ಮೊಸಳೆ ಹಿಡಿಯದೆ ಅರಣ್ಯ ಸಿಬ್ಬಂದಿ ವಾಪಸ್‌

ಗೂಡೂರು ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ•30ಕ್ಕೂ ಹೆಚ್ಚು ಮೊಸಳೆ ಇರುವ ಶಂಕೆ

Team Udayavani, May 12, 2019, 11:45 AM IST

11-March-12

ಸೈದಾಪುರ: ಗೂಡೂರು ಸಮೀಪದ ಭೀಮಾ ನದಿ ಹೊಂಡದಲ್ಲಿ ಮೊಸಳೆಗಳಿರುವ ಸ್ಥಳ.

ಸೈದಾಪುರ: ಭೀಮಾ ನದಿ ತಗ್ಗು ಪ್ರದೇಶ ನೀರಿನಲ್ಲಿ ಬಿಡು ಬಿಟ್ಟಿರುವ ಮೊಸಳೆಗಳನ್ನು ಹಿಡಿಯದೇ ಅರಣ್ಯ ಇಲಾಖೆ ಸಿಬ್ಬಂದಿ ವಾಪಾಸ್ಸಾದ ಹಿನ್ನೆಲೆಯಲ್ಲಿ ಗೂಡೂರು ಸೇರಿದಂತೆ ನದಿ ದಡದ ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.

ಕಳೆದ ಏ. 28ರಂದು ಗೂಡೂರು ಗ್ರಾಮದ ಬಸವಲಿಂಗಪ್ಪ (55) ಎಂಬ ವ್ಯಕ್ತಿ ಮೊಸಳೆ ಬಾಯಿಗೆ ಸಿಲುಕಿ ಸಾವನಪ್ಪಿದ್ದ. ಈ ಹಿನ್ನೆಲೆಯಲ್ಲಿ ಶುಕ್ರವಾರ ತಾಲೂಕು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್. ಬಾವಿಕಟ್ಟಿ ನೇತೃತ್ವದಲ್ಲಿ ಎಂಟು ಜನ ಪರಿಣಿತರ ತಂಡ ಮೊಸಳೆ ಹಿಡಿಯಲು ಆಗಮಿಸಿತ್ತು. ಕೆಲ ಗಂಟೆ ಹೊತ್ತು ವೀಕ್ಷಿಸಿ ಮೊಸಳೆಗಳನ್ನು ನೀರಿನಲ್ಲಿ ಹಿಡಿಯುವುದು ಕಷ್ಟ. ಅದರಲ್ಲಿಯೂ ಈ ಪ್ರದೇಶದಲ್ಲಿ ತಗ್ಗುಗಳಲ್ಲಿ ಹೆಚ್ಚಿನ ನೀರಿನ ಸಂಗ್ರಹವಾಗಿದೆ. ಇದರಿಂದ ಮೊಸಳೆ ಹಿಡಿಯಲು ಸಾಧ್ಯವಿಲ್ಲ. ಮೊಸಳೆಗಳು ಹೊಂಡಗಳಲ್ಲಿ ಅವಿತುಕೊಂಡಿದ್ದು, ಸ್ವಲ್ಪ ನೀರು ಖಾಲಿ ಮಾಡಿದ ನಂತರ ಅವುಗಳನ್ನು ಹಿಡಿಯಬಹುದು ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಇದರಿಂದಾಗಿ ಗ್ರಾಮಸ್ಥರಲ್ಲಿ ತೀವ್ರ ಆತಂಕ ಎದುರಾಗಿದೆ.

30ಕ್ಕೂ ಹೆಚ್ಚು ಮೊಸಳೆಗಳಿರುವ ಶಂಕೆ: ಗೂಡೂರು ಸಮೀಪದ ಭೀಮಾ ನದಿಯಲ್ಲಿ ಅನೇಕ ಹೊಂಡಗಳಿವೆ. ಹೆಚ್ಚಿನ ನೀರು ಸಂಗ್ರಹವಾಗಿರುವುದರಿಂದ ಈ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಮೊಸಳೆಗಳಿವೆ ಎಂದು ಪರಿಣಿತರು ಶಂಕೆ ವ್ಯಕ್ತಪಡಿಸದ್ದಾರೆ.

ನಾವು ಒಂದೆರಡು ಮೊಸಳೆ ಇದ್ದರೆ ಹಿಡಿದು ಸ್ಥಳಾಂತರ ಮಾಡಬಹುದು. ಆದರೆ ಇಲ್ಲಿ ಇಷ್ಟೊಂದು ಮೊಸಳೆಗಳು ಇವೆ ಎಂದು ಊಹಿಸಿಕೊಂಡಿರಲ್ಲಿಲ್ಲ. ಅವುಗಳನ್ನು ಸ್ಥಳಾಂತರ ಮಾಡುವುದು ಕಷ್ಟ ಸಾಧ್ಯ ಎಂದು ಅರಣ್ಯ ಸಿಬ್ಬಂದಿ ತಿಳಿಸಿದರು.

ನಿರಾಸೆಯಿಂದ ಮನೆಗೆ ತೆರಳಿದ ಗ್ರಾಮಸ್ಥರು: ಭೀಮಾ ತೀರಕ್ಕೆ ಮೊಸಳೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಬರುತ್ತಾರೆ ಎಂದು ಸುದ್ದಿ ತಿಳಿದು ಕೂತಹಲದಿಂದ ಗ್ರಾಮಸ್ಥರು ಆಗಮಿಸಿದ್ದರು. ಕೆಲ ಹೊತ್ತು ಕಾಯ್ದ ನಂತರ ಸಿಬ್ಬಂದಿ ಹಿಡಿಯಲು ಕಷ್ಟ ಸಾಧ್ಯ ಎಂದು ಹಿಂದಿರುಗಿದ ನಂತರ ಗ್ರಾಮಸ್ಥರು ಆತಂಕದಿಂದ ಮತ್ತು ನಿರಾಸೆಯಿಂದ ಮನೆಗೆ ತೆರಳಿದರು.

ಗೂಡೂರು ಸಮೀಪದ ಭೀಮಾ ನದಿಯಲ್ಲಿರುವ ಮೊಸಳೆಗಳನ್ನು ಹಿಡಿಯಲು ಪರಿಣಿತರನ್ನು ಕಳುಹಿಸಲಾಗಿತ್ತು. ಆದರೆ ಆ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಮೊಸಳೆಗಳು ಇವೆ. ಅಲ್ಲದೇ ಹೊಂಡಗಳಲ್ಲಿ ಹೆಚ್ಚು ನೀರು ಸಂಗ್ರಹವಾಗಿರುವ ಹಿನ್ನ್ನೆಲೆಯಲ್ಲಿ ಅವುಗಳನ್ನು ಹಿಡಿದು ಸ್ಥಳಾಂತರಿಸುವುದು ಕಷ್ಟ ಸಾಧ್ಯ. ನದಿ ದಡದಲ್ಲಿ ಸೂಚನಾ ಫಲಕ ಮತ್ತು ಗ್ರಾಮಗಳಲ್ಲಿ ಡೊಂಗುರ ಹಾಕಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುವುದು. ಗ್ರಾಮಸ್ಥರು ಜಾಗೃತಿಯಿಂದ ಈ ಕಡೆ ಬರದಂತೆ ಎಚ್ಚರಕ್ಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಬಸವರಾಜ,
ವಲಯ ಅರಣ್ಯ ಅಧಿಕಾರಿ ಯಾದಗಿರಿ

ಗೂಡೂರು ಗ್ರಾಮದ ಸಮೀಪ ಭೀಮಾ ನದಿ ದಡದಲ್ಲಿ ಇಂದಿಗೂ ನಾಲ್ಕರಿಂದ ಐದು ಮೊಸಳೆಗಳು ಇವೆ ಎಂದು ತಿಳಿದಿದ್ದೇವು. ಆದರೆ ಹಿಡಿಯಲು ಬಂದ ಅರಣ್ಯ ಸಿಬ್ಬಂದಿ ತಿಳಿಸಿರುವ ಹಾಗೆ 30ಕ್ಕೂ ಹೆಚ್ಚು ಮೊಸಳೆಗಳು ಇರುವುದರಿಂದ ನದಿ ತಟದಲ್ಲಿಯೇ ಗ್ರಾಮದ ನೂರಾರು ಜನರು ಮತ್ತು ದನಕರುಗಳು ನೀರಿಗಾಗಿ ನದಿಗೆ ಹೋಗಬೇಕಾಗುತ್ತದೆ. ಅಲ್ಲದೇ ನದಿ ಪಾತ್ರದ ಗ್ರಾಮಗಳಲ್ಲಿ ಜೀವನ ಸಾಗಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಆರಣ್ಯಾಧಿಕಾರಿಗಳು ಪುನರಾಲೋಚಿಸಿ ಮೊಸಳೆಗಳನ್ನು ಸ್ಥಳಾಂತರಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ.
ಆಂಜನೇಯ ರಾಂಪುರ,
ಮೃತ ವ್ಯಕ್ತಿ ಸಂಬಂಧಿ

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.