ಪಾಕ್ ನೆಲ ಬಳಸಿ ಉಗ್ರ ಕೃತ್ಯ ನಡೆಸುವುದಕ್ಕೆ ಬಿಡೆ: ಪ್ರಧಾನಿ ಇಮ್ರಾನ್
Team Udayavani, Mar 9, 2019, 11:52 AM IST
ಇಸ್ಲಾಮಾಬಾದ್ : ”ಪಾಕ್ ನೆಲವನ್ನು ಬಳಸಿಕೊಂಡ ಯಾವುದೇ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳಿಗೆ ತನ್ನ ಸರಕಾರ ಬಿಡುವುದಿಲ್ಲ” ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿರುವುದಾಗಿ ವರದಿ ತಿಳಿಸಿದೆ.
ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಸಿಂಧ್ ಪ್ರಾಂತ್ಯದ ಥಾರ್ ಜಿಲ್ಲೆಯಲ್ಲಿ ಸಾರ್ವಜನಿಕ ಭಾಷಣ ಮಾಡಿದ ಇಮ್ರಾನ್ ಖಾನ್, ಪಾಕಿಸ್ಥಾನದ ಆದ್ಯಂತವಿರುವ ಧಾರ್ಮಿಕ ಅಲ್ಪಸಂಖ್ಯಾಕರ ರಕ್ಷಣೆಗೆ ತನ್ನ ಸರಕಾರ ಪೂರ್ಣವಾಗಿ ಬದ್ಧವಿದೆ ಎಂದು ಹೇಳಿದರು. ಡಾನ್ ಸುದ್ದಿ ಪತ್ರಿಕೆ ಇಮ್ರಾನ್ ಭಾಷಣವನ್ನು ವರದಿ ಮಾಡಿದೆ.
ಪಾಕಿಸ್ಥಾನದ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಬೋಧನೆಗಳ ಪ್ರಕಾರ ನನ್ನ ಸರಕಾರ ನಡೆಯುತ್ತಿದೆ ಎಂದು ಪ್ರಧಾನಿ ಇಮ್ರಾನ್ ಹೇಳಿದರು.
ಜಿನ್ನಾ ಅವರು ಪಾಕಿಸ್ಥಾನ ಸ್ಥಾಪನೆಯಾದಾಗ ದೇಶದಲ್ಲಿನ ಎಲ್ಲ ಜನಾಂಗೀಯರು ಮತ್ತು ಧರ್ಮೀಯರಿಗೆ ಪೂರ್ತಿ ರಕ್ಷಣೆಯ ಭರವಸೆ ನೀಡಿದ್ದರು.
ಪಾಕಿಸ್ಥಾನ ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರಿಗೆ ಮತ್ತು ಉಗ್ರ ಸಂಘಟನೆಗಳಿಗೆ ನೆರವು, ಪ್ರೋತ್ಸಾಹ ನೀಡುವುದನ್ನು ನಿಲ್ಲಿಸದಿದ್ದರೆ ಜಾಗತಿಕ ಸಮುದಾಯ ಅದನ್ನು ಏಕಾಂಗಿಯನ್ನಾಗಿ ಮಾಡುವುದು ನಿಶ್ಚಿತ ಎಂಬ ಎಚ್ಚರಿಕೆಯನ್ನು ಅಮೆರಿಕ ನಿನ್ನೆಯಷ್ಟೇ ನೀಡಿತ್ತು. ಆ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಈ ಮಾತುಗಳನ್ನು ಆಡಿರುವುದು ನಿಚ್ಚಳವಿದೆ.
ಎರಡು ದಿನಗಳ ಹಿಂದಷ್ಟೇ ಪಾಕ್ ಸರಕಾರ ಮುಂಬಯಿ ಉಗ್ರ ದಾಳಿ ಮಾಸ್ಟರ್ ಮೈಂಡ್, ಉಗ್ರ ಹಾಫೀಜ್ ಸಯೀದ್ ನೇತೃತ್ವದ ಜಮಾತ್ ಉದ್ ದಾವಾ ಸಂಘಟನೆಯ ಲಾಹೋರ್ ಪ್ರಧಾನ ಕಾರ್ಯಾಲಯಕ್ಕೆ ಮತ್ತು ಇದರ ದಾನ-ದತ್ತಿ ವಿಭಾಗವಾಗಿರುವ ಫಲಾಹ್ ಎ ಇನ್ಸಾನಿಯತ್ ಫೌಂಡೇಶನ್ ಕಾರ್ಯಾಲಯಕ್ಕೆ ಬೀಗ ಜಡಿದಿದೆ, ಮಾತ್ರವಲ್ಲದೆ 120 ಶಂಕಿತ ಉಗ್ರರನ್ನು ಬಂಧಿಸಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ
Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ