ಶಿಲೆಯಲ್ಲಿ ಅರಳುತ್ತಿದೆ ಮುನೀಂದ್ರ ಶ್ರೀಗಳ ಗದ್ದುಗೆ


Team Udayavani, Mar 25, 2019, 11:31 AM IST

gul-4
ವಾಡಿ: ಸುಕ್ಷೇತ್ರ ಹಳಕರ್ಟಿ ಗ್ರಾಮದ ಕಟ್ಟಮನಿ ಹಿರೇಮಠದ ಮೂವರು ಲಿಂ.ಮುನೀಂದ್ರ ಶಿವಯೋಗಿಗಳ ಗದ್ದುಗೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಅತ್ಯಾಕರ್ಷಕ ಶಿಲಾದೇಗುಲ ಮಠದ ಸೌಂದರ್ಯ ಹೆಚ್ಚಿಸುತ್ತಿದೆ.
ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಮೃತ ಹಸ್ತದಿಂದ ಕತೃ ಗದ್ದುಗೆ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತು ಎರಡು ವರ್ಷಗಳು ಕಳೆದಿದ್ದು, ಸದ್ಯ ಶೇ.70 ರಷ್ಟು ಗದ್ದುಗೆ ಜೋರ್ಣೋದ್ಧಾರ ಕಾರ್ಯ ಪೂರ್ಣಗೊಂಡಿದೆ. ಭಕ್ತಿ ಸೇವೆ ಮೂಲಕ ಕಟ್ಟಿಮನಿ ಮಠದತ್ತ ಭಕ್ತರನ್ನು ಆಕರ್ಷಿಸಿರುವ ಲಿಂ. ಮುನೀಂದ್ರ ಶಿವಯೋಗಿಗಳ ಗದ್ದುಗೆ ಸ್ಮಾರಕವಾಗಿ ನಿಲ್ಲಬೇಕು ಎಂಬ ಸದ್ಯದ ಪೀಠಾಧಿಪತಿ ಅಭಿನವ ಶ್ರೀಮುನೀಂದ್ರ ಸ್ವಾಮೀಜಿಗಳ ಕನಸು ಸಾಕಾರಗೊಳ್ಳುತ್ತಿದೆ.
ಶಿಲಾ ದೇಗುಲಗಳ ತವರೂರಾಗಿರುವ ಐತಿಹಾಸಿಕ ಹಂಪಿ ಸಮೀಪದ ಬುಕ್‌ ಸಾಗರ ಪರಿಸರದಲ್ಲಿನ ಶ್ವೇತವರ್ಣದ ಶಿಲಾ
ಬಂಡೆಗಳನ್ನು ಹಳಕರ್ಟಿ ಗ್ರಾಮಕ್ಕೆ ತರಿಸಲಾಗಿದೆ. ಈ ಬಂಡೆಗಳು ಹಾಗೂ 22 ಕಂಬಗಳಿಂದ ಕತೃ ಗದ್ದುಗೆ ನಿರ್ಮಾಣಗೊಳ್ಳುತ್ತಿದೆ. ಕಟ್ಟಡದ ಗುಹೆ ಮಾರ್ಗದಲ್ಲಿ ಲಿಂ.ಮುನೀಂದ್ರ ಶ್ರಿಗಳ ಗದ್ದುಗೆ ನಿರ್ಮಾಣಗೊಂಡಿವೆ. ಮೇಲ್ಭಾಗದಲ್ಲಿ ಶ್ರೀಗಳ ಶಿಲಾಮೂರ್ತಿ ಸ್ಥಾಪಿಸಲಾಗುತ್ತಿದೆ. ಶಿಲ್ಪ ಕಲಾವಿದನ ಕೈಚಳಕಕ್ಕೆ ಸಿಕ್ಕು ಇಡೀ ಗದ್ದುಗೆ ಕಲಾಕೃತಿಗಳಿಂದ ಬೆಸೆದುಕೊಂಡಿದೆ. ಸ್ಥಳದಲ್ಲಿಯೇ ಶಿಲೆಗಳ ಕೆತ್ತನೆ ಕಾರ್ಯ ನಡೆಯುತ್ತಿದ್ದು, ಗದ್ದುಗೆಗೆ ಅಂತಿಮ ಸ್ಪರ್ಷ ನೀಡಲಾಗುತ್ತಿದೆ.
ಹಳಕರ್ಟಿ ಗ್ರಾಮವೊಂದು ಐತಿಹಾಸಿಕ ತಾಣವಾಗಿದ್ದು, ರಾಷ್ಟ್ರಕೂಟರ ಆಡಳಿತದ ಹಲವು ಕುರುಹುಗಳು ಇಲ್ಲಿವೆ. ಶಿಲಾಶಾಸನಗಳು, ಕೋಟೆ ಕೊತ್ತಲಗಳು, ಬಾವಿ, ದೇವಸ್ಥಾನಗಳು ಹಳಕರ್ಟಿ ಗ್ರಾಮದ ಇತಿಹಾಸ ಹೇಳುತ್ತಿವೆ. ಶ್ರೀ ವೀರಭದ್ರೇಶ್ವರ ದೇವಸ್ಥಾನ, ಮೈಲಾರಲಿಂಗೇಶ್ವರ ದೇವಸ್ಥಾನ ಹಾಗೂ ಕಟ್ಟಿಮನಿ ಹಿರೇಮಠ, ಗ್ರಾಮದ ಭಕ್ತಿಯ ಕೇಂದ್ರಗಳಾಗಿವೆ. ಪ್ರತಿ ವರ್ಷ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ರಥೋತ್ಸವ ನಡೆದು ಕಲ್ಯಾಣ ನಾಡಿನ ಗಮನ ಸೆಳೆಯುತ್ತದೆ.
ನಿರ್ಮಾಣ ಹಂತದಲ್ಲಿರುವ ಲಿಂ.ಮುನೀಂದ್ರ ಶ್ರೀಗಳ ಗದ್ದುಗೆಯೂ ಸಹ ಗ್ರಾಮದ ಭಕ್ತಿಯ ಕೇಂದ್ರಗಳ ಪಟ್ಟಿಗೆ ಸೇರ್ಪಡೆಗೊಳ್ಳಲಿದ್ದು, ನೂತನ ಗದ್ದುಗೆಯ ಲೋಕಾರ್ಪಣೆಗಾಗಿ ಭಕ್ತರು ಕಾಯ್ದು ಕುಳಿತಿದ್ದಾರೆ.
ಹಳಕರ್ಟಿ ಕಟ್ಟಿಮನಿ ಹಿರೇಮಠಕ್ಕೆ ಲಿಂ.ಮುನೀಂದ್ರ ಶ್ರೀಗಳ ಕೊಡುಗೆ ಅನನ್ಯವಾಗಿದೆ. ಶ್ರೀಗಳು ಮಠವನ್ನು
ಕಟ್ಟುವ ಬದಲು ಭಕ್ತರಮನಸ್ಸು ಕಟ್ಟಿದ್ದಾರೆ.
ನಂಬಿದ ಭಕ್ತರ ಕಷ್ಟ ಕಾರ್ಪಣ್ಯ ದೂರ ಮಾಡಿ ಪವಾಡ ಮಾಡಿದ್ದಾರೆ. ಲಿಂ.ಮುನಿಂದ್ರ ಶ್ರೀಗಳ ಕೊಡುಗೆ ಚಿರಕಾಲ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಬೇಕು ಎನ್ನುವ ಕಾರಣಕ್ಕೆ ಸುಂದರ ಶಿಲಾ ಗದ್ದುಗೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಭಕ್ತರು ಸಹಾಯ-ಸಹಕಾರ ನೀಡಲು ಮುಂದೆ ಬಂದಿರುವುದು ಸಂತೋಷ ತಂದಿದೆ.
2020ರ ಫೆಬ್ರವರಿಯಲ್ಲಿ ಲಿಂ.ಮುನೀಂದ್ರ ಶ್ರೀಗಳ ಪುಣ್ಯಾರಾಧನೆ ಸಮಾರಂಭದಲ್ಲಿ ಜಗದ್ಗುರುಗಳ ಮೂಲಕ ಗದ್ದುಗೆ ಲೋಕಾರ್ಪಣೆಗೊಳ್ಳಲಿದೆ.
ಶ್ರೀ ಮುನೀಂದ್ರ ಸ್ವಾಮೀಜಿ ಪೀಠಾಧಿಪತಿ, ಕಟ್ಟಿಮನಿ ಹಿರೇಮಠ ಹಳಕರ್ಟಿ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.