ಕುಡ್ಲದ ಕಾಮಿಡಿ ಸ್ಟಾರ್‌ಗಳಿಂದ ನೋ ಪಾಲಿಟಿಕ್ಸ್‌ !


Team Udayavani, Apr 11, 2019, 6:00 AM IST

Kudla!

ಮಂಡ್ಯದಲ್ಲಿ ಎಲೆಕ್ಷನ್‌ ಮಧ್ಯೆಯೇ ಸ್ಟಾರ್‌ ವಾರ್‌ ಜೋರಾಗಿದೆ. ಸ್ಯಾಂಡಲ್‌ವುಡ್‌ನ‌ ದರ್ಶನ್‌ ಹಾಗೂ ಯಶ್‌ ಅವರು ಸುಮಲತಾ ಅಂಬರೀಶ್‌ ಅವರ ಪರವಾಗಿ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ರಾಜ್ಯದ ಉಳಿದ ಕೆಲವು ಕಡೆಗಳಲ್ಲಿ ಕೂಡ ಹೀಗೆ ಸ್ಟಾರ್‌ ಪ್ರಚಾರ ಜೋರಾಗಿದೆ. ಆದರೆ, ಕರಾವಳಿ ಮಾತ್ರ ಇದಕ್ಕೆ ತದ್ವಿರುದ್ದ !

ಕೋಸ್ಟಲ್‌ವುಡ್‌ನ‌ಲ್ಲಿ ದಿನದಿಂದ ದಿನಕ್ಕೆ ತುಳು ಸಿನೆಮಾಗಳ ಸಂಖ್ಯೆ ಅಧಿಕಗೊಳ್ಳುತ್ತ ಕುಡ್ಲದ ಕಲಾವಿದರು ಕರಾವಳಿ ಭಾಗದಲ್ಲಿ ಸಖತ್‌ ಫೇಮಸ್‌ ಆಗುತ್ತಿದ್ದಾರೆ. ಅದರಲ್ಲಿಯೂ ಕುಡ್ಲದಲ್ಲಿ ಕಾಮಿಡಿ ಗೆಟಪ್‌ಗೆ ಜಾಸ್ತಿ ಒತ್ತು ನೀಡುವ ಕಾರಣದಿಂದ ಕಾಮಿಡಿ ಕಲಾವಿದರು ಕುಡ್ಲದ ಬಹುದೊಡ್ಡ ಆಸ್ತಿ.

ತುಳು ನಾಟಕ- ಸಿನೆಮಾದಲ್ಲಿ ಅಭಿನಯಿಸಿ ಎಲ್ಲರ ಮನಗೆದ್ದ ತುಳುವಿನ ಕಾಮಿಡಿ ಸ್ಟಾರ್‌ಗಳ ಬಗ್ಗೆ ಕರಾವಳಿ ಭಾಗದಲ್ಲಿ ಬಹುದೊಡ್ಡ ಗೌರವ. ಜಾತಿ ಮತ, ಧರ್ಮ ಪಕ್ಷ ಮೀರಿ ಎಲ್ಲರೂ ಇವರನ್ನು ಪ್ರೀತಿಸುವ ಕಾರಣದಿಂದ ಇವರು ರಾಜಕೀಯದತ್ತ ಕಣ್ಣಿಟ್ಟಿಲ್ಲ ಎಂಬುದು ವಿಶೇಷ.

ಬೇರೆ ಬೇರೆ ಪಕ್ಷದ ಪರವಾಗಿ ಪ್ರಚಾರಕ್ಕೆ ಬರುವಂತೆ ಆಹ್ವಾನ ಬಂದಿದ್ದರೂ ಕೂಡ ತುಳು ಸಿನೆಮಾ ಕಲಾವಿದರು ನಯವಾಗಿ ನಿರಾಕರಿಸುವ ಮೂಲಕ ರಾಜಕೀಯದಿಂದ ಅಂತರ ಕಾಯ್ದುಕೊಂಡು ಬಂದಿದ್ದಾರೆ. ತಾನು ಅಭಿನಯಿಸುವ ಸಿನೆಮಾವನ್ನು ಎಲ್ಲ ಪಕ್ಷದವರು ನೋಡುವಾಗ ನಾನು ಮಾತ್ರ ಒಂದು ಪಕ್ಷದ ಅಡಿಯಲ್ಲಿ ನಿಂತು ಪ್ರಚಾರ ಮಾಡುವುದು ಸರಿ ಕಾಣಿಸುವುದಿಲ್ಲ ಎಂಬುದು ಇವರ ವಾದ.

ಹೀಗಾಗಿಯೇ ದೇವದಾಸ್‌ ಕಾಪಿಕಾಡ್‌, ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು ಸಹಿತ ಕೋಸ್ಟಲ್‌ವುಡ್‌ನ‌ ಪ್ರಮುಖ ಕಲಾವಿದರು ಪ್ರಚಾರದತ್ತ ಮುಖ ಮಾಡಿಲ್ಲ. ಬೇರೆ ಬೇರೆ ಪಕ್ಷದವರು ಮನೆಗೆ ಆಗಮಿಸಿ ಪ್ರಚಾರದಲ್ಲಿ ಒಮ್ಮೆ ಬನ್ನಿ ಎಂದು ಕರೆದಾಗಲೂ ಪ್ರೀತಿಯಿಂದಲೇ ಅದನ್ನು ನಿರಾಕರಿಸಿದ್ದಾರೆ.
“ರಾಜಕೀಯ ಎಲ್ಲ ನಮಗೆ ಆಗಿ ಬರಲ್ಲ’ ಎನ್ನುತ್ತ ರಾಜಕೀಯ ದಿಂದ ಅಂತರ ಕಾಯ್ದುಕೊಂಡೇ
ಇದ್ದಾರೆ.

ಹಾಗೆಂದು ಚುನಾವಣೆ ಪ್ರಕ್ರಿಯೆಯಿಂದ ಇವರು ದೂರ ನಿಂತಿಲ್ಲ. ಹೇಗೆಂದರೆ ಎ. 18ರಂದು ನಡೆಯುವ ಲೋಕಸಭಾ ಚುನಾವಣೆಗೆ ನಾವೆಲ್ಲ ಮತದಾನ ಮಾಡೋಣ ಎನ್ನುವ ಜಾಗೃತ ಹೋರಾಟದಲ್ಲಿ ಕೈಜೋಡಿಸಿದ್ದಾರೆ.

“ಮತದಾನ ಮಾಡಿ; ಭವ್ಯ ಭಾರತ ನಿರ್ಮಿಸಿ’ ಎಂಬ ಸಂಕಲ್ಪವನ್ನು ಉಲ್ಲೇಖೀಸಿ ಮತದಾನ ಮಾಡುವಂತೆ ಅವರು ಸಾಮಾಜಿಕ ಜಾಲತಾಣದ ಮುಖೇನ ಮನವಿ ಮಾಡುತ್ತಿದ್ದಾರೆ. ಈ ಮೂಲಕ ಪಕ್ಷಗಳ ಪರವಾಗಿ ಮತ ಕೇಳುವ ಬದಲು ಎಲ್ಲರೂ ಮತದಾನ ಮಾಡಿ ಎಂದು ಕರೆ ನೀಡುತ್ತಿದ್ದಾರೆ.

ಅಂದಹಾಗೆ, ಸಿನೆಮಾದವರು ಪ್ರಚಾರಕ್ಕೆ ಹೋಗಿಲ್ಲ ಎಂಬ ಸಂಗತಿ ಇದ್ದರೂ ಕುಡ್ಲ ಭಾಗದಲ್ಲಿದ್ದ ಹಲವು ರಾಜಕೀಯ ನೇತಾರರು ಸಿನೆಮಾದ ನೆರಳಿನಲ್ಲಿದ್ದರು ಎಂಬುದು ಕೂಡ ಉಲ್ಲೇಖನೀಯ.

ಕೆಲವರು ಸಿನೆಮಾ ಮಾಡಿದ ಅನಂತರ ರಾಜಕೀಯಕ್ಕೆ ಬಂದಿದ್ದರೆ, ಇನ್ನೂ ಕೆಲವರು ರಾಜಕೀಯದಲ್ಲಿದ್ದು ಸಿನೆಮಾ ಮಾಡಿದವರಿದ್ದಾರೆ ಎಂಬುದು ವಿಶೇಷ.

– ದಿನೇಶ್‌ ಇರಾ

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.