ಹೇಮಂತ್ ಕಶ್ಯಪ್ನ ನೆಟ್ವರ್ಕ್ ಹುಡುಕಾಟ
Team Udayavani, Mar 22, 2019, 6:40 AM IST
ಬೆಂಗಳೂರು: ಪ್ರಖ್ಯಾತ ವೈದ್ಯರನ್ನು ಬೆದರಿಸಿ ಹಣಕ್ಕಾಗಿ ಬೇಡಿಕೆಯಿಟ್ಟ ಆರೋಪ ಪ್ರಕರಣದ ಆರೋಪಿ ಸುದ್ದಿವಾಹಿನಿಯೊಂದರ ವರದಿಗಾರ ಹೇಮಂತ್ ಕಶ್ಯಪ್ನನ್ನು ಗುರುವಾರ ವಿಚಾರಣೆ ನಡೆಸಿರುವ ಪೊಲೀಸರು, ಆರೋಪಿ ಎಸಗಿದ ಕೃತ್ಯದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಮತ್ತೂಂದೆಡೆ ಬಂಧಿಸಲು ತೆರಳಿದಾಗ, “ನನಗೆ ಪ್ರಭಾವಿಗಳು ಗೊತ್ತು, ಸುಮ್ಮನೆ ಬಿಟ್ಟುಬಿಡಿ’ ಎಂದು ಹೇಮಂತ್ ಹೇಳಿದ್ದ ಎನ್ನಲಾಗಿದ್ದು, ಆತನ ಜತೆ ಯಾರೆಲ್ಲಾ ಸಂಪರ್ಕ ಹೊಂದಿದ್ದಾರೆ? ಜತೆಗೆ, ಈ ಬ್ಲಾಕ್ ಮೇಲ್ ಪ್ರಕರಣದಲ್ಲಿ ಅವರ ಪಾತ್ರವೇನಾದರೂ ಇದೆಯೇ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಆರೋಪಿ ಹೇಮಂತ್ ಮೊಬೈಲ್ ಜಪ್ತಿಪಡಿಸಿಕೊಂಡಿದ್ದು ಆತನ ದೂರವಾಣಿ ಕರೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಯಾರ ಜತೆ ಮಾತನಾಡಿದ್ದಾನೆ.ಬೇರೆ ಯಾರಾದರೂ ಇದಕ್ಕೆ ಸಹಕಾರ ನೀಡಿದ್ದರೇ. ಪ್ರಭಾವಿಗಳು ಎನ್ನಲಾದ ಆತನ ನೆಟ್ವರ್ಕ್ ಹೇಗಿದೆ. ವೈದ್ಯರಿಗೆ ಬೆದರಿಸುವ ಒಳ ಸಂಚು ಯಾರೊಂದಿಗೆ ರೂಪಿಸಿದ್ದ ಎಂಬುದರ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ತನಿಖಾ ತಂಡದ ಅಧಿಕಾರಿಯೊಬ್ಬರು ತಿಳಿಸಿದರು.
ವಿಚಾರಣೆ ವೇಳೆ ಆರೋಪಿ ಹೇಮಂತ್,ವೈದ್ಯರಿಗೆ ಬೆದರಿಸಿರುವುದು ನಿಜ ಆದರೆ ಹಣ ಪಡೆದುಕೊಂಡಿಲ್ಲ ಎಂದು ಹೇಳುತ್ತಾನೆ. ವಿಡಿಯೋ ಕುರಿತು ನಿಖರ ಮಾಹಿತಿ ನೀಡುತ್ತಿಲ್ಲ. ವಿಡಿಯೋ ಬಗ್ಗೆ ಗೊತ್ತಿಲ್ಲ, ಗೊತ್ತಿಲ್ಲದೆ ತಪ್ಪಾಗಿದೆ ಎಂದು ಅವಲತ್ತುಕೊಳ್ಳುತ್ತಾನೆ ಎನ್ನಲಾಗಿದೆ.
ಆರೋಪಿ ವೈದ್ಯ ರಮಣ್ರಾವ್ ಅವರಿಗೆ ಹಲವು ಬಾರಿ ವ್ಯಾಟ್ಸಾಪ್ ಹಾಗೂ ಸಾಮಾನ್ಯ ಕರೆಗಳನ್ನು ಮಾಡಿದ್ದಾನೆ. ಅವರ ಕ್ಲಿನಿಕ್ಗೂ ತೆರಳಿರುವುದಕ್ಕೆ ಸಿಸಿಟಿವಿ ಫೂಟೇಜ್ ಸಿಕ್ಕಿದೆ. ತಲೆಮರೆಸಿಕೊಂಡಿರುವ ಆರೋಪಿಗಳಾದ ಮಂಜುನಾಥ್ ಹಾಗೂ ಮುರುಳಿ ಸಿಕ್ಕರೆ ವಿಡಿಯೋ ಸತ್ಯಾಸತ್ಯತೆ ಬಗ್ಗೆ ಮಾಹಿತಿ ದೊರೆಯುವ ಸಾಧ್ಯತೆಯಿದೆ ಎಂದು ಅಧಿಕಾರಿ ಹೇಳಿದರು.
ಮಾರ್ಫಿಂಗ್ ವಿಡಿಯೋ ಎಂದು ಭಯಗೊಂಡಿದ್ದೆ!: ಪ್ರಕರಣದ ದೂರುದಾರರಾದ ಡಾ.ರಮಣ್ರಾವ್ ಅವರ ಬಳಿ ಹೇಳಿಕೆ ದಾಖಲಿಸಿಕೊಂಡಿದ್ದೇವೆ. “ಆರೋಪಿ ಹೇಮಂತ್ ಕಶ್ಯಪ್ ಇನ್ನಿತರರು ಅಶ್ಲೀಲ ವಿಡಿಯೋಗೆ ಮಾರ್ಫಿಂಗ್ ಮಾಡಿ ತನ್ನ ಮುಖವನ್ನು ಬಿಂಬಿಸಬಹುದು. ಇದರಿಂದ ನನ್ನ ಗೌರವಕ್ಕೆ ಧಕ್ಕೆ ಬರಬಹುದು. ಇಷ್ಟು ವರ್ಷ ಸಮಾಜದಲ್ಲಿ ಗೌರವಯುತ ಜೀವನ ನಡೆಸಿರುವ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಬರಬಹುದು ಎಂದು ಭಾವಿಸಿ ಆರೋಪಿಗೆ ಹಣ ನೀಡಿದ್ದೆ’ ಎಂದು ವೈದ್ಯರು ತಿಳಿಸಿರುವುದಾಗಿ ಅಧಿಕಾರಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ