ವಾಹನಗಳಿಗೆ ಶೀಘ್ರ ಹೈ ಸೆಕ್ಯುರಿಟಿ ನಂ. ಪ್ಲೇಟ್‌!


Team Udayavani, Feb 24, 2019, 12:54 AM IST

7.jpg

ಬೆಂಗಳೂರು: ಈಗಾಗಲೇ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಾಹನಗಳಿಗೆ ಅಧಿಕ ಭದ್ರತೆ ಒದಗಿಸುವ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್‌ ಪ್ಲೇಟ್‌ (ಎಚ್‌ಎಸ್‌ಆರ್‌ಪಿ) ರಾಜ್ಯದಲ್ಲೂ ಏಪ್ರಿಲ್‌ ಒಂದರಿಂದ ಜಾರಿಗೆ ಬರಲಿದೆ. ವಾಹನ ಕಳ್ಳತನ ತಡೆಯಲು ಅಥವಾ ಕಳೆದ ಹೋದ ವಾಹನಗಳನ್ನು ಪತ್ತೆ ಹಚ್ಚಲು ಈ ವ್ಯವಸ್ಥೆ ಸಹಕಾರಿಯಾಗಿದೆ. ಕಳೆದ ಡಿಸೆಂಬರ್‌ನಲ್ಲೇ ಕೇಂದ್ರ ಸರ್ಕಾರ 1989ರ ಕೇಂದ್ರೀಯ ಮೋಟಾರು ವಾಹನ ನಿಯಮಾವಳಿಗೆ ತಿದ್ದುಪಡಿ ತಂದು ಈ ಕಾಯ್ದೆಯನ್ನು ಜಾರಿಗೊಳಿಸಿದೆ.

ಹೀಗಾಗಿ ಏ.1ರ ನಂತರ ಮಾರಾಟವಾಗುವ ಎಲ್ಲಾ ವಾಹನಗಳಲ್ಲೂ ಕಡ್ಡಾಯವಾಗಿ ಈ ನಂಬರ್‌ ಪ್ಲೇಟ್‌ ಇರಲೇಬೇಕು. ಹೊಸ ವ್ಯವಸ್ಥೆಯಲ್ಲಿ ಮೂರು ನಂಬರ್‌ ಪ್ಲೇಟ್‌ಗಳಿರುತ್ತವೆ. ಅಂದರೆ, ವಾಹನದ ಹಿಂಭಾಗ, ಮುಂಭಾಗದ ಜತೆಗೆ ವಾಹನದ ಒಳಗೂ ನಂಬರ್‌ ಪ್ಲೇಟ್‌ ಇರಲಿದೆ. ಎಚ್‌ಎಸ್‌ಆರ್‌ಪಿ ಜತೆಗೆ ವಾಹನದ ಸಂಪೂರ್ಣ ಮಾಹಿತಿ ಇರುವ ಸ್ಟಿಕರ್‌ ಅನ್ನು ಅಂಟಿ ಸಲಾಗುತ್ತಿದ್ದು, ಈ ಸ್ಟಿಕ್ಕರ್‌ ಅನ್ನು ಸ್ಕ್ಯಾನ್‌ ಮಾಡಿದಾಗ ವಾಹನದ ಸಮಗ್ರ ಮಾಹಿತಿ ಲಭಿಸುತ್ತದೆ.

ಹಳೇ ವಾಹನಗಳಿಗೂ ಅವಕಾಶ: ಪ್ರಸಕ್ತ ರಸ್ತೆಯಲ್ಲಿ ಓಡಾಡುವ ವಾಹನಗಳಿಗೂ ಈ ಹೊಸ ಮಾದರಿಯ ನಂಬರ್‌ ಪ್ಲೇಟ್‌ ಅಳವಡಿಸಲು ಅವಕಾಶವಿದೆ. ಇದಕ್ಕೆ ಮಾಡಬೇಕಾಗಿರುವುದು ಇಷ್ಟೇ, ವಾಹನದ ಹಳೇ ನೋಂದಣಿ ಸಂಖ್ಯೆಯನ್ನು ಕೊಟ್ಟು, ಹೊಸದನ್ನು ಪಡೆಯಬೇಕು. ಆದರೆ, ಹಳೇ ವಾಹನಗಳಿಗೆ ಬೇಕೇ ಅಥವಾ ಬೇಡವೇ ಎಂಬುದನ್ನು ತೀರ್ಮಾ ನಿಸುವ ಅಧಿಕಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ಎಚ್‌ಎಸ್‌ಆರ್‌ಪಿ ಅಳವಡಿಕೆಯನ್ನು ವಾಹನ ಉತ್ಪಾದಕರು ಡೀಲರ್‌ಗಳ ಮೂಲಕ ಜಾರಿಗೊಳಿಸ ಬೇಕಾಗಿರುವುದರಿಂದ ವಾಹನ ಖರೀದಿಸುವ ಗ್ರಾಹಕರು ಇದಕ್ಕಾಗಿ ಹೆಚ್ಚುವರಿ ಹಣ ಪಾವತಿಸಬೇಕಾಗಿಲ್ಲ. ವಾಹನದ ಮೂಲ ಬೆಲೆಯ ಇನ್‌ವಾಯ್ಸನಲ್ಲಿಯೇ ಈ ನಂಬರ್‌ ಪ್ಲೇಟ್‌ನ ಖರ್ಚು ಸೇರಿರುತ್ತದೆ.

15 ವರ್ಷ ಗ್ಯಾರಂಟಿ: ಎಚ್‌ಎಸ್‌ಆರ್‌ಪಿಗೆ 15 ವರ್ಷಗಳ ಗ್ಯಾರಂಟಿ ಇದೆ. ಅದು ಒಡೆದು ಹೋದರೆ, ಅಂಕಿ ಅಂಶಗಳು ಅಳಿಸಿ ಹೋದರೆ ಅಥವಾ ಇತರ ಯಾವುದೇ ನೈಸರ್ಗಿಕ ಕಾರಣಗಳಿಂದ ಹಾನಿಗೊಳಗಾದರೆ ಅದಕ್ಕೆ  ಫಿಟ್‌ ಮಾಡಿದ ಡೀಲರ್‌ದಾರರೇ
ಜವಾಬ್ದಾರರು. 

2005 ರಲ್ಲಿ ಆದೇಶ: 2002 ರಲ್ಲಿ ಭಯೋತ್ಪಾದಕರು ನಕಲಿ ನಂಬರ್‌ ಪ್ಲೇಟ್‌ ಬಳಸಿದ ವಾಹನದಲ್ಲಿ ಬಂದು ಸಂಸತ್ತಿನ ಮೇಲೆ ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟು ವಾಹನಗಳಿಗೆ ನಕಲಿ ಮಾಡಲಾಗದ, ಅಧಿಕ ಭದ್ರತೆ ಇರುವ ನಂಬರ್‌ ಪ್ಲೇಟ್‌ನ್ನು 2005 ರೊಳಗೆ ವಿತರಿಸಬೇಕೆಂದು ಸೂಚಿಸಿತ್ತು. ಬೆರಳೆಣಿಕೆಯ ರಾಜ್ಯಗಳು ಮಾತ್ರ ಈ ಆದೇಶವನ್ನು ಪಾಲಿಸಿದ್ದವು. ಇದೀಗ 14 ವರ್ಷಗಳ ಬಳಿಕ ಕರ್ನಾಟಕದಲ್ಲಿ ಇದು ಜಾರಿಗೆ ಬರುತ್ತಿದೆ.

ನಂಬರ್‌ ಪ್ಲೇಟಿನಲ್ಲಿ ಏನಿರುತ್ತೆ?

ನಕಲು ತಡೆಯಲು ಎರಡೂ ನಂಬರ್‌ ಪ್ಲೇಟ್‌ಗಳ ಮೇಲ್ಗಡೆ ಎಡ ಭಾಗದಲ್ಲಿ
ಕ್ರೋಮಿಯಂ ಆಧಾರಿತ ಹೋಲೋಗ್ರಾಂ ಅಳವಡಿಕೆ

ನೀಲಿ ಬಣ್ಣದ ಅಶೋಕ ಚಕ್ರವನ್ನು ಹೊಂದಿರುತ್ತದೆ.

ಕೆಳಗಿನ ಎಡಮೂಲೆಯಲ್ಲಿ ಹತ್ತು ಡಿಜಿಟ್‌ನ ಶಾಶ್ವತ ಗುರುತು ಸಂಖ್ಯೆ (ಪರ್ಮನೆಂಟ್‌ ಐಡೆಂಟಿಫಿಕೇಶನ್‌ ನಂಬರ್‌- ಪಿನ್‌)

„ ಅಂಕೆ ಸಂಖ್ಯೆಗಳ ಮೇಲೆ ಹೊಟ್‌ ಸ್ಟಾಂಪಿಂಗ್‌ ಫಿಲಂ ಅಂಟಿಸಲಾಗುತ್ತಿದ್ದು, ಅದರಲ್ಲಿ “ಇಂಡಿಯಾ’ ಎಂಬುದಾಗಿ ಇಂಗ್ಲಿಷ್‌ನಲ್ಲಿ ಬರೆಯಲಾಗಿರುತ್ತದೆ.

 ಈ ಎರಡು ನಂಬರ್‌ ಪ್ಲೇಟ್‌ಗಳ ಹೊರತಾಗಿ ವಾಹನದ ಒಳಗೆ ವಿಂಡ್‌ಶೀಲ್ಡ್‌ ನ ಕೆಳಗಡೆ ಎಡ ಬದಿಯಲ್ಲಿ ಕ್ರೋಮಿಯಂ ಹೋಲೋಗ್ರಾಂ ಸ್ಟಿಕರನ್ನು ಒಳಗೊಂಡ 3ನೇ ರಿಜಿಸ್ಟೇಶನ್‌ ಪ್ಲೇಟ್‌ ಅಳವಡಿಸಲಾಗುತ್ತದೆ. ರಿಜಿಸ್ಟ್ರೇಶನ್‌ ನಂಬರ್‌, ರಿಜಿಸ್ಟರ್‌ ಮಾಡಿದ ಪ್ರಾಧಿಕಾರ, ಲೇಸರ್‌ ಬ್ರಾಂಡೆಡ್‌ ಪಿನ್‌, ಎಂಜಿನ್‌ ಮತ್ತು ಚಾಸಿಸ್‌ ನಂಬರನ್ನು ಈ ಸ್ಟಿಕ್ಕರ್‌ ಹೊಂದಿರುತ್ತದೆ. „ ನಂಬರ್‌ ಪ್ಲೇಟ್‌ ಕಳವಾಗುವುದನ್ನು ತಡೆಯಲು ಹಿಂಭಾಗದ ನಂಬರ್‌ ಪ್ಲೇಟ್‌ಗೆ ಕನಿಷ್ಠ ಎರಡು ಕಳಚಲಾಗದ ಅಥವಾ ಮರು ಬಳಕೆ ಮಾಡಲಾಗದ ಸ್ನ್ಯಾಪನ್ನು ಅಳವಡಿಸಲಾಗುತ್ತದೆ. 

ಪ್ರಯೋಜನವೇನು?

ಉತ್ಪಾದನೆಯ ಹಂತದಲ್ಲಿಯೇ ವಾಹನದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಹಕಾರಿ.

ಕಳೆದು ಹೋದ/ಕದ್ದ ವಾಹನವನ್ನು ಸುಲಭವಾಗಿ ಪತ್ತೆ ಹಚ್ಚಬಹುದು.

ನಕಲಿ ನಂಬರ್‌ ಪ್ಲೇಟ್‌ ಹಾಕಿ ಓಡಿಸುವುದನ್ನು ತಡೆಯಬಹುದು

ರಾಜ್ಯ ಸರ್ಕಾರದಿಂದ ತೀರ್ಮಾನ ಇನ್ನೂ ಆಗಿಲ್ಲ. ಈ ವಿಚಾರದಲ್ಲಿ ಕೆಲವರು ನ್ಯಾಯಾಲಯಕ್ಕೆ ಹೋಗಿ ರುವುದರಿಂದ, ತೀರ್ಪು ಬಂದ ಬಳಿಕ ಅದನ್ನು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಮುಂದೊಂದು ದಿನ ಹಳೇ ವಾಹನಗಳಿಗೂ ಈ ನಂಬರ್‌ ಪ್ಲೇಟ್‌ ಅಳವಡಿಸಬೇಕಾಗಬಹುದು.
 ವಿ. ಪಿ. ಇಕ್ಕೇರಿ, ರಾಜ್ಯ ಸಾರಿಗೆ ಆಯುಕ್ತ

ಟಾಪ್ ನ್ಯೂಸ್

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.