ಚರಂಡಿಯಲ್ಲಿ ಹಾವಿನ ಮರಿಗಳು ಪ್ರತ್ಯಕ್ಷ
Team Udayavani, May 3, 2019, 3:48 PM IST
ರಾಮನಗರ: ನಗರದ 3ನೇ ವಾರ್ಡ್ನ ಗಾಂಧಿ ನಗರ ಬಡಾವಣೆಯ ಮನೆಯೊಂದರ ಎದುರಿನ ಚರಂಡಿಯಲ್ಲಿ 20ಕ್ಕೂ ಹೆಚ್ಚು ಹಾವಿನ ಮರಿಗಳು ಕಾಣಿಸಿಕೊಂಡಿದ್ದು, ನಿವಾಸಿಗಳಲ್ಲಿ ಆತಂಕ ಉಂಟು ಮಾಡಿದೆ.
ಬಡಾವಣೆಯ ಶುದ್ಧ ಕುಡಿಯುವ ನೀರಿನ ಘಟಕದ ಪಕ್ಕದಲ್ಲಿರುವ ಗೌತಮ್ ಎಂಬುವರ ಮನೆ ಎದುರಿನ ಚರಂಡಿಯಲ್ಲಿ 20ಕ್ಕೂ ಹೆಚ್ಚು ಹಾವಿನ ಮರಿಗಳು ಬೆಳಗ್ಗೆ ಗೌತಮ್ ಮನೆ ಮುಂದೆ ಕಾಣಿಸಿಕೊಂಡಿದೆ. ಆತಂಕದಿಂದ ಹುಡುಕಾಡಿದ ನಂತರ ಮೋರಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಮರಿಗಳು ಕಾಣಿಸಿಕೊಂಡಿವೆ. ಉರಗ ತಜ್ಞರು ಹಾಗೂ ಸಾರ್ವಜನಿಕರ ನೆರವಿನಿಂದ ಹಾವಿನ ಮರಿಗಳನ್ನು ಚೀಲ ವೊಂದರಲ್ಲಿ ರಕ್ಷಿಸಲಾಯಿತು.
ಈ ಹಾವುಗಳು ಮಂಡಲ ಜಾತಿಗೆ ಸೇರಿದ ಹಾವಿನ ಮರಿಗಳು ಎನ್ನಲಾಗಿದ್ದು, ಕೆಲ ಮಂದಿ ಅವುಗಳನ್ನು ಕೋಲಿನಿಂದ ಹೊಡೆಯಲು ಮುಂದಾಗಿದ್ದರು. ಆದರೆ, ಅವರನ್ನು ತಡೆದು ಹಾವುಗಳನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.
ತಾಯಿ ಹಾವಿಗಾಗಿ ಸುತ್ತಮುತ್ತಲಿನ ಚರಂಡಿ ಹಾಗೂ ಮತ್ತಿತರ ಕಡೆ ಶೋಧ ಕಾರ್ಯ ನಡೆಸಿದರಾದರೂ ಕಡೆಗೂ ಅದು ಸಿಗಲಿಲ್ಲ. ಮೊದಲಿಗೆ ಇಷ್ಟೊಂದು ಹಾವಿನ ಮರಿಗಳನ್ನು ಕಂಡು ಗಾಂಧಿ ನಗರದ ನಿವಾಸಿಗಳು ಮರಿಗಳ ರಕ್ಷಣೆ ನಂತರ ನಿಟ್ಟುಸಿರು ಬಿಟ್ಟಿದ್ದಾರೆ. ಘಟನೆಯಿಂದ ನೂರಾರು ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tourist spot: ಪ್ರವಾಸಿಗರ ಡೆತ್ಸ್ಪಾಟ್ ಆಗಿರುವ ಸಂಗಮ
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
MUST WATCH
ಹೊಸ ಸೇರ್ಪಡೆ
CSKvsPBKS; ”ಇದು ಟೀಮ್ ಗೇಮ್….”: ಧೋನಿ ನಡೆಗೆ ಇರ್ಫಾನ್ ಪಠಾಣ್ ಟೀಕೆ
Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್ ಉತ್ಸುಕವಾಗಿದೆ: ಪ್ರಧಾನಿ ಮೋದಿ
Brahmavara-ಉಡುಪಿ ಟ್ರಾಫಿಕ್ ಜಾಮ್ ಸಮಸ್ಯೆ: ಸವಾರರು ಸುಸ್ತೋ ಸುಸ್ತು
Gangster ಗೋಲ್ಡಿ ಬ್ರಾರ್ ಸತ್ತಿಲ್ಲ… ಶೂಟೌಟ್ ಬಗ್ಗೆ ಸ್ಪಷ್ಟನೆ ನೀಡಿದ ಅಮೆರಿಕ ಪೊಲೀಸರು
Pens: ಬಹುರೂಪದಲ್ಲಿ ಲಭ್ಯವಿರುವ ಬಹುಪಯೋಗಿ ಲೇಖನಿ