ವೇದ-ಶಾಸ್ತ್ರಗಳಿಗಿಂತ ವಚನ ಸಾಹಿತ್ಯವೇ ಶ್ರೇಷ್ಠ: ಅನ್ನಪೂರ್ಣ

ಡಾ| ಎಸ್‌.ಆರ್‌.ಮಠಪತಿ ಆತಿಥ್ಯದಲ್ಲಿ ಕಾರ್ಯಕ್ರಮ

Team Udayavani, May 12, 2019, 3:47 PM IST

11-March-30

ಹುಮನಾಬಾದ: ಗೃಹ ನಿರ್ಮಾಣ ಮಂಡಳಿಯ ಬಯಲು ರಂಗಮಂಟಪದಲ್ಲಿ ನಡೆದ 197ನೇ ಬಸವಜ್ಯೋತಿ ಕಾರ್ಯಕ್ರಮವನ್ನು ಡಾ|ಸಿದ್ದಲಿಂಗಪ್ಪ ಪಾಟೀಲ ಉದ್ಘಾಟಿಸಿದರು.

ಹುಮನಾಬಾದ: ವೇದ, ಶಾಸ್ತ್ರಗಳಿಗಿಂತ ವಚನ ಸಾಹಿತ್ಯ ಶ್ರೇಷ್ಟ ಎಂದು ಬೀದರ್‌ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಹೇಳಿದರು.

ಪಟ್ಟಣದ ಗೃಹ ನಿರ್ಮಾಣ ಮಂಡಳಿಯ ಬಯಲು ರಂಗಮಂದಿರದಲ್ಲಿ ಡಾ| ಎಸ್‌.ಆರ್‌.ಮಠಪತಿ ಅವರ ಆತಿಥ್ಯದಲ್ಲಿ ಏರ್ಪಡಿಸಿದ್ದ 197ನೇ ಬಸವಜ್ಯೋತಿ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಆವರು ಆಶೀರ್ವಚನ ನೀಡಿದರು.

ನಾವ್ಯಾರೂ ಅನ್ಯರನ್ನು ತಿದ್ದುವ ಅಗತ್ಯವಿಲ್ಲ. ತಮ್ಮನ್ನು ತಾವು ಅರಿತು ನಡೆದರೆ ತಾವೇ ದೇವರಾಗುತ್ತಾರೆ. ಮಹಾತ್ಮ ಗೌತಮ ಬುದ್ಧ ಮತ್ತು ಮಹಾತ್ಮ ಬಸವೇಶ್ವರು ಅಂತರಂಗ ಶುದ್ಧಿಗಾಗಿ ಹೋರಾಟ ನಡೆಸಿದರೆ, ಡಾ|ಅಂಬೇಡ್ಕರ್‌ ಅವರು ಬಹಿರಂಗ ಶುದ್ಧಿಗಾಗಿ ಹೋರಾಟ ನಡೆಸಿದರು ಎಂದು ಹೇಳಿದರು.

ದ್ವಿಗುಣಗೊಳ್ಳುತ್ತದೆ ಎಂಬ ಅಪನಂಬಿಕೆಯಿಂದ ಅಕ್ಷಯ ಚತುರ್ಥಿಯಂದು ಬಂಗಾರ ಖರೀದಿಸುವವರಿಗೆ ನಮ್ಮಲ್ಲೇನು ಕೊರತೆ ಇಲ್ಲ. ಖರೀದಿಸಿದ್ದೆಲ್ಲವೂ ದ್ವಿಗುಣ ಆಗುವ ಹಾಗಿದ್ದರೆ ಎಲ್ಲರೂ ಅದನ್ನೇ ಮಾಡುತ್ತಿದ್ದರು. ಮತ್ತೂಂದೆಡೆ ಓದಿದವರು ಅನುಭಾವಿಗಳು ಓದದವರು ಪಿಶಾಚಿಗಳೆಂದು ಹೇಳಲಾಗಿದೆ ಎಂದರು.

ಅರಿತವರು ಆಚರಿಸುವ ಮೂಲಕ ಸಾರ್ಥಕ ಜೀವನ ಸಾಗಿಸುತ್ತಾರೆ. ಉಪದೇಶಕ್ಕಿಂತ ಸ‌ರಳವಾಗಿ ಈ ದೇಶದಲ್ಲಿ ಬೇರೇನೂ ಸಿಗುವುದಿಲ್ಲ. ಇಷ್ಟಲಿಂಗ ಪೂಜೆ ಹಾಗೂ ಬಸವತತ್ವ ಆಲಿಕೆಯಿಂದ ಮನುಷ್ಯನ ದೇಹದ ಬಿಳಿ ರಕ್ತಕಣಗಳು ವೃದ್ಧಿಯಾಗುತ್ತವೆ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಪ್ರಧಾನ ಕಾರ್ಯದರ್ಶಿ ಡಾ|ಬಸವರಾಜ ಬಲ್ಲೂರ ವಿಶೇಷ ಉಪನ್ಯಾಸ ನೀಡಿ, ನೆಲ-ಜಲ-ಜನ ತ್ರಿಜೀವಾಳ ಪೋಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ವಚನ ಸಾಹಿತ್ಯವನ್ನು ಹಚ್ಚಿಕೊಂಡವರಿಗೆ ಅದು ಹಚ್ಚಿಕೊಳ್ಳುತ್ತದೆ. ತನ್ಮೂಲಕ ಅಂತರಂಗ ಶುದ್ಧೀಕರಿಸುತ್ತದೆ ಎಂದರು.

ಶ್ರೀಗುರು ಬಸವೇಶ್ವರ ಲಿಂಗಾಯತ ಅಭಿವೃದ್ಧಿ ಸಂಘದ ಅಧ್ಯಕ್ಷ ಡಾ|ಸಿದ್ದಲಿಂಗಪ್ಪ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಮಡಿವಾಳಯ್ಯಸ್ವಾಮಿ ಅಧ್ಯಕ್ಷತೆ ವಹಿಸಿ, ವಚನ ಪಠಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕೋಶಾಧ್ಯಕ್ಷ ಟಿ.ಎಂ.ಮಚ್ಚೆ ವೇದಿಕೆಯಲ್ಲಿದ್ದರು.

ಸಾಹಿತಿಗಳಾದ ಡಾ|ಎಸ್‌ಎಸ್‌.ಯಾಳವಾರ, ಎಂ.ಜಿ.ಹವಾಲ್ದಾರ್‌, ಶ್ರೀಕಾಂತ ಸೂಗಿ ಗಣ್ಯರಾದ ಶರದ್‌ ನಾರಾಯಣಪೇಟಕರ್‌, ಭೀಮಣ್ಣ ದೇವಣಿ, ಶಂಕರ ಮುಗಳಿ, ಮಲ್ಲಿಕಾರ್ಜುನ ರಟಕಲೆ, ಪುರಸಭೆ ಮಾಜಿ ಉಪಾಧ್ಯಕ್ಷೆ ಪಾರ್ವತಿ ಶೇರಿಕಾರ ಇದ್ದರು.

ಶೋಭಾ ಔರಾದೆ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಡಾ|ಎಸ್‌.ಆರ್‌.ಮಠಪತಿ ಸ್ವಾಗತಿಸಿದರು. ಬಸವಸೇವಾ ಪ್ರತಿಷ್ಠಾನದ ಅಧ್ಯಕ್ಷ ಚನ್ನಬಸಪ್ಪ ವಡ್ಡನಕೇರಿ ಪ್ರಾಸ್ತಾವಿಕ ಮಾತನಾಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ಮಲ್ಲಿಕಾರ್ಜುನ ಸಂಗಮಕರ್‌ ನಿರೂಪಿಸಿದರು. ಸಚ್ಚಿದಾನಂದ ಮಠಪತಿ ವಂದಿಸಿದರು.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.