ಸಜೆಯಾಗದಿರಲಿ ಬೇಸಗೆ ರಜೆ : ಮಕ್ಕಳ ನೀರಾಟದ ಬಗ್ಗೆ ಇರಲಿ ಎಚ್ಚರ

ಅಪಾಯಕಾರಿ ಹೊಂಡಗಳ ಬಗ್ಗೆ ಜಾಗೃತಿ ಇರಲಿ ; ಮೃತ್ಯುಕೂಪವಾಗಿರುವ ಗಣಿಗಾರಿಕೆ ಹೊಂಡಗಳು

Team Udayavani, Apr 6, 2019, 6:00 AM IST

0504KOTA5E

ಕೋಟ: ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಧಿ ಮುಗಿದು ಬೇಸಗೆ ರಜೆಯ ಮಜಾ ಆರಂಭ ಗೊಳ್ಳುತ್ತಿದೆ. ಪ್ರತಿ ವರ್ಷ ಈ ಸಂದರ್ಭಗಳಲ್ಲಿ ನೀರಿನ ಹೊಂಡ, ಕೆರೆ, ಹೊಳೆ, ಸಮುದ್ರಕ್ಕೆ ಆಡಲು ತೆರಳಿದಾಗ ಅನೇಕ ದುರಂತಗಳು ನಡೆದು ಮಕ್ಕಳ ಜೀವ ಬಲಿಯಾಗುವ ಪ್ರಕರಣಗಳು ಕರಾವಳಿಯಲ್ಲಿ ವರದಿಯಾಗುತ್ತವೆ.

ಈ ಬಾರಿ ಕೂಡ ಪುತ್ತೂರಿನಲ್ಲಿ ಈಗಾಗಲೇ ಇಂತಹದ್ದೇ ಘಟನೆ ಘಟಿಸಿ ಮೂರು ವಿದ್ಯಾರ್ಥಿಗಳು ಸಾವನ್ನಪ್ಪಿ ದ್ದಾರೆ. ಆದ್ದರಿಂದ ರಜೆಯಲ್ಲಿ ಹೆತ್ತವರು ತಮ್ಮ ಮಕ್ಕಳ ಚಟುವಟಿಕೆ ಬಗ್ಗೆ ತುಂಬಾ ಎಚ್ಚರದಿಂದಿರಬೇಕಾದ ಅಗತ್ಯವಿದೆ.

ನಿಗಾ ಇರಲಿ
ಬೇಸಗೆ ರಜೆಯಲ್ಲಿ ಹೆತ್ತವರು ಮಕ್ಕಳ ಆಟೋಟಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಾದ ಅಗತ್ಯವಿರುತ್ತದೆ. ಮಕ್ಕಳು ಯಾರ ಜತೆ ಆಟವಾಡುತ್ತಾರೆ, ಎಲ್ಲಿಗೆ ತೆರಳುತ್ತಾರೆ. ಆಟವಾಡುವ ಸ್ಥಳದಲ್ಲಿ ಅಪಾಯಕಾರಿ ನೀರಿನ ಹೊಂಡಗಳಿದೆಯೇ ಎನ್ನುವ ಕುರಿತು ಕಾಳಜಿ ಅಗತ್ಯ ಮತ್ತು ನೀರಿನ ಹೊಂಡಗಳಿಗೆ ಬಟ್ಟೆ ಒಗೆಯಲು ತೆರಳುವಾಗ ಚಿಕ್ಕ ಮಕ್ಕಳನ್ನು ಕರೆದೊಯ್ಯದಿರುವುದು ಒಳಿತು.

ಎಚ್ಚರ ಅಗತ್ಯ
ಗ್ರಾಮಾಂತರ ಭಾಗದ ಹಲವು ಕಡೆಗಳಲ್ಲಿ ಗಣಿಗಾರಿಕೆ ಹೊಂಡಗಳು ಮೃತ್ಯಕೂಪವಾಗಿ ಪರಿಣಮಿಸಿವೆೆ. ಪರವಾನಿಗೆ ಇರುವ ಗಣಿಗಾರಿಕೆಗೆ ಹೊಂಡಗಳಿಗೆ ಪರವಾನಿಗೆ ದಾರರು ಬೇಲಿ ಅಳವಡಿಸಬೇಕು ಅಥವಾ ಜಾಗದ ಮಾಲಕರು ಕ್ರಮ ಕೈಗೊಳ್ಳಬೇಕು.ಇಲ್ಲವಾದರೆ ಅಲ್ಲಿ ನಡೆಯುವ ದುರಂತಗಳಿಗೆ ಮಾಲಕರು, ಪರವಾನಿಗೆದಾರರು ಹೊಣೆಗಾರರಾಗು ತ್ತಾರೆ ಎನ್ನುವ ನಿಯಮವಿದೆ. ಆದರೂ ಕೆಲವು ಗಣಿಹೊಂಡಗಳು ಇನ್ನೂ ಅಪಾಯಕಾರಿ ಸ್ಥಿತಿಯಲ್ಲಿದೆ. ಇದರ ಜತೆಗೆ ಸರಕಾರಿ ಜಾಗದಲ್ಲಿ ನಡೆದ ಗಣಿಗಾರಿಕೆಗಳು, ಹೊಳೆ, ಕೆರೆ, ತೋಡು, ಟ್ಯಾಂಕ್‌ಗಳು ತೆರೆದ ಸ್ಥಿತಿಯಲ್ಲಿ ಅಪಾಯಕಾರಿಯಾಗಿದಲ್ಲಿ ಇವುಗಳ ಕುರಿತು ಎಚ್ಚರಿಕೆ ಅಗತ್ಯರಜಾ ದಿನ ಸದುಪಯೋಗಿಸಿ ಹಿಂದೆ ಬೇಸಗೆ ರಜೆಯಲ್ಲಿ ಸಂಬಂಧಿಗಳ ಮನೆಗೆ ತೆರಳಿ ಅಜ್ಜಿ,ತಾತ ಹಾಗೂ ಹಿರಿಯರಿಂದ ಜೀವನಕ್ಕೆ ಬೇಕಾಗುವ ಒಂದಷ್ಟು ವಿಚಾರ ಕಲಿಯುವ ಪದ್ಧತಿ ಇತ್ತು. ಆದರೆ ಇಂದಿನ ಮಕ್ಕಳಿಗೆ ಮೊಬೈಲ್‌, ವಿಡಿಯೋ ಗೇಮ್‌ ಸರ್ವಸ್ವವಾಗಿದೆ. ಹೀಗಾಗಿ ಸಂಬಂಧಿಗಳ ಮನೆಗೆ ತೆರಳುವುದು ಅಪರೂಪವಾಗಿದೆ. ಮಕ್ಕಳನ್ನು ಸಂಬಂಧಿಗಳ ಮನೆಗೆ ಕಳುಹಿಸುವ ಮೂಲಕ ಮೊಬೈಲ್‌, ವೀಡಿಯೋ ಗೇಮ್‌ಗಳ ದಾಸ ರಾಗುವುದನ್ನು ತಪ್ಪಿಸಬಹುದು.

ಬೇಸಗೆ , ಮಳೆಗಾಲದಲ್ಲಿ ಸಾಲು-ಸಾಲು ದುರಂತ
2015ರಿಂದ 2018 ಮೇ ತನಕ ಉಡುಪಿ ಜಿಲ್ಲೆಯಲ್ಲಿ ಬೇಸಗೆ ರಜಾ ಅವಧಿ ಹಾಗೂ ಮಳೆಗಾಲದಲ್ಲಿ ನಡೆದ ನೀರಿನ ದುರಂತಗಳು ಈ ರೀತಿ ಇವೆ. ಬ್ರಹ್ಮಾವರ ಪೊಲೀಸ್‌ ಠಾಣೆ 3 ಪ್ರಕರಣ 4ಸಾವು, ಹೆಬ್ರಿಯಲ್ಲಿ 2 ದುರಂತ 2 ಸಾವು, ಕೋಟದಲ್ಲಿ 7 ಘಟನೆಗಳಲ್ಲಿ 10 ಸಾವು, ಬೈಂದೂರಿನಲ್ಲಿ 1 ಘಟನೆ 1 ಸಾವು, ಕಾರ್ಕಳದಲ್ಲಿ 2 ಪ್ರಕರಣ 2ಸಾವು, ಕುಂದಾಪುರದಲ್ಲಿ 4 ದುರಂತ 5 ಸಾವು, ಮಣಿಪಾಲದಲ್ಲಿ 1 ಪ್ರಕರಣ 2 ಸಾವು, ಶಂಕರನಾರಾಯಣ 1 ಪ್ರಕರಣ 2ಸಾವು, ಕೊಲ್ಲೂರು 1 ಘಟನೆ 1ಸಾವು, ಮಲ್ಪೆ 1 ಪ್ರಕರಣ 1 ಸಾವು. ಹೀಗೆ 23 ಪ್ರಕರಣಗಳಲ್ಲಿ 30 ಜೀವಗಳು ಬಲಿಯಾಗಿವೆ.

– ರಾಜೇಶ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.