ರಘುಪತಿ ಭಟ್ 50ನೇ ಜನ್ಮದಿನ: ಮೊದಲ ಆಚರಣೆ
Team Udayavani, Feb 25, 2019, 1:00 AM IST
ಉಡುಪಿ: ಶಾಸಕ ಕೆ. ರಘುಪತಿ ಭಟ್ ಅವರ 50ನೇ ಜನ್ಮದಿನವನ್ನು ರವಿವಾರ ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನದ ಮಕ್ಕಳೊಂದಿಗೆ ಆಚರಿಸಲಾಯಿತು. ವಿಶೇಷವೆಂದರೆ ಜನ್ಮದಿನವನ್ನು ಭಟ್ ಅವರು ಆಚರಿಸಿದ್ದು ಇದೇ ಮೊದಲ ಬಾರಿ.
ಮಕ್ಕಳನ್ನುದ್ದೇಶಿಸಿ ಮಾತನಾಡಿದ ಭಟ್ ಅವರು, ನಿಮಗೆ ಯಾರೂ ಇಲ್ಲ ಎಂದು ತಿಳಿಯಬೇಡಿ. ನಾವೆಲ್ಲರೂ ನಿಮ್ಮೊಂದಿಗೆ ಇದ್ದು ಸಹಕಾರವನ್ನು ಕೊಡುತ್ತೇವೆ. ಜೀವನದಲ್ಲಿ ಮುಂದೆ ಉತ್ತಮ ಸಾಧನೆಯನ್ನು ಮಾಡಿ ಎಂದರು. ನಾನು ಇದೇ ಮೊದಲ ಬಾರಿ ಜನ್ಮದಿನ ಆಚರಿಸುತ್ತಿದ್ದೇನೆ. ಆಚರಿಸುವುದಿದ್ದರೆ ನಿಮ್ಮಂತಹ ಮಕ್ಕಳೊಂದಿಗೆ ಮಾತ್ರ. ಇದುವೇ ನನಗೆ ಖುಷಿ ಎಂದು ಭಟ್ ಹೇಳಿದರು.
ರಘುಪತಿ ಭಟ್ಟರ ತಾಯಿ ಸರಸ್ವತಿ, ಅಣ್ಣ ರಮೇಶ ಬಾರಿತ್ತಾಯ, ಪತ್ನಿ ಶಿಲ್ಪಾ, ನಗರಸಭಾ ಸದಸ್ಯರಾದ ಚಂದ್ರಶೇಖರ ಶೇರಿಗಾರ್, ಭಾರತೀ ಪ್ರಶಾಂತ್, ಬಾಲನಿಕೇತನದ ಪ್ರಮುಖರಾದ ಪ್ರೊ| ಕಮಲಾಕ್ಷ, ರಾಮಚಂದ್ರ ಸನಿಲ್, ರಾಮಚಂದ್ರ ಉಪಾಧ್ಯಾಯ, ಗುರುರಾಜ ಭಟ್, ರಾಘವೇಂದ್ರ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು.
ಮಕ್ಕಳಿಗೆ, ಶಿಕ್ಷಕಿಯರಿಗೆ ವಸ್ತ್ರ ವಿತರಿಸಲಾಯಿತು. ಊಟೋ ಪಚಾರದ ವ್ಯವಸ್ಥೆಯನ್ನು ಮಾಡ ಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ