ರಮೇಶ ಜಿಗಜಿಣಗಿ ಗೆಲುವು ಖಚಿತ

17 ಖಾತೆ ನಿಭಾಯಿಸಿದ ಜಿಗಜಿಣಗಿಗೆ ವಿಜಯಲಕ್ಷ್ಮೀಮತ್ತೆ ಮೋದಿ ಪ್ರಧಾನಿ ಆಗುವುದು ಜನರ ಆಶಯ

Team Udayavani, Apr 12, 2019, 3:24 PM IST

12-April-22

ವಿಜಯಪುರ: ಆಟೋದಲ್ಲಿ ಸಂಚರಿಸಿ ಪ್ರಚಾರ ನಡೆಸಿದ ನಟಿ ತಾರಾ.

ವಿಜಯಪುರ: ತಮ್ಮ ರಾಜಕೀಯ ಜೀವನದಲ್ಲಿ 17 ಖಾತೆಗಳನನ್ನು
ನಿಭಾಯಿಸಿರುವ ವಿಜಯಪುರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ರಮೇಶ ಜಿಗಜಿಣಗಿ ಅವರು ವಿಜಯಪುರ ಕ್ಷೇತ್ರದಲ್ಲಿ ವಿಜಯ
ಸಾಧಿಸುವುದು ಖಚಿತ ಎಂದು ಮೇಲ್ಮನೆ ಸದಸ್ಯ-ಚಿತ್ರನಟಿ ತಾರಾ ಅನುರಾಧಾ
ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ವಿಜಯಪುರ
ಕ್ಷೇತ್ರ ಬಿಜೆಪಿ ಭದ್ರಕೋಟೆ ಎನಿಸಿರುವ ವಿಜಯ ಸಂದೇಶ ಹೊಂದಿರುವ
ವಿಜಯಪುರ ಕ್ಷೇತ್ರದಲ್ಲಿ ಈ ಬಾರಿಗೆ ವಿಜಯಲಕ್ಷ್ಮೀ ಬಿಜೆಪಿ-ಜಿಗಜಿಣಗಿ ಕೈ
ಹಿಡಿಯಲಿದ್ದಾರೆ ಎಂದರು.

ವಿಜಯಪುರ ಸಂಸದರಾಗಿ ರಮೇಶ ಜಿಗಜಿಣಗಿ ಅವರು ರಾಷ್ಟ್ರೀಯ
ಹೆದ್ದಾರಿಗಳ ಅಭಿವೃದ್ಧಿ ಮಾಡಿದ್ದಾರೆ. ಆದರೆ ಸ್ಥಳೀಯ ಶಾಸಕರು, ಸ್ಥಳೀಯ
ಸಂಸ್ಥೆಗಳು ಮಾಡುವ ಕೆಲಸಗಳನ್ನು ಸಂಸದರು ಮಾಡಲಿಲ್ಲ ಎಂದು
ಜನ ದೂರುವ ಸ್ಥಿತಿ ಇದೆ. ಜಾಗೃತಿ ಕೊರತೆಯೇ ಇದಕ್ಕೆ ಕಾರಣವಾಗಿದೆ.
ಸಂಸದರ ಇತಿ-ಮಿತಿಯ ಕುರಿತು ಮನವರಿಕೆ ಮಾಡಿಕೊಡುವ ಅಗತ್ಯವೂ
ಇದೆ ಎಂದರು.

ದೇಶದಲ್ಲಿ ಎಲ್ಲಿಯೇ ಹೋಗಲಿ ನಾವು ಬಿಜೆಪಿಗೆ ಮತ ಹಾಕಿ ಎಂದು
ಕೇಳುವ ಮೊದಲೇ ಎಲ್ಲೆಡೆ ಜನರು ಮೋದಿ ಮೋದಿ ಎಂದು ಕೂಗುವ
ಮೂಲಕ ಸ್ವಯಂ ಪ್ರೇರಿತರಾಗಿ ಮೋದಿ ಮತ್ತೂಮ್ಮೆ, ಮಗದೊಮ್ಮೆ
ಎಂದು ಅಭಯ ನೀಡುತ್ತಿದ್ದಾರೆ. ದೇಶದ ಹಿತಕ್ಕಾಗಿ ಮೋದಿ ಅವರು
ಮತ್ತೂಮ್ಮೆ ಪ್ರಧಾನಿ ಆಗಲಿ ಎಂಬುದು ದೇಶದ ಜನರ ಆಶಯ ಹೊಂದಿದ್ದಾರೆ.
ಕಾರಣ 60 ವರ್ಷದಲ್ಲಿ ಮಾಡಲಾಗದ ಕೆಲಸವನ್ನು 5 ವರ್ಷದಲ್ಲಿ ಮಾಡಿಲ್ಲ
ಏಕೆ ಎಂದು ಕೇಳುವ ಮಟ್ಟಿಗೆ ಜನತೆ ಮೋದಿ ಅವರ ಮೇಲೆ ವಿಶ್ವಾಸ
ಇರಿಸಿರುವುದನ್ನು ಇದು ಮನವರಿಕೆ ಮಾಡಿಕೊಡುತ್ತದೆ ಎಂದರು.

ಬಿಜೆಪಿ ಮಹಿಳೆಯರ ಪರವಾಗಿದ್ದು, ಕೇಂದ್ರದಲ್ಲಿ ಮೊಟ್ಟ ಮೊದಲು
ಮಹಿಳೆಯನ್ನೇ ರಕ್ಷಣೆ, ವಿದೇಶಾಂಗ ಸೇರಿ ಮೋದಿ ಸರ್ಕಾರದಲ್ಲಿ 9
ಮಹಿಳೆಯರು ಸಚಿವರಾಗಿದ್ದಾರೆ. ಇದು ನಮ್ಮ ಪಕ್ಷದಲ್ಲಿ ಮಹಿಳೆಗೆ ರಾಜಕೀಯ
ಅಧಿಕಾರದ ಸಂದರ್ಭದಲ್ಲಿ ಆದ್ಯತೆ ನೀಡಿರುವುದಕ್ಕೆ ಸಾಕ್ಷಿ. ಇದಲ್ಲದೇ
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ನೀಡಿದ್ದೇ
ಬಿಜೆಪಿ. ಹೀಗಾಗಿ ಮಹಿಳೆಯರು ಬಿಜೆಪಿ ಮಟ್ಟಿಗೆ ಮತ ಬ್ಯಾಂಕ್‌ ಮಾತ್ರವಲ್ಲ
ರಾಜಕೀಯ ಮುನ್ನೆಲೆಯಲ್ಲೂ ಅವಕಾಶ ಕಲ್ಪಿಸಿದೆ. ತೇಜಸ್ವಿನಿ ಅನಂತಕುಮಾರ ಅವರಿಗೆ ಟಿಕೆಟ್‌ ಕೊಡಬೇಕಾಗಿತ್ತು ಎನ್ನುವುದು ನನ್ನ
ಭಾವನೆಯೂ ಹೌದು. ಆದರೆ ಅದು ಹೈ-ಕಮಾಂಡ್‌ ನಿರ್ಧಾರ ಇರುವ
ಕಾರಣ ಈ ಕುರಿತು ಪ್ರತಿಕ್ರಿಯಿಸುವ ಮಿತಿ ನನ್ನದಲ್ಲ ಎಂದರು.

ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನಮ್ಮ ಪಕ್ಷದ ಶಾಸಕರಾಗಿದ್ದು, ಮನೆ ಎಂದಮೇಲೆ ಸಣ್ಣ-ಪುಟ್ಟ ವ್ಯತ್ಯಾಸಗಳಿರುತ್ತವೆ. ಎಲ್ಲವೂ ಸರಿ ಹೋಗುತ್ತದೆ. ನರೇಂದ್ರ ಮೋದಿ ಅವರು ಮತ್ತೂಮ್ಮೆ ಪ್ರಧಾನಿ ಆಗಲೆಂಬ ಕನಸು ಹೊಂದಿದ್ದಾರೆ. ಹೀಗಾಗಿ ಅವರು ಕೂಡ ರಮೇಶ ಜಿಗಜಿಣಗಿ
ಪರವಾಗಿ ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಲ್ಲಮ್ಮ ಜೋಗೂರ, ಜಿಪಂ ಸದಸ್ಯೆ ದಾನಮ್ಮ ಅಂಗಡಿ, ಮಾಜಿ ಸದಸ್ಯೆ ಸೌಮ್ಯಾ ಕಲ್ಲೂರ, ಅಶ್ವಿ‌ನಿ ಪಟ್ಟಣಶೆಟ್ಟಿ,
ಮಂಜುಳಾ ಅಂಗಡಿ, ಅನುರಾಧಾ ಕಲಾಲ, ರಜನಿ ಸಂಬಣ್ಣಿ, ಗೀತಾ
ಕುಗನೂರ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.