ರಸ್ತೆಗೆ ವಾಹನಗಳಿಂದ ಆಯಿಲ್‌ ಸೋರಿಕೆ; ಸವಾರರಿಗೆ ಸಂಕಷ್ಟ

ಎರಡು ವಾರಗಳಲ್ಲಿ ಮೂರು ಘಟನೆ

Team Udayavani, Apr 13, 2019, 6:08 AM IST

1204mlr20

ನಗರದ ಕದ್ರಿ ರಸ್ತೆಯಲ್ಲಿ ಶುಕ್ರವಾರ ವಾಹನದಿಂದ ಆಯಿಲ್‌ ಸೋರಿಕೆಯಾಗಿ ಸುಗಮ ಸಂಚಾರಕ್ಕೆ ಕಷ್ಟವಾಯಿತು

ವಿಶೇಷ ವರದಿ- ಮಹಾನಗರ: ವಾಹನಗಳು ಸಂಚರಿಸುತ್ತಿರುವಾಗಲೇ ಆಯಿಲ್‌ ಸೋರಿಕೆಯಾಗಿ ರಸ್ತೆಗೆ ಬೀಳುತ್ತಿರುವ ಘಟನೆಗಳು ನಗರದಲ್ಲಿ ಹೆಚ್ಚಾಗುತ್ತಿದ್ದು, ಪರಿಣಾಮ ಇತರೇ ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ನಗರದಲ್ಲಿ ಎರಡು ವಾರಗಳಲ್ಲಿ ಈ ರೀತಿಯ ಮೂರು ಘಟನೆಗಳು ನಡೆದಿದ್ದು, ಮೆಕ್ಯಾನಿಕ್‌ಗಳ ಪ್ರಕಾರ ಇದಕ್ಕೆ ಮಾಲಕರ ಬೇಜವಾಬ್ದಾರಿ ಮತ್ತು ಕರಾವಳಿಯ ಉರಿ ಬಿಸಿಲು ಕೂಡ ಒಂದು ರೀತಿಯ ಕಾರಣ ಎನ್ನಲಾಗುತ್ತಿದೆ.

ವಾಹನಗಳು ಚಾಲನೆಯ ಸಮಯದಲ್ಲಿ ವಾತಾವರಣದ ಉಷ್ಣಾಂಶಕ್ಕಿಂತ ಹೆಚ್ಚಿನ ಬಿಸಿ ಇರುತ್ತದೆ. ಇದೇ ಕಾರಣಕ್ಕೆ ಎಂಜಿನ್‌ ಜತೆಗೆ ಗಾಡಿಯಲ್ಲಿರುವ ಆಯಿಲ್‌ ಸೀಲ್‌ ಕೂಡ ಬಿಸಿಯಿಂದ ಕೂಡಿರುತ್ತದೆ. ಉಷ್ಣತೆಯ ಹೆಚ್ಚಳದಿಂದ ಆಯಿಲ್‌ ಸೀಲ್‌ಗ‌ಳು ಸವೆದು ಹೋಗುವ ಸಾಧ್ಯತೆ ಹೆಚ್ಚಿದೆ. ಸವೆದು ಹೋದ ಜಾಗದಲ್ಲಿ ಆಯಿಲ್‌ ಸೋರಿಕೆಯಾಗುತ್ತದೆ. ವಾಹನಗಳಿಂದ ರಸ್ತೆಗೆ ಆಯಿಲ್‌ ಸೋರಿಕೆಯಾಗಿ ಇತರೇ ವಾಹನ ಸವಾರರು ಸಂಕಷ್ಟ ಅನುಭವಿಸಿದ ಪ್ರಕರಣಗಳು ನಗರದಲ್ಲಿ ಆಗಾಗ್ಗೆ ಸಂಭವಿಸುತ್ತಿದೆ. ಮಾ. 31ರಂದು ನಗರದ ಅಂಬೇಡ್ಕರ್‌ ವೃತ್ತದಿಂದ ಲಾಲ್‌ಬಾಗ್‌ವರೆಗೆ ಕೆಎಸ್ಸಾರ್ಟಿಸಿ ಬಸ್‌ನಿಂದ ಆಯಿಲ್‌ ಸೋರಿಕೆಯಾದ ಪರಿಣಾಮ 10ಕ್ಕೂ ಹೆಚ್ಚಿನ ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಜಾರಿ ಬಿದ್ದು ಗಾಯಗೊಂಡಿದ್ದರು. ಇದೇ ವೇಳೆ, ಮಾನವೀಯತೆ ಮೆರೆದ ಆಟೋ ಚಾಲಕರು ತಮ್ಮ ರಿಕ್ಷಾದಲ್ಲಿ ಮಣ್ಣು ತುಂಬಿಸಿ ರಸ್ತೆಯಲ್ಲಿ ಚೆಲ್ಲಿದ್ದ ಆಯಿಲ್‌ ಮೇಲೆ ಹಾಕಿದ್ದರು.

ಅದೇ ರೀತಿ ಎ. 4ರಂದು ನಗರದ ಲಾಲ್‌ಬಾಗ್‌ನಲ್ಲಿ ಲಾರಿಯೊಂದರಿಂದ ಆಯಿಲ್‌ ಸೋರಿಕೆಯಾಗಿ ದ್ವಿಚಕ್ರವಾಹನ ಸವಾರರೊಬ್ಬರು ಬಿದ್ದು ಗಾಯಗೊಂಡಿದ್ದರು.

ಇದೇ ವೇಳೆ ಸ್ಥಳದಲ್ಲಿದ್ದ ಸಂಚಾರಿ ಪೊಲೀಸರು ಆ ಸ್ಥಳಕ್ಕೆ ಮಣ್ಣು ಹಾಕಿ ಅನಾಹುತ ತಡೆದಿದ್ದರು. ಎ. 12ರಂದು ನಗರದ ಕದ್ರಿ ರಸ್ತೆಯಲ್ಲಿ ವಾಹನದಿಂದ ಆಯಿಲ್‌ ಸೋರಿಕೆಯಾಗಿ ಅನೇಕ ವಾಹನಗಳು ಸ್ಕಿಡ್‌ ಆದ ಘಟನೆ ನಡೆದಿದೆ. ಬಳಿಕ ಸ್ಥಳೀಯರ ಸಹಾಯದಿಂದ ಆ ಸ್ಥಳಕ್ಕೆ ಮರಳು ಮತ್ತು ಮಣ್ಣು ಹಾಕಲಾಯಿತು. ಬಳಿಕ ಸುಗಮ ಸಂಚಾರ ಆರಂಭವಾಯಿತು.

ಆರಕ್ಷಕರೇ ರಕ್ಷಕರು
ವಾಹನಗಳಿಂದ ರಸ್ತೆಯಲ್ಲಿ ಆಯಿಲ್‌ ಸೋರಿಕೆಯಾದ ವೇಳೆಯಲ್ಲಿ ಉಳಿದ ವಾಹನಗಳು ಸಾಮಾನ್ಯವಾಗಿ ಸ್ಕಿಡ್‌ ಆಗುತ್ತವೆ. ಈ ಸಮಯದಲ್ಲಿ ನೆರವಿಗೆ ಧಾಮಿಸುವವರು ಸ್ಥಳೀಯರು ಮತ್ತು ಆರಕ್ಷಕರು. ಅಕ್ಕ ಪಕ್ಕದ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಅನೇಕ ಬಾರಿ ರಸ್ತೆಗೆ ಆಯಿಲ್‌ ಸೋರಿದ ಜಾಗಕ್ಕೆ ಮಣ್ಣು ಹಾಕಿದ್ದ ಉದಾಹರಣೆ ಇವೆ.

ಇತ್ತೀಚೆಗೆ ಲಾಲ್‌ಬಾಗ್‌ ವೃತ್ತದಲ್ಲಿ ವಾಹನದಿಂದ ಆಯಿಲ್‌ ಸೋರಿಕೆಯಾದ ಸಮಯದಲ್ಲಿ ಅಲ್ಲೇ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್‌ ಶ್ರೀಕಾಂತ್‌ ಅವರು ಆಯಿಲ್‌ ಚೆಲ್ಲಿದ ರಸ್ತೆಗೆ ಮಣ್ಣುಹಾಕಿ ಅನಾಹುತ ತಡೆದಿದ್ದರು.

ಹೀಗೆ ಮಾಡಿ ..
ವಾಹನ ಚಾಲನೆ ಸಮಯದಲ್ಲಿ ಒಂದು ವೇಳೆ ಆಯಿಲ್‌ ಸೋರಿಕೆ ಕಂಡುಬಂದರೆ ಕೂಡಲೇ ವಾಹನ ನಿಲ್ಲಿಸಿ ಮೆಕ್ಯಾನಿಕ್‌ಗೆ ಕರೆ ಮಾಡಿ. ಬೇಸಗೆ ಕಾಲದಲ್ಲಿ ಆಯಿಲ್‌ ಸೀಲ್‌ಗ‌ಳು ಸವೆದು ಹೋಗುವ ಸಾಧ್ಯತೆ ಹೆಚ್ಚಿದ್ದು, ಶೋರೂಂಗಳಲ್ಲಿ ಪರಿಶೀಲನೆ ನಡೆಸಿ. ಕೆಲವೊಂದು ಬಾರಿ ಆಯಿಲ್‌ ಬಾಕ್ಸ್‌ನ ಬೋಲ್ಟ್ ಸಡಿಲವಾಗಿದ್ದರೂ ಸೋರಿಯಾಗಬಹುದು. ಪ್ರಯಾಣದ ಮುನ್ನ ಪರಿಶೀಲಿಸಿ.

 ಆಯಿಲ್‌ ಸೀಲ್‌ ಸವೆದು ಸೋರಿಕೆ
ಬೇಸಗೆ ಸಮಯದಲ್ಲಿ ವಾಹನಗಳ ಎಂಜಿನ್‌ ಬಿಸಿ ಜಾಸ್ತಿ ಇರುತ್ತದೆ. ಇದರ ಪರಿಣಾಮ ಆಯಿಲ್‌ ಸೀಲ್‌ಗ‌ಳು ಸವೆದು ಹೋಗಬಹುದು. ಇದರಿಂದ ಆಯಿಲ್‌ ಸೋರಿಕೆ ಆಗಬಹುದು. ಒಂದು ವೇಳೆ ಆಯಿಲ್‌ ಸೋರಿಕೆ ಕಂಡುಬಂದರೆ ಹತ್ತಿರದ ಮೆಕ್ಯಾನಿಕ್‌ ಸಂಪರ್ಕಿಸಿ.
 - ರಾಜೇಶ್‌ ನಂತೂರು,
ಮೆಕ್ಯಾನಿಕ್‌

 ನ್ಯೂನತೆಗಳಿದ್ದಲ್ಲಿ ಸರಿಪಡಿಸಿ
ಸಾಮಾನ್ಯವಾಗಿ ವಾಹನ ಮಾಲಕರ ಬೇಜವಾಬ್ದಾರಿಯಿಂದಾಗಿ ಆಯಿಲ್‌ ಸೋರಿಕೆಯಾಗುತ್ತದೆ. ಸರಿಯಾದ ಸಮಯದಲ್ಲಿ ವಾಹನ ಸರ್ವಿಸ್‌ ಮಾಡಿಸಬೇಕು. ವಾಹನಗಳ ಬಿಡಿ ಭಾಗದಲ್ಲಿ ಯಾವುದಾದರೂ ನ್ಯೂನತೆಗಳಿದ್ದಲ್ಲಿ ಸರಿಪಡಿಸಬೇಕು.
 - ಅರುಣ್‌,
ವಾಹನ ಚಾಲಕ

ಟಾಪ್ ನ್ಯೂಸ್

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.