ಮಹಿಳೆಯರಿಗಾಗಿ “ಭಿನ್ನ’ ಯೋಚನೆ


Team Udayavani, Mar 9, 2019, 5:44 AM IST

bhinna.jpg

ಕನ್ನಡದಲ್ಲಿ ಈಗಂತೂ ಪ್ರಯೋಗಾತ್ಮಕ ಚಿತ್ರಗಳದ್ದೇ ಕಾರುಬಾರು.ಅದರಲ್ಲೂ ಹೊಸತನಕ್ಕೆ ಹೆಚ್ಚು ಆದ್ಯತೆ ಇರುವಂತಹ ಚಿತ್ರಗಳೇ ಬರುತ್ತಿವೆ. ಆ ಸಾಲಿಗೆ ಹೀಗೊಂದು “ಭಿನ್ನ’ ಚಿತ್ರವೂ ಸೇರಿದೆ. ಹೌದು, ಈ ಹಿಂದೆ “ಶುದ್ಧಿ’ ಎಂಬ ವಿಭಿನ್ನ ಬಗೆಯ ಚಿತ್ರವನ್ನು ನಿರ್ದೇಶಿಸಿದ್ದ ಆದರ್ಶ ಈಶ್ವರಪ್ಪ, ಇದೀಗ “ಭಿನ್ನ’ ಚಿತ್ರದ ಮೂಲಕ ವಿಭಿನ್ನವಾದುದ್ದನ್ನು ಹೇಳಲು ಹೊರಟಿದ್ದಾರೆ. ಅಂದಹಾಗೆ, ನಿರ್ದೇಶಕರಿಗೆ “ಭಿನ್ನ’ ಚಿತ್ರಕ್ಕೆ ಸ್ಫೂರ್ತಿಯಾಗಿದ್ದು “ಶರಪಂಜರ’ ಚಿತ್ರದ ಕಾವೇರಿ ಪಾತ್ರವಂತೆ.

ಆ ಚಿತ್ರವನ್ನು ಸಾಕಷ್ಟು ಸಲ ವೀಕ್ಷಿಸಿರುವ ನಿರ್ದೇಶಕರಿಗೆ ಕಾವೇರಿ ಪಾತ್ರ ಸ್ಫೂರ್ತಿ. ಅದನ್ನೇ ಇಟ್ಟುಕೊಂಡು “ಭಿನ್ನ’ ಚಿತ್ರ ಮಾಡಿದ್ದಾರೆ ನಿರ್ದೇಶಕರು. ಹಾಗಾದರೆ, ಕಾವೇರಿ ಪಾತ್ರದ ರೀತಿಯೇ “ಭಿನ್ನ’ ಚಿತ್ರದ ಪಾತ್ರವೂ ಇರಲಿದೆಯಾ? ಆ ಯೋಚನೆಯಿಂದ ಹೊರಬಂದಿರುವ ನಿರ್ದೇಶಕರು “ಭಿನ್ನ’ ಚಿತ್ರದ ಮೂಲಕ ಹೊಸದ್ದನ್ನು ಹೇಳುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅಂದಹಾಗೆ, “ಭಿನ್ನ’ ಮಹಿಳಾ ಪ್ರಧಾನ ಚಿತ್ರ.

ಹಾಗಾಗಿ, ಮಹಿಳಾ ದಿನದ ವಿಶೇಷವಾಗಿ ಚಿತ್ರದ ಫ‌ಸ್ಟ್‌ಲಕ್‌ ಬಿಡುಗಡೆ ಮಾಡುವ ಮೂಲಕ ಮಹಿಳಾ ದಿನಾಚರಣೆಗೊಂದು ವಿಶೇಷ ಕೊಡುಗೆ ನೀಡಿದ್ದಾರೆ ನಿರ್ದೇಶಕ ಆದರ್ಶ ಈಶ್ವರಪ್ಪ. ಅಷ್ಟಕ್ಕೂ ಮಹಿಳಾ ಪ್ರಧಾನ ಚಿತ್ರಗಳ ಹಿಂದೆಯೇ ನಿರ್ದೇಶಕರು ನಿಂತಿದ್ದಾರೆಯೇ ಎಂಬ ಪ್ರಶ್ನೆ ಎದುರಾದರೂ, ಅವರಿಗೆ “ಶುದ್ಧಿ’ ಕಥೆ ಕಾಡಿದ್ದರಿಂದ ಆ ಚಿತ್ರ ಕೈಗೆತ್ತಿಕೊಂಡು ಅಂತಾರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು.

ಈಗ “ಭಿನ್ನ’ ಕಥೆ ಕೂಡ ಹೊಸತನದಿಂದ ಕೂಡಿದ್ದು, ಅದೂ ಸಾಕಷ್ಟು ಕಾಡಿದ್ದರಿಂದ ಪುನಃ ಮಹಿಳಾ ಪ್ರಧಾನ ಚಿತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ನಿರ್ದೇಶಕರು ಮಹಿಳೆಯರ ಶಕ್ತಿ, ಯುಕ್ತ ಮತ್ತು ಅವರಲ್ಲಿರುವ ಉತ್ಸಾಹ ಕುರಿತಾದ ಅಂಶಗಳೊಂದಿಗೆ ಕಥೆ ಹೇಳುತ್ತಿದ್ದಾರಂತೆ. ಈ ಚಿತ್ರದಲ್ಲಿ ಪಾಯಲ್‌ ರಾಧಾಕೃಷ್ಣ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು,ಅವರಿಲ್ಲಿ ಎರಡು ಶೇಡ್‌ ಇರುವಂತಹ ಪಾತ್ರ ಮಾಡಿದ್ದಾರಂತೆ.

ಪಾತ್ರವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆಂಬ ಖುಷಿ ನಿರ್ದೇಶಕರದ್ದು. ಇನ್ನು, ಚಿತ್ರದಲ್ಲಿ ಶಶಾಂಕ್‌ ಪುರುಷೋತ್ತಮ್‌, ಸಿದ್ಧಾರ್ಥ , ಸೌಮ್ಯ ಸೇರಿದಂತೆ ಹಲವು ನಟ,ನಟಿಯರು ನಟಿಸಿದ್ದಾರೆ. ವಿಶೇಷವೆಂದರೆ, “ಭಿನ್ನ’ ಚಿತ್ರದಲ್ಲಿ ಸಿಂಕ್‌ಸೌಂಡ್‌ ಬಳಸಲಾಗಿದೆಯಂತೆ. ಇಲ್ಲಿ ಸಾಕಷ್ಟು ಪ್ರಯೋಗಗಳಿದ್ದು, ನಾಲ್ಕು ಪ್ರಮುಖ ಪಾತ್ರಗಳು ಚಿತ್ರದ ಹೈಲೈಟ್‌ ಆಗಿದೆ ಎಂಬುದು ಚಿತ್ರತಂಡದ ಮಾತು.

ಟಾಪ್ ನ್ಯೂಸ್

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.