ಹನುಮಂತ ಭಕ್ತಿಯ ಪ್ರತಿರೂಪ: ಪಲಿಮಾರು ಶ್ರೀ
Team Udayavani, Apr 20, 2019, 6:07 AM IST
ಉಡುಪಿ: ಹನುಮ ದೇವರುಭಕ್ತಿಯ ಪ್ರತಿರೂಪ. ಕರ್ತವ್ಯದ ಸಾಕಾರ ಮೂರ್ತಿ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ತಿಳಿಸಿದರು.
ಶ್ರೀಕೃಷ್ಣ ಮಠ, ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿ ವತಿಯಿಂದ ಶುಕ್ರವಾರ ಶ್ರೀಕೃಷ್ಣ ಮಠ ದಲ್ಲಿ 13ನೇ ವರ್ಷದ ಹನುಮ ಜಯಂತಿ ಉತ್ಸವದ ಅಂಗವಾಗಿ ಹಮ್ಮಿ ಕೊಂಡ ಅನ್ನಸಂತರ್ಪಣೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಉಸಿರಾಟ ಮಾಡಿಸುವ ವಾಯು ದೇವರು ಮತ್ತು ಹನುಮಂತ ದೇವರು ನಮ್ಮ ಜತೆಗಿರುವಷ್ಟು ದಿನ ಬದುಕು ಶಾಶ್ವತವಾಗಿರುತ್ತದೆ. ಹನುಮ ಜಯಂತಿ ಎಂದರೆ ಕೇವಲ ಹನುಮಂತ ದೇವರ ಜಯಂತಿ ಮಾತ್ರವಲ್ಲ, ನಮ್ಮೆಲ್ಲರದೂ ಕೂಡ. ಹನುಮ ಜಯಂತಿಯ ಈ ಪರ್ವಕಾಲದಲ್ಲಿ ದೇವರು ಲೋಕಕ್ಕೆ ಒಳಿತನ್ನು ಮಾಡಲಿ ಎಂದು ಹೇಳಿದರು.
ಬೆಳಗ್ಗೆ ವಾಯುಸ್ತುತಿ ಪುರಶ್ಚರಣ ಹೋಮ, ಶ್ರೀಕೃಷ್ಣ ಮಹಾ ಮಂತ್ರ ಹೋಮ, ಮಹಾಮಂತ್ರ ಹೋಮ, ಕೃಷ್ಣನಿಗೆ ವಜ್ರ ಕವಚ, ಹೂವಿನ ಸೇವೆ ಜರಗಿತು. ವಿವಿಧ ತಂಡಗಳಿಂದ ಭಜನೆ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯ ಮತ್ತು ಬಳಗದವರಿಂದ ಭಕ್ತಿಗಾನ, ರಾಜಾಂಗಣದಲ್ಲಿ ಪಡು ಬಿದ್ರಿ ಚಂದ್ರಕಾಂತ – ಬಳಗದವ ರಿಂದ ಸುಗಮ ಸಂಗೀತ, ಪುತ್ತಿಗೆ ಚಂದ್ರ ಶೇಖರ್ ಸಂಗೀತ ಸೇವೆ ನಡೆಯಿತು.
ಭುವನೇಂದ್ರ ಕಿದಿಯೂರು, ಹರಿಯಪ್ಪ ಕೋಟ್ಯಾನ್, ಜಿತೇಶ್ ಕಿದಿಯೂರು, ಮನೋಹರ್ ಶೆಟ್ಟಿ, ಯುವರಾಜ್ ಸಾಲ್ಯಾನ್ ಮಸ್ಕತ್, ಮಧುಸೂದನ ಪೂಜಾರಿ, ಮಾಧವ ಸುವರ್ಣ, ಈಶ್ವರ್ ಚಿಟ್ಟಾಡಿ, ಎಂ.ಎಸ್. ಭಟ್ ಮಲ್ಪೆ, ಮಠದ ಪಿಆರ್ಒ ಶ್ರೀಶ ಕಡೆಕಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್
Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ
Sandalwood: ದರ್ಶನ್ ʼಡೆವಿಲ್ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್ ಪೋಸ್ಟರ್ ಔಟ್
Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ
Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ