ಕೋಟೆಕಾರು: ರಿಕ್ಷಾದ ಮೇಲೆ ಬಿದ್ದ ಮರ
Team Udayavani, Apr 23, 2019, 6:15 AM IST
ಉಳ್ಳಾಲ: ಚಲಿಸುತ್ತಿದ್ದ ರಿಕ್ಷಾದ ಮೇಲೆ ಮರ ಬಿದ್ದ ಘಟನೆ ಕೋಟೆಕಾರು ಪಟ್ಟಣ ಪಂಚಾಯತ್ ಬಳಿ ಸಂಭವಿಸಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ರಿಕ್ಷಾದಲ್ಲಿದ್ದ ಐವರು ಪಾರಾಗಿದ್ದಾರೆ.
ಮರ ಬೀಳುತ್ತಿದ್ದಂತೆ ರಿಕ್ಷಾ ಚಾಲಕ ಉಮೇಶ್ ಪೂಜಾರಿ ಅವರು ಹಠಾತ್ ಬ್ರೇಕ್ ಹಾಕಿದ್ದಾರೆ. ಪರಿಣಾಮ ರಿಕ್ಷಾದ ಮುಂಭಾಗ ಮಾತ್ರ ಹಾನಿಗೀಡಾಗಿದೆ.
ಘಟನೆಯ ವಿವರ
ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳಿದ್ದ ಕುಟುಂಬದ ಸದಸ್ಯರು ತಲಪಾಡಿಯಿಂದ ಸೋಮೇಶ್ವರ ಕಡೆ ಸಂಚರಿಸಲು ತಲಪಾಡಿ ರಿಕ್ಷಾ ಪಾರ್ಕ್ನಿಂದ ಉಮೇಶ್ ಪೂಜಾರಿಯವರ ರಿಕ್ಷಾ ಹತ್ತಿದ್ದರು. ಹೆದ್ದಾರಿ ಮೂಲಕ ಸಾಗಿ ಕೋಟೆಕಾರು ಬಳಿ ಸೋಮೇಶ್ವರದ ಒಳರಸ್ತೆಗೆ ತಿರುಗಿಸಿದ ಕೆಲವೇ ಕ್ಷಣಗಳಲ್ಲಿ ಕೋಟೆಕಾರು ಪಟ್ಟಣ ಪಂಚಾಯತ್ ಬಳಿ ಘಟನೆ ಸಂಭವಿಸಿದೆ. ಬ್ರೇಕ್ ಹಾಕಿದ್ದರಿಂದ ಮರದ ಗೆಲ್ಲೊಂದು ರಿಕ್ಷಾದ ಮುಂಭಾಗಕ್ಕೆ ತಗುಲಿ ಹಾನಿಯಾಗಿದೆ. ಚಾಲಕ ಮತ್ತು ಐವರು ಪ್ರಯಾಣಿಕರು ಪಾರಾದರು.
ಸ್ಥಳೀಯರು ಧಾವಿಸಿ ರಿಕ್ಷಾದಲ್ಲಿದ್ದವರನ್ನು ರಕ್ಷಿಸಿದರು.
ಸಂಚಾರ ಅಸ್ತವ್ಯಸ್ತ
ಘಟನೆ ಬಳಿಕ ಕೋಟೆಕಾರು ಮಾರ್ಗವಾಗಿ ಸೋಮೇಶ್ವರ, ಉಳ್ಳಾಲ ಕಡೆಗೆ ಸಂಚಾರ ವ್ಯತ್ಯಯವಾಯಿತು. ಉಳ್ಳಾಲ ಪೊಲೀಸರು ಹಾಗೂ ಸ್ಥಳೀಯ ಮೆಸ್ಕಾಂ ಸಿಬಂದಿ ಸೇರಿ ಸುಮಾರು 2 ಗಂಟೆ ಶ್ರಮಿಸಿ ಸಂಚಾರ ಸುಗುಮಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ
MUST WATCH
ಹೊಸ ಸೇರ್ಪಡೆ
Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ