ಬೆದರಿಕೆ, ಬೈಗುಳಗಳಿಗೆ ಬಗ್ಗುವುದಿಲ್ಲ
Team Udayavani, Mar 7, 2019, 12:30 AM IST
ಕಾಂಚೀಪುರ: ಬೆದರಿಕೆ ಮತ್ತು ಬೈಗುಳಗಳಿಗೆ ಹೆದರುವುದಿಲ್ಲ. ಭಾರತವನ್ನು ಸಬಲಗೊಳಿಸಲು ಬೇಕಾದ ಕ್ರಮಗಳನ್ನು ಕೈಗೊಂಡೇ ಕೈಗೊಳ್ಳುವೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾರಿದ್ದಾರೆ.
ತಮಿಳುನಾಡಿನ ಕಾಂಚೀಪುರಂನಲ್ಲಿ ಬುಧವಾರ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರ ಮದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳು ಸ್ವಾರ್ಥ ನಿರ್ಧಾರದಿಂದ ಕೂಡಿವೆ. ಅತ್ಯುತ್ತಮ ಸೇನೆ ಅಗತ್ಯವನ್ನು ಅವರು ಮನಗಾಣುವುದಿಲ್ಲ ಎಂದಿದ್ದಾರೆ. ಕರ್ನಾಟಕದ ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ “ಪ್ರಧಾನಿ ನರೇಂದ್ರ ಮೋದಿಯವರಿಗೆ ಗುಂಡು ಹಾರಿಸಿ ಕೊಲ್ಲುತ್ತೀರಾ’ ಎಂದು ಹಿಂದೂ ಮಹಾಸಭಾಕ್ಕೆ ಪ್ರಶ್ನೆ ಮಾಡಿದ್ದ ವಿಚಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು, “ಬೆದರಿಕೆ , ಬೈಗುಳಗಳ ವಿರುದ್ಧ ಚಿಂತೆ ಮಾಡುವುದಿಲ್ಲ’ ಎಂದಿದ್ದಾರೆ.
“ಮೋದಿ ವಿರೋಧ ಎನ್ನುವುದು ಪ್ರತಿ ದಿನವೂ ಹೊಸ ಮಜಲುಗಳನ್ನು ಪಡೆದುಕೊಳ್ಳುತ್ತಿದೆ. ನನ್ನ ಜಾತಿ ಪ್ರಸ್ತಾಪಿಸಿ ಯಾರು ಹೆಚ್ಚು ಬಯ್ಯುತ್ತಾರೆ ಎಂಬ ಬಗ್ಗೆ ಸ್ಪರ್ಧೆಯೂ ಏರ್ಪಡುತ್ತಿದೆ’ ಎಂದು ಲೇವಡಿ ಮಾಡಿದ್ದಾರೆ ಪ್ರಧಾನಿ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ತಮಿಳುನಾಡಿನಲ್ಲಿದ್ದ ಡಿಎಂಕೆ ಸರಕಾರ ಸೇರಿ 50 ಸರಕಾರಗಳನ್ನು ವಜಾ ಮಾಡಿತ್ತು. ಈಗ ಅವಕಾಶವಾದಿತನ ಡಿಎಂಕೆಯ ಮೌಲ್ಯಗಳನ್ನು ಮಸುಕು ಮಾಡಿದೆ ಎಂದು ಟೀಕಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು
Lok Sabha Election: ವಾರಾಣಸಿಯಲ್ಲಿ ರಿಯಲ್ ಮೋದಿ VS ರೀಲ್ ಮೋದಿ ಫೈಟ್!
ಬೆನಕಟ್ಟಿ: SC/ST ಯ 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ
Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!