ಕೇಸರಿಯನ್ನು ಇಳಿಸಲು ಅಸಾಧ್ಯ: ಠಾಕ್ರೆ
Team Udayavani, Apr 24, 2019, 4:00 PM IST
ಸಂಗಂನೇರ್: ಚುನಾವಣೆಯಲ್ಲಿ ಬಿಜೆಪಿಯ ಜತೆ ನಾವು ಕೇಸರಿ ಮೈತ್ರಿ ಮಾಡಿಕೊಂಡಿದ್ದೇವೆ. ನಮ್ಮ ಮೈತ್ರಿಯನ್ನು ಟೀಕಿಸುವವರು ಟೀಕಿಸುತ್ತಾ ಇರಲಿ, ಕೇಸರಿಯನ್ನು ಕೆಳಗೆ ಇಳಿಸಲು 56 ಪಕ್ಷಗಳು ಒಟ್ಟಾಗಿವೆ. 56 ಪಕ್ಷಗಳೂ ಒಂದಾಗಿ ಬಂದರೂ ಕೂಡ ಕೇಸರಿಯನ್ನು ಕೆಳಗೆ ಇಳಿಸಲು ಅಸಾಧ್ಯವೆಂದು ಮಹಾಮೈತ್ರಿ ಮೇಲೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ವಾಗ್ಧಾಳಿ ನಡೆಸಿದ್ದಾರೆ.
ಶಿರ್ಡಿ ಲೋಕಸಭೆ ಕ್ಷೇತ್ರದ ಶಿವಸೇನೆ ಅಭ್ಯರ್ಥಿ ಸದಾಶಿವ್ ಲೋಖಂಡೆ ಅವರ ಪ್ರಚಾರ ಸಭೆ ಸಂಗಂನೇರ್ನಲ್ಲಿ ಆಯೋಜಿಸಲಾಯಿತು. ಈ ವೇಳೆ ಮಾತನಾಡಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು, ಬಾಳ ಸಾಹೇಬ್ ಠಾಕ್ರೆ, ಗೋಪಿನಾಥ ಮುಂಢೆ, ಪ್ರಮೋದ್ ಮಹಾಜನ್ ಅವರಂಥ ದಿಗ್ಗಜ ನಾಯಕರು ತಮ್ಮ ಜೀವನವನ್ನು ಕೇಸರಿಗಾಗಿ ಮುಡಿಪಾಗಿ ಇರಿಸಿದ್ದರು ಎಂದರು.
ದೇಶದ ಸ್ವಾತಂತ್ರ್ಯಕ್ಕಾಗಿ ಅಂದು ನಿರ್ಮಿಸಲಾದ ಕಾಂಗ್ರೆಸ್, ಪ್ರಸಕ್ತ ಅದೇ ಕಾಂಗ್ರೆಸ್ ಆಗಿ ಉಳಿಯಲಿಲ್ಲ. ಪ್ರಸಕ್ತ ಕಾಂಗ್ರೆಸ್ನ ಪ್ರಣಾಳಿಕೆಯಲ್ಲಿ ದೇಶದ್ರೋಹ ನಿಯಮ ಮಾಡುವ ಭಾಷೆ ಆಡುತ್ತಿದೆ. ದೇಶದ್ರೋಹದ ನಿಯಮ ಮಾಡಲು ಇವರಿಗೆ ನಾಚಿಕೆ ಆಗುವುದಿಲ್ಲವೇ ಎನ್ನುವ ಪ್ರಶ್ನೆ ಯನ್ನು ಉದ್ಧವ್ ಠಾಕ್ರೆ ಮಾಡಿದರು.
ಈ ಚುನಾವಣೆಯು ದೇಶದ ಚುನಾವಣೆ ಆಗಿದೆ. ನಾವು 370ರ ನಿಯಮ ತೆಗೆದು ಹಾಕಲಿದ್ದೇವೆ. ಪಾಕಿಸ್ಥಾನದ ಹೆದರಿಕೆ ನಮಗಿಲ್ಲ. ನಾವು ಪರಮಾಣು ವ್ಯವಸ್ಥೆಯನ್ನು ದೀಪಾವಳಿಗಾಗಿ ಇರಿಸಿಕೊಳ್ಳಲಿಲ್ಲ ಎಂದು ಹೇಳುವ ಮೋದಿ ಅವರು ದೇಶದ ಮೊದಲ ಪ್ರಧಾನಮಂತ್ರಿ ಆಗಿದ್ದಾರೆಂದು ಠಾಕ್ರೆ ಹೇಳಿದ್ದಾರೆ.
ಆದಿವಾಸಿಗರ ಮೀಸಲಾತಿಗೆ ಯಾವುದೇ ಸಮಸ್ಯೆನೀಡದೆ, ನಾವು ಇತರರಿಗೂ ಮೀಸಲಾತಿ ನೀಡಲಿದ್ದೇವೆ ಎಂಬ ಆಶ್ವಾಸನೆ ಪೂರ್ಣ ಗೊಳಿಸಲಿದ್ದೇವೆ. ನಾವು ಶರದ್ ಪವಾರ್ ಅವರಂತೆ ಕೇವಲ ಭರವಸೆ ನೀಡುವವರಲ್ಲ ಎಂದು ಶಿವಸೇನೆ ಮುಖ್ಯಸ್ಥ ಠಾಕ್ರೆ ಹೇಳಿದ್ದಾರೆ.
ಸರ್ಜಿಕಲ್ ದಾಳಿಯ ಮೇಲೆ ಸಂಶಯ ಪಡುವವರು, ನಮ್ಮ ದೇಶದ ಸೈನಿಕರ ಮೇಲೆ ವಿಶ್ವಾಸವಿಲ್ಲದವರು ಪ್ರಧಾನಮಂತ್ರಿ ಸ್ಥಾನದ ಕನಸು ಕಾಣುತ್ತಿದ್ದಾರೆಂದು ಉದ್ಧವ್ ಠಾಕ್ರೆ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಟೀಕೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು