ಅಂತ್ಯಸಂಸ್ಕಾರ ವೇಳೆ ಅವಘಡ; ಹೊತ್ತಿ ಉರಿದ ಗಿಡ-ಗಂಟಿ
Team Udayavani, Apr 19, 2019, 4:22 PM IST
ಗುತ್ತಲ: ಅಂತ್ಯ ಸಂಸ್ಕಾರದ ವೇಳೆ ಶವಕ್ಕೆ ಹಚ್ಚಿದ್ದ ಬೆಂಕಿ ಗಾಳಿಗೆ ಸ್ಮಶಾನದ ಪಕ್ಕದಲ್ಲಿದ್ದ ಹೊಲಕ್ಕೂ ಆವರಿಸಿದ ಪರಿಣಾಮ ಹಲವು ನಿಂಬೆ ಗಿಡಗಳು ಭಸ್ಮವಾದ ಘಟನೆ ನಡೆದಿದೆ.
ಬುಧವಾರ ಸ್ಥಳೀಯ ರೈತರೊಬ್ಬರು ನಿಧನರಾದ ಹಿನ್ನೆಲೆ ಸ್ಮಶಾನದಲ್ಲಿ ಶವ ಸಂಸ್ಕಾರ ನಡೆಸಲಾಗುತ್ತಿತ್ತು. ಈ ವೇಳೆ ಶವಕ್ಕೆ ಅಗ್ನಿಸ್ಪರ್ಶ ಮಾಡುತ್ತಿದ್ದಂತೆ ಪಕ್ಕದಲ್ಲಿಯೇ ಇದ್ದ ಜಾಲಿ ಗಿಡಗಳಿಗೆ ಬೆಂಕಿ ತಗುಲಿತು. ಕೂಡಲೇ ಎಚ್ಚೆತ್ತ ಸ್ಥಳೀಯರು ಅಗ್ನಿ ಶಾಮಕಕ್ಕೆ ಮಾಹಿತಿ ನೀಡಿ, ತಾವೂ ಬೆಂಕಿ ನಂದಿಸಲು ಮುಂದಾದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಸ್ಮಶಾನ ಪಕ್ಕದ ಹೊಲದಲ್ಲಿ ಬೆಳೆದಿದ್ದ ಕೆಲ ನಿಂಬೆಗಿಡಗಳು ಸಹ ಬೆಂಕಿಗಾಹುತಿಯಾಗಿವೆ.
ಅಗ್ನಿಶಾಮಕ ಸಿಬ್ಬಂದಿಗಳಾದ ಬಿ.ಟಿ.ನಾಗೇಶ, ಎಸ್.ಎಚ್. ಪ್ರಸನ್ನಕುಮಾರ, ವೀರೇಶ ತೆಗ್ಗಿನ, ರಮೇಶ ಗುಂಜಾಳ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ
ಹಾವೇರಿ: ಕಾಂಗ್ರೆಸ್ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ
ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ