ದೋಣಿ ಓಟ ಸ್ಪರ್ಧೆ ಉದ್ಘಾಟನೆ
Team Udayavani, Mar 23, 2019, 12:45 AM IST
ಗಂಗೊಳ್ಳಿ: ಇಲ್ಲಿನ ಮ್ಯಾಂಗನೀಸ್ ರಸ್ತೆ ತಾರಿಮನೆಯ ಶ್ರೀ ಚಕ್ರೇಶ್ವರಿ ನಾಸಿಕ್ ಗ್ರೂಪ್ ಇವರ ಆಶ್ರಯದಲ್ಲಿ 5ನೇ ವರ್ಷದ ಹೋಳಿ ಹಬ್ಬ ಹಾಗೂ ಬಡ ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಕಾರ್ಯಕ್ರಮದ ಪ್ರಯುಕ್ತ ಸಾರ್ವಜನಿಕರಿಗೆ ಆಯೋಜಿಸಿದ್ದ ದೋಣಿ ಓಟ ಸ್ಪರ್ಧೆ ಇಲ್ಲಿನ ಶ್ರೀ ಚಕ್ರೇಶ್ವರಿ ದೇವಸ್ಥಾನದ ಸಮೀಪ ಪಂಚಗಂಗಾವಳಿ ನದಿಯಲ್ಲಿ ಜರಗಿತು.
ಗ್ರಾ.ಪಂ. ಸದಸ್ಯ ಬಿ.ರಾಘವೇಂದ್ರ ಪೈ ದೋಣಿ ಓಟ ಸ್ಪರ್ಧೆಯನ್ನು ಉದ್ಘಾಟಿಸಿದರು. ಗಂಗೊಳ್ಳಿ ಗ್ರಾ. ಪಂ. ಉಪಾಧ್ಯಕ್ಷೆ ಪ್ರೇಮಾ ಸಿ.ಎಸ್. ಪೂಜಾರಿ, ಗಂಗೊಳ್ಳಿ ಪೋಲೀಸ್ ಠಾಣೆಯ ಉಪನಿರೀಕ್ಷಕ ವಾಸಪ್ಪ ನಾಯ್ಕ, ಪತ್ರಕರ್ತ ಮಹಮ್ಮದ್ ಇಬ್ರಾಹಿಂ, ಪೊಲೀಸ್ ಸಿಬಂದಿಯಾದ ಮೋಹನ, ರತ್ನಾಕರ ನಾಯ್ಕ, ಜಿ.ಟಿ.ನಿತ್ಯಾನಂದ ಖಾರ್ವಿ, ಜಿ.ಟಿ.ಪ್ರಸಾದ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.
ದೋಣಿ ಓಟ ಸ್ಪರ್ಧೆಯಲ್ಲಿ ರವೀಶ ಖಾರ್ವಿ ಪ್ರಥಮ ಸ್ಥಾನ, ದ್ವಿತೀಯ ಸ್ಥಾನವನ್ನು ಜಿ.ಟಿ.ರವೀಂದ್ರ ಮತ್ತು ತೃತೀಯ ಸ್ಥಾನವನ್ನು ಜಿ.ಟಿ.ಸುಧಾಕರ ಖಾರ್ವಿ ಪಡೆದುಕೊಂಡರು.ದಿನೇಶ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು.