ಗುಳೆ ಹೋಗಿದ್ದ 16 ಸಾವಿರ ಜನ ಮತ ಹಾಕಲು ಸ್ವಗ್ರಾಮಕ್ಕೆ ವಾಪಸ್
Team Udayavani, Apr 23, 2019, 4:14 PM IST
ಚಿಂಚೋಳಿ: ತಾಲೂಕಿನಿಂದ ನಗರ ಪ್ರದೇಶಗಳಿಗೆ ಕುಟುಂಬ ಸಮೇತ ವಲಸೆ ಹೋಗಿರುವ ಸುಮಾರು 16 ಸಾವಿರ ಜನ ಬೀದರ ಲೋಕಸಭೆ ಚುನಾವಣೆಯಲ್ಲಿ ಮತ ಹಾಕಲು ಸ್ವಗ್ರಾಮ ಮತ್ತು ತಾಂಡಾಗಳಿಗೆ ಸೋಮವಾರ ಮರಳಿದ್ದಾರೆ.
ತಾಲೂಕಿನ ಚೆಂಟಗಾ, ಪಾಲತ್ಯಾ ತಾಂಡಾ, ಸಜ್ಜನಕೊಳ್ಳ, ಐನಾಪೂರ, ಭೂಯ್ನಾರ, ಬೆಡಸೂರ ತಾಂಡಾ, ಕೋಡ್ಲಿ ರಾಮನಗರ ತಾಂಡಾ, ಚಂದನಕೇರಾ, ಸಲಗರ ಬಸಂತಪೂರ, ಅಲ್ಲದೇ ಕುಂಚಾವರಂ ಗಡಿಪ್ರದೇಶದಲ್ಲಿ ಇರುವ ಸಂಗಾಪೂರ, ಶಾದಿಪೂರ, ಜಿಲವರ್ಷ, ವೆಂಕಟಾಪೂರ, ಪೆದ್ದಾತಾಂಡ, ಶ್ರೀನಗರ ತಾಂಡಾ, ವಂಟಿಚಿಂತಾ, ವಂಟಿಗುಡುಸಿ ತಾಂಡಾ, ಧರ್ಮಸಾಗರ, ಸೇರಿಭಿಕನಳ್ಳಿ, ಲಿಂಗಾನಗರ, ಚಿಂದಾನೂರ, ಜವಾಹರ ನಗರ ತಾಂಡಾ, ಚಾಪ್ಲಾ ನಾಯಕ ತಾಂಡಾ, ಭಿಕ್ಕು ನಾಯಕ ತಾಂಡಾಗಳ ಕೆಲವರು ಉದ್ಯೋಗಕ್ಕಾಗಿ ಮಹಾರಾಷ್ಟ್ರದ ಮುಂಬೈ, ಪುಣೆ, ನಾಗಪೂರ, ಉಸ್ಮಾನಾಬಾದ, ಸೊಲ್ಲಾಪುರ, ಉದಗೀರ, ಗುಜರಾತ್, ಅಹ್ಮದನಗರ ಅಲ್ಲದೇ ತೆಲಂಗಾಣ ರಾಜ್ಯದ ಮೆಹಬೂಬನಗರ, ಸಂಗಾರೆಡ್ಡಿ, ಮೇದಕ, ಕರಿಂನಗರ, ಹೈದ್ರಾಬಾದ್, ಬೆಂಗಳೂರು, ಮೈಸೂರ ನಗರ ಪ್ರದೇಶಗಳಿಗೆ ಉದ್ಯೋಗಕ್ಕಾಗಿ ಹೋಗಿದ್ದರು. ಮತ ಹಾಕುವುದಕ್ಕಾಗಿ ತಮ್ಮ ಗ್ರಾಮಕ್ಕೆ ರವಿವಾರದಿಂದಲೇ ವಾಪಸ್ ಆಗುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ