ಮತ ಚಲಾವಣೆ ಹಕ್ಕಿನಿಂದ ವಂಚಿತರಾಗದಿರಿ: ಷಣ್ಮುಖ
ಸಂವಿಧಾನ ನೀಡಿರುವ ಮಹತ್ವದ ಹಕ್ಕು ಮತದಾನ
Team Udayavani, Apr 10, 2019, 2:41 PM IST
ಹುಮನಾಬಾದ: ಚುನಾವಣಾ ಅಧಿಕಾರಿ ಬಿ.ಷಣ್ಮುಖ ನೇತೃತ್ವದಲ್ಲಿ ಸಿಬ್ಬಂದಿ ಮಂಗಳವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ಮೂಲಕ ಮತದಾನ ಜಾಗೃತಿ ನಡೆಸಿದರು.
ಹುಮನಾಬಾದ: ಮತದಾನ ಸಂವಿಧಾನ ನಮಗೆ ನೀಡಿರುವ ಅತ್ಯಂತ ಮಹತ್ವದ ಹಕ್ಕು. ಯಾರೊಬ್ಬರೂ ಯಾವುದೇ ಕಾರಣಕ್ಕೂ ಅದರಿಂದ ವಂಚಿತರಾಗದೇ ಕಡ್ಡಾಯವಾಗಿ
ಚಲಾಯಿಸಬೇಕು ಎಂದು ಲೋಕಸಭೆ ಚುನಾವಣೆ ಸಹಾಯಕ ಚುನಾವಣಾ ಅಧಿಕಾರಿ ಡಿ.ಷಣ್ಮುಖ ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಬೈಕ್ರ್ಯಾಲಿ ಮೂಲಕ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮತದಾನ ಕೇಂದ್ರದಲ್ಲಿ ಅಂಗವಿಕಲರಿಗಾಗಿ ತ್ರಿಚಕ್ರವಾಹನ ಸೌಲಭ್ಯ ಕಲ್ಪಿಸಲಾಗಿದೆ.
ಮತದಾನ ಕೇಂದ್ರ ಸಮೀಪ ಬಿಸಿಲಿನಿಂದ ಬಚಾವ್ ಆಗಲು
ಶಾಮಿಯಾನ ಅಳವಡಿಕೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಸಕಲ ಸೌಲಭ್ಯ ಕಲ್ಪಿಸಲಾಗಿದೆ. ಯಾವುದೇ ಶುಭ ಸಮಾರಂಭಕ್ಕೆ ಅನ್ಯ ಊರುಗಳಿಗೆ ಹೋಗುವುದಿದ್ದಲ್ಲಿ ಬೆಳಗ್ಗೆ ಮತ ಹಕ್ಕು ಚಲಾಯಿಸಿದ ನಂತರವೇ ತೆರಳಬೇಕು ಎಂದರು. ಯಾರಿಗೆ ಮತ ಹಾಕಿ ಏನೂ ಪ್ರಯೋಜನವಿಲ್ಲ, ಎಲ್ಲರೂ ಅಂಥವರೇ
ಎಂದು ನಿರ್ಲಕ್ಷಿಸದೇ ಇರುವವರಲ್ಲೇ ಸಂವಿಧಾನ ನಿಮಗೆ ಕೊಟ್ಟ ಅತ್ಯಂತ ಮಹತ್ವದ ಈ ಹಕ್ಕು ಸೂಕ್ತ ಎನಿಸುವ ವ್ಯಕ್ತಿಗಳಿಗೆ
ಚಲಾಯಿಸಬೇಕು. ಊರಲ್ಲೇ, ಮನೆಯಲ್ಲೇ ಇದ್ದು ಮತ ಚಲಾಯಿಸದಿದ್ದರೆ ಇದ್ದೂ ಸತ್ತಂತೆ. ಈ ನಿಟ್ಟಿನಲ್ಲಿ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಸಲಹೆ ನೀಡಿದರು.
ತಹಶೀಲ್ದಾರ್ ನಾಗಯ್ಯಸ್ವಾಮಿ ಹಿರೇಮಠ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಅನೀತಾ ಕುಂದಾಪುರ, ಬಿಇಒ ಶಿವರಾಚಪ್ಪ ವಾಲಿ, ಪಶುವೈದ್ಯಾಧಿ ಕಾರಿ
ಡಾ|ಗೋವಿಂದ, ತಾಪಂ ಯೋಜನಾ ಅಧಿಕಾರಿ ಶಂಕರ ಕನಕ, ವ್ಯವಸ್ಥಾಪಕ ದಯಾನಂದ ಲಾಖೆ ಮತದಾನದ ಮಹತ್ವ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡಿದರು.
ವಿಷ್ಣು ಕುಲಕರ್ಣಿ, ಬಿಆರ್ಸಿ ಶಿವಕುಮಾರ ಪಾರಶಟ್ಟಿ, ಮಾಣಿಕಪ್ಪ ಬಕ್ಕನ್, ಶರದ್ ಕುಮಾರ ನಾರಾಯಣಪೇಟಕರ್, ವೀರಂತರೆಡ್ಡಿ ಜಂಪಾ, ಶಿವಕುಮಾರ, ಬಸವರಾಜ, ಜೈಶ್ರೀ, ಪಂಚಾಯಿತಿ ಅಭಿವೃದ್ಧಿ ಅಧಿ ಕಾರಿಗಳಾದ ಮಹಾದೇವ್, ವಿಜಯಕುಮಾರ ಚಾಂಗ್ಲೇರಿ, ಶಿವರಾಜ ಮಂಗಲಗಿ, ಗಣೇಶ ನಿರ್ಣಾ, ವೀರಣ್ಣ
ಬಿರಾದಾರ ಮೊದಲಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
MUST WATCH
ಹೊಸ ಸೇರ್ಪಡೆ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ