ರಜೆಯ ಮಜಾ: ನೀರಿನಾಟದಲ್ಲಿ ಇರಲಿ ಎಚ್ಚರ

ಈಜು ಬರುವುದೆಂದುಕೊಂಡು ಅಪಾಯ ಆಹ್ವಾನಿಸಿಕೊಳ್ಳಬೇಡಿ

Team Udayavani, May 6, 2019, 6:13 AM IST

25420405PCR4PH

ಸವಣೂರು: ಬೇಸಗೆಯ ಬಿಸಿ ದಿನೇ ದಿನೇ ಏರುತ್ತಿದೆ. ಬಿಸಿಲಿನ ಝಳದಿಂದ ತಂಪಾಗಲು ನದಿಗಳಲ್ಲಿ ಈಜಾಡುವ ದೃಶ್ಯ ಗಳು ನದಿಯಲ್ಲಿ ಕಾಣಸಿಗುತ್ತಿದೆ. ಹೆಚ್ಚಿನ ಎಲ್ಲ ಕೆರೆ, ಕೊಳ್ಳಗಳಲ್ಲಿ ನೀರು ಸಂಪೂರ್ಣವಾಗಿ ಬತ್ತಿಹೋಗಿದೆ. ಇದರಿಂದಾಗಿ ನದಿಯಲ್ಲಿ ಈಜಾಡುವವರ ಸಂಖ್ಯೆ ಹೆಚ್ಚಳವಾಗಿದೆ. ನದಿ ನೀರು ಆಕರ್ಷಿಸುತ್ತಿವೆ. ನೀರು ಹರಿಯುತ್ತಿರುವುದು ಕಣ್ಮನ ಸೆಳೆಯುವುದರ ಜತೆಗೆ ಅನಾಹುತಕ್ಕೂ ಆಹ್ವಾನ ನೀಡುತ್ತದೆ.

ಈಜು ತರುವ ಅಪಾಯ
ಗ್ರಾಮೀಣ ಪ್ರದೇಶದ ಅಪ್ರಾಪ್ತ ಮಕ್ಕಳು, ಯುವಕರು ಈಜಲು ಹಾಗೂ ಈಜು ಕಲಿಯಲು ನದಿಗಳತ್ತ ತೆರಳುತ್ತಿದ್ದು, ಸೂಕ್ತ ರಕ್ಷಣಾ ವ್ಯವಸ್ಥೆಯಿಲ್ಲದೆ ಈಜು ಬಾರದವರು ಜತೆಗಾರರಿಂದ ಪ್ರೇರಣೆಗೊಂಡು ನೀರಿಗೆ ಧುಮುಕುತ್ತಿದ್ದು, ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆ ಇದೆ.

ಈಜು ಬಂದರೂ ಆಪತ್ತು
ಈ ಸಮಯದಲ್ಲಿ ನದಿಗಳಲ್ಲಿ ನೀರಿರುವು ದರಿಂದ ಹೆಚ್ಚಿನ ಜನರು ನದಿ ಕಡೆಗಳಿಗೆ ಬರುತ್ತಿದ್ದಾರೆ. ನದಿಯ ಮಧ್ಯದಲ್ಲಿ ಕೆಸರು ಗುಂಡಿ ಸಿಗುತ್ತಿವೆ. ಹೀಗಾಗಿ ಈಜು ತಿಳಿದವರೂ ಕೆಸರಿನಲ್ಲಿ ಕಾಲು ಸಿಕ್ಕಿಸಿಕೊಂಡು ಅಪಾಯ ಎದುರಿಸುತ್ತಿದ್ದಾರೆ. ಕೆಲವೆಡೆ ನದಿಯ ಆಳವೂ ಹೆಚ್ಚಾಗಿದ್ದು, ಅದು ತಿಳಿ ಯದೇ ಆಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ.

ನೀರಿನಾಟದಿಂದ ಹಲವೆಡೆ ಜೀವಕ್ಕೆ ಅಪಾಯವಾದ ಘಟನೆ ನಡೆದಿದ್ದು, ನದಿಗಳಿಗೆ ಈಜಲು ತೆರಳುವವರು ಜಾಗ್ರತೆ ವಹಿಸಬೇಕಿದೆ. ಪೋಷಕರು ಮಕ್ಕಳ ನೀರಿನಾಟದ ಬಗ್ಗೆ ಸಾಧ್ಯವಾದಷ್ಟು ನಿಗಾ ವಹಿಸಬೇಕಿದ್ದು, ಅನಾಹುತ ಸಂಭವಿಸುವುದಕ್ಕೂ ಮೊದಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಿದೆ.

ಈಜುವಿರಾ ಹೀಗೆ ಮಾಡಿ
–  ಉತ್ತಮ ಈಜು ಬಲ್ಲವರನ್ನು ಮೊದಲು ನೀರಿಗಿಳಿಸಿ ಆಳ ತಿಳಿಯಿರಿ.
–  ಈಜಲು ತೆರಳುವ ಮುನ್ನ ಮನೆಯವರಿಗೆ ಮಾಹಿತಿ ನೀಡಿ.
–  ಮಕ್ಕಳನ್ನು ನದಿ ತಟಕ್ಕೆ ಕರೆದೊಯ್ಯುವ ವೇಳೆ ಜಾಗ್ರತೆ ವಹಿಸಿ.
–  ಈಜು ಬಾರದವರನ್ನು ಬಲವಂತವಾಗಿ ನೀರಿಗೆ ಇಳಿಸದಿರಿ.
–  ಈಜು ಕಲಿಸುವಾಗ ಅವರ ಎತ್ತರಕ್ಕಿಂತ ಆಳಕ್ಕೆ ಕರೆದೊಯ್ಯದಿರಿ.
– ಪೋಷಕರ ಕಣ್ಣು ತಪ್ಪಿಸಿ ನೀರಿಗೆ ಮಕ್ಕಳು ಇಳಿಯಬಾರದು.

– ಪ್ರವೀಣ್‌ ಚೆನ್ನಾವರ

ಟಾಪ್ ನ್ಯೂಸ್

1–dsdsadd

Honnavar; ಖಾಸಗಿ ಬಸ್‌ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

HDK (3)

Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ

jameer

Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-sampaje

Aranthodu: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ಢಿಕ್ಕಿ ಹೊಡೆದ ಕಾರು

Uppinangady: ತೀವ್ರ ಜ್ವರ; ಅರ್ಚಕ ಸಾವು

Uppinangady: ತೀವ್ರ ಜ್ವರ; ಅರ್ಚಕ ಸಾವು

Bantwala: ಫರಂಗಿಪೇಟೆ; ಬೈಕ್‌ ಢಿಕ್ಕಿಯಾಗಿ ಗಾಯ

Bantwala: ಫರಂಗಿಪೇಟೆ; ಬೈಕ್‌ ಢಿಕ್ಕಿಯಾಗಿ ಗಾಯ

B.C.Road ನೇತ್ರಾವತಿ ಸೇತುವೆಯಲ್ಲಿ ಟಿಪ್ಪರ್- ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

B.C.Road ನೇತ್ರಾವತಿ ಸೇತುವೆಯಲ್ಲಿ ಟಿಪ್ಪರ್- ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

16-uv-fusion

Aranthodu: ವಾಹನಗಳ ಮಧ್ಯೆ ಸರಣಿ ಅಪಘಾತ; ಬೈಕ್ ಸವಾರ ಗಂಭೀರ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1–dsdsadd

Honnavar; ಖಾಸಗಿ ಬಸ್‌ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

accident

Yellapur: ಟಿಪ್ಪರ್ ಗೆ ಢಿಕ್ಕಿಯಾಗಿ ಬೈಕ್ ಸಹಸವಾರೆ ಬಾಲಕಿ ಮೃತ್ಯು

1——dsadsa

Madikeri; ಮೊಬೈಲ್ ನಿಂದ ಬಡಿದು ಅತ್ತೆ ಹತ್ಯೆಗೈದು ಕಥೆ ಕಟ್ಟಿದ ಸೊಸೆ!

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.