ಪರಿವಾರ ಜನಾಂಗಕ್ಕೆ ನೀಡುತ್ತಿರುವ ಕಿರುಕುಳ ತಪ್ಪಿಸಿ
Team Udayavani, Mar 12, 2019, 7:44 AM IST
ಮೈಸೂರು: ನಾಯಕ ಜನಾಂಗದ ಪರ್ಯಾಯ ಪದವಾದ ಪರಿವಾರ ಕುರಿತು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಈ ಜನಾಂಗಕ್ಕೆ ಆಗುತ್ತಿರುವ ಕಿರುಕುಳ ತಪ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಗರದ ಸಿಆರ್ ಇ ಸೆಲ್ ಕಚೇರಿಯಲ್ಲಿ ಸಂಸದ ಪ್ರತಾಪ್ಸಿಂಹ ಅವರಿಗೆ ನಾಯಕ ಜನಾಂಗದ ಮುಖಂಡರು ಮನವಿ ಸಲ್ಲಿಸಿದರು.
ಸಂಸದ ಪ್ರತಾಪಸಿಂಹ ಅವರನ್ನು ಭೇಟಿ ಮಾಡಿದ ಮುಖಂಡರು ನಾಯಕ ಸಮುದಾಯದ ಪರ್ಯಾಯ ಪದವಾದ ಪರಿವಾರವಿನ್ನೂ° ಪರಿಶಿಷ್ಟ ಪಂಗಡಕ್ಕೆ ಸೇರಿಲ್ಲ ಎಂದು ಅಧಿಕಾರಿಗಳು ನೀಡುತ್ತಿರುವ ಕಿರುಕುಳದ ಬಗ್ಗೆ ಚರ್ಚೆ ನಡೆಸಿದರು.
ನಾಯಕ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ ನೀಡಿಕೆ ವಿಚಾರದಲ್ಲಿ ಸಿಆರ್ ಇ ಸೆಲ್ ನೀಡುತ್ತಿರುವ ಕಿರುಕುಳವನ್ನು ತಪ್ಪಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಮೈಸೂರು ಮತ್ತು ಚಾಮರಾಜನಗರದ ಪರಿವಾರ ಪದ ನಾಯಕ ಜನಾಂಗದ ಪರ್ಯಾಯ ಪದವೆಂದು ಒಪ್ಪಿವೆ. ಕೇಂದ್ರ ಸಚಿವಾಲಯದವರು ಕೂಡ ಒಪ್ಪಿದ್ದಾರೆ.
ಕಳೆದ ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಲಾಗಿದೆ. ಹೈಕೋರ್ಟ್ ನೀಡಿರುವ ಆದೇಶವನ್ನು ಸಹ ಒದಗಿಸಿ, ನಾಯಕ ಜನಾಂಗದ ಮೇಲಾಗುತ್ತಿರುವ ಕಿರುಕುಳದ ಬಗ್ಗೆ ತಿಳಿಸಿ,ಮುಂದೆ ನಾಯಕ ಜನಾಂಗಕ್ಕೆ ಕಿರುಕುಳ ನೀಡದಂತೆ ಸಿಆರ್ಇ ಸೆಲ್ ಎಸ್ಪಿ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಅಪ್ಪಣ್ಣ, ವಕೀಲ ಪಡುವಾರಹಳ್ಳಿ ಎಂ.ರಾಮಕೃಷ್ಣ, ದೇವಪ್ಪನಾಯಕ, ದೇವರಾಜು ಟಿ. ಕಾಟೂರು, ಗೋಪಿ, ಕ್ಯಾತನಹಳ್ಳಿ ಸಿ. ನಾಗರಾಜ್, ಹಿನಕಲ್ ಚಂದ್ರ, ಸಾಹುಕಾರಹುಂಡಿ ಮಹದೇವು,ಪ್ರಭಾಕರ್,ಶಿವಕುಮಾರ್, ಪ್ರಕಾಶ್, ಕುಮಾರಬೀಡು ರಾಜೇಂದ್ರ, ಗಂಗಡಹೊಸಹಳ್ಳಿ ಶಂಕರನಾಯಕ, ಬಿಳಿಕೆರೆ ಪಾಲಾಕ್ಷ, ರಘು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ
Met Gala 2024: ಇವೆಂಟ್ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್ ಫೇಕ್ ಫೋಟೋ ವೈರಲ್
BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ
Encounter: ಜಮ್ಮು – ಕಾಶ್ಮೀರದಲ್ಲಿ ಎನ್ಕೌಂಟರ್… ಮೂವರು ಭಯೋತ್ಪಾದಕರು ಹತ
Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ