟು ಮೀನು ಅಲ್ಲಿಗೆ ರವಾನೆಯಾಗುತ್ತದೆ. ಈಗ ಅಲ್ಲಿಯೂ ಮೀನಿನ ಪ್ರಮಾಣ ಕುಸಿದಿದೆ.
– ಸಾಧು ಸಾಲ್ಯಾನ್‌, ಅಧ್ಯಕ್ಷರು ಮಲ್ಪೆ ಮೀನು ವ್ಯಾಪಾರಸ್ಥರ ಸಂಘ

– ನಟರಾಜ್‌ ಮಲ್ಪೆ

ಟಾಪ್ ನ್ಯೂಸ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.