ನವಾಡಾ ಬದಲು ಬೇಗುಸರಾಯ್: ಬಿಜೆಪಿ ಸಚಿವ ಗಿರಿರಾಜ್ ಆಕ್ರೋಶ
Team Udayavani, Mar 26, 2019, 3:21 PM IST
ಪಟ್ನಾ : ತನ್ನ ಮೂಲ ಕ್ಷೇತ್ರವಾಗಿರುವ ನವಾಡಾದಿಂದ ಸ್ಪರ್ಧಿಸುವ ಬದಲು ತನಗೆ ಬೇಗುಸರಾಯ್ ಕ್ಷೇತ್ರವನ್ನು ನೀಡಲಾಗಿರುವುದಕ್ಕೆ ಬಿಜೆಪಿಯ ಉರಿ ನಾಲಗೆಯ ಸಂಸದ ಹಾಗೂ ಸಚಿವ ಗಿರಿರಾಜ್ ಸಿಂಗ್ ಪಕ್ಷದ ಹೈಕಮಾಂಡ್ ವಿರುದ್ಧ ಸಿಟ್ಟಾಗಿದ್ದು ತನಗಾಗಿರುವ ಮನೋ ವೇದನೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.
“ಬೇರೆ ಯಾವುದೇ ಸಂಸದರ ಸೀಟನ್ನು ಬದಲಾಯಿಸಲಾಗಿಲ್ಲ; ನನ್ನದನ್ನು ಮಾತ್ರವೇ ಬದಲಾಯಿಸಲಾಗಿದೆ. ಇದರಿಂದ ನನ್ನ ಆತ್ಮ ಗೌರವ, ಘನತೆಗೆ ಘಾಸಿಯಾಗಿದೆ. ನನ್ನನ್ನು ಮಾತನಾಡಿಸದೆಯೇ ಈ ಬದಲಾವಣೆ ಮಾಡಲಾಗಿದೆ. ಇದನ್ನು ಯಾಕಾಗಿ ಹೀಗೆ ಮಾಡಲಾಯಿತು ಎಂಬ ಬಗ್ಗೆ ನನಗೆ ರಾಜ್ಯ ಬಿಜೆಪಿ ನಾಯಕತ್ವ ಉತ್ತರ ಕೊಡಬೇಕು; ಬೇಗುಸರಾಯ್ ಬಗ್ಗೆ ನನಗೇನೂ ಆಕ್ಷೇಪ ಇಲ್ಲ; ಆದರೆ ನಾನು ನನ್ನ ಆತ್ಮ ಗೌರವ ಮತ್ತು ಘನತೆಯೊಂದಿಗೆ ರಾಜಿ ಮಾಡಿಕೊಳ್ಳಲಾರೆ’ ಎಂದು 66ರ ಹರೆಯದ ಬಿಜೆಪಿ ನಾಯಕ ಸಿಂಗ್ ಗುಡುಗಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ತಾನು ಗೆದ್ದಿದ್ದ ನವಾಡಾ ಸೀಟನ್ನು ತನಗೆ ನಿರಾಕರಿಸಿರುವ ಬಿಹಾರ ಬಿಜೆಪಿ ನಾಯತ್ವವನ್ನು ಕಟುವಾಗಿ ಟೀಕಿಸಿರುವ ಗಿರಿರಾಜ್ ಸಿಂಗ್ ತನಗಾಗಿರುವ ನೋವು, ನಿರಾಶೆ, ಹತಾಶೆಯನ್ನು ಬಹಿರಂಗವಾಗಿ ಹೊರ ಹಾಕಿದ್ದಾರೆ.
ನವಾಡಾ ಬದಲು ಬೇಗುಸರಾಯ್ ಸೀಟು ಕೊಟ್ಟದ್ದಕ್ಕೆ ಸಿಟ್ಟಿಗೆದ್ದು ತನಗೆ ನವಾಡ ಕ್ಷೇತ್ರವೇ ಬೇಕೆಂದು ಹಠ ಹಿಡಿದಿರುವ ಗಿರಿರಾಜ್ ಸಿಂಗ್ “ಶಾಲೆಗೆ ಹೋಗಲು ಒಲ್ಲೆನೆಂದು ಚಂಡಿ ಹಿಡಿಯುವ ಹುಡುಗನ ಹಾಗೆ ಕಾಣುತ್ತಾರೆ’ ಎಂದು ಇವರ ಪ್ರತಿಸ್ಪರ್ಧಿ ಕನ್ಹಯ್ಯ ಕುಮಾರ್ ಕೀಟಲೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
MUST WATCH
ಹೊಸ ಸೇರ್ಪಡೆ
T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್
ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ
Kollywood: ಕಮಲ್ ಹಾಸನ್ ʼಥಗ್ ಲೈಫ್ʼ ಅಖಾಡಕ್ಕೆ ಬಾಲಿವುಡ್ನ ಖ್ಯಾತ ನಟರು ಎಂಟ್ರಿ?
ಮೋದಿಯಿಂದ ಬಡತನ ಮುಕ್ತ ಭಾರತ: ಬಸವರಾಜ ಬೊಮ್ಮಾಯಿ
Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ