ನಾರಾವಿ:ಚಲಿಸುತ್ತಿದ್ದ ರಿಕ್ಷಾ ಮೇಲೆ ಬಿದ್ದ ಮರ
Team Udayavani, Apr 3, 2019, 9:43 AM IST
ವೇಣೂರು: ಕಾರ್ಕಳ-ಬೆಳ್ತಂಗಡಿ ರಾಜ್ಯ ಹೆದ್ದಾರಿಯ ನಾರಾವಿ ಪರಿಸರದಲ್ಲಿ ಭಾರೀ ಗಾತ್ರದ ಮರವೊಂದು ಚಲಿಸುತ್ತಿದ್ದ ಗೂಡ್ಸ್ ರಿಕ್ಷಾ ಮೇಲೆ ಉರುಳಿಬಿದ್ದಿದ್ದು,ಚಾಲಕ ಪವಾಡಸದೃಶ್ಯ ಅಪಾಯದಿಂದ ಪಾರಾಗಿದ್ದಾರೆ.
ರಾಜ್ಯ ಹೆದ್ದಾರಿಗೆ ಅಡ್ಡವಾಗಿ ಬಿದ್ದು ಸುಮಾರು ಒಂದು ಗಂಟೆ ಕಾಲ ರಸ್ತೆ ತಡೆ ಉಂಟಾಯಿತು. ಮರದ ಅಡಿಗೆ ಗೂಡ್ಸ್ ರಿಕ್ಷಾ ಒಂದು ಸಿಲುಕಿ ನಜ್ಜುಗುಜ್ಜಾಗಿದೆ. ಅಂಡಿಂಜೆಯ ಗೂಡ್ಸ್ ರಿಕ್ಷಾ ಇದಾಗಿದ್ದು, ಸ್ಥಳೀಯರ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಲಾಯಿತು.