ಪೆದಮಲೆ-ಸರಳೀಕಟ್ಟೆ ಶಿಥಿಲ ರಸ್ತೆಗೆ ಬೇಕಿದೆ ಕಾಯಕಲ್ಪ

ಉಭಯ ತಾಲೂಕಿನ ಸಂಪರ್ಕ ಕೊಂಡಿ

Team Udayavani, May 13, 2019, 6:06 AM IST

1205KS

ಹೊಂಡಗಳಿಂದ ತುಂಬಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿರುವ ಪೆದಮಲೆ-ಸರಳೀಕಟ್ಟೆ ರಸ್ತೆ.

ಬಂಟ್ವಾಳ : ಗ್ರಾಮೀಣ ಭಾಗದ ಸಂಪರ್ಕ ಕೊಂಡಿ, ಬಂಟ್ವಾಳ ಹಾಗೂ ಬೆಳ್ತಂಗಡಿ ಉಭಯ ತಾಲೂಕುಗಳ ಜನರಿಗೆ ಅತಿ ಅವಶ್ಯಕವೆನಿಸಿರುವ ಪೆದಮಲೆ- ಸರಳೀಕಟ್ಟೆ ರಸ್ತೆ ಹೊಂಡಗಳಿಂದ ತುಂಬಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಜನತೆ ಎದ್ದುಬಿದ್ದು ಸಾಗಬೇಕಾಗಿದೆ.

ಈ ರಸ್ತೆ ಬೆಳ್ತಂಗಡಿ-ಬಂಟ್ವಾಳ ತಾಲೂಕನ್ನು ಸಂಪರ್ಕಿಸುವ ಜತೆಗೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಭಾಗದ ಜನತೆಗೂ ಅನುಕೂಲ ರಸ್ತೆಯಾಗಿದೆ. ಬೆಳ್ತಂಗಡಿಯ ಪೆದಮಲೆಯಿಂದ ಸರಳೀಕಟ್ಟೆ – ಬಜಾರದ ಮೂಲಕ ಸಾಗಿದರೆ ರಸ್ತೆಯು ಬಂಟ್ವಾಳದ ಅಜಿಲಮೊಗರನ್ನು ಸಂಪರ್ಕಿಸುತ್ತದೆ. ಹೀಗಾಗಿ ಇದು ಗ್ರಾಮೀಣ ಭಾಗದ ಸಂಪರ್ಕ ಕೊಂಡಿ ಎನಿಸಿಕೊಂಡಿದೆ. ರಸ್ತೆಗೆ ಹಲವು ವರ್ಷಗಳ ಇತಿಹಾಸ ವಿದ್ದರೂ ತೇಪೆ ಕಾರ್ಯ ನಡೆಯದೆ ರಸ್ತೆ ಶಿಥಿಲಾವಸ್ಥೆಗೆ ತಲುಪಿದೆ.

ಅಧಿಕಾರಿಗಳಲ್ಲಿ ಕೇಳಿದರೆ ಕಳೆದ ವರ್ಷ ಮುಂಗಡ ಅನುದಾನದ ಮೂಲಕ ಕಾಮಗಾರಿ ನಡೆಸಲಾಗಿದೆ. ಹೀಗಾಗಿ ಈ ಬಾರಿ ಉಳಿದ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕಾದ ಹಿನ್ನೆಲೆಯಲ್ಲಿ ಈ ರಸ್ತೆಗೆ ಅನುದಾನ ತರಿಸುವುದು ಅಸಾಧ್ಯವಾಗಿತ್ತು ಎನ್ನುತ್ತಾರೆ.

ಆದರೂ ಅಜಿಲಮೊಗರು ಭಾಗ ದಿಂದ ಸರಳೀಕಟ್ಟೆಯವರೆಗೆ ಈ ಬಾರಿಯೇ ಕಾಮಗಾರಿ ನಡೆದಿದೆ. ಆದರೆ ಸರಳೀಕಟ್ಟೆ- ಪೆದಮಲೆ ಭಾಗದ ರಸ್ತೆಯಲ್ಲಿ ಬೃಹತ್‌ ಹೊಂಡಗಳಿದ್ದು, ಸಂಚಾರ ದುಸ್ತರವೆನಿಸಿದೆ. ಕನಿಷ್ಠ ತೇಪೆ ಕಾರ್ಯವಾದರೂ ನಡೆಯಲಿ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಕಂಡೇವಾ ಸೇತುವೆ…
ಈ ರಸ್ತೆಯು ಪೆದಮಲೆಯಿಂದ ಸಾಗಿ ಬೆಳ್ತಂಗಡಿಯ ಗಡಿಯ ಭಾಗಕ್ಕೆ ಅಂತ್ಯಗೊಳ್ಳುತ್ತಿತ್ತು. ಅಂದರೆ ರಸ್ತೆಗೆ ಅಡ್ಡಲಾಗಿ ಅಜಿಲಮೊಗರಿನ ಸಮೀಪ ನೇತ್ರಾವತಿಯ ಉಪನದಿ ಹಾದು ಹೋಗುವುದರಿಂದ ಬಂಟ್ವಾಳ ತಾಲೂಕಿನ ಸಂಪರ್ಕ ಅಸಾಧ್ಯವಾಗಿತ್ತು. ಕೆಲವು ವರ್ಷಗಳ ಹಿಂದೆ ಉದಯವಾಣಿ ನಡೆಸಿದ ಕಂಡೇವಾ ಸೇತುವೆ ಅಭಿಯಾನದಲ್ಲೂ ಇದು ಪ್ರಸ್ತಾವವಾಗಿತ್ತು. ಗ್ರಾಮಸ್ಥರಿಂದ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಳ್ತಂಗಡಿಯ ಅಂದಿನ ಶಾಸಕ ಕೆ. ವಸಂತ ಬಂಗೇರ ಅವರ ಪ್ರಸ್ತಾವನೆ ಮೇರೆಗೆ ಸೇತುವೆಗೆ ಅನುದಾನ ಮಂಜೂರಾಗಿ ಸೇತುವೆ ನಿರ್ಮಾಣಗೊಂಡಿದೆ.

ಸೇತುವೆಗಳೂ ಶಿಥಿಲ
ಈ ರಸ್ತೆಯಲ್ಲಿ ಮೂರ್ನಾಲ್ಕು ಸೇತುವೆಗಳಿದ್ದು, ಹೆಚ್ಚಿನವು ಶಿಥಿಲಾವಸ್ಥೆಗೆ ತಲುಪಿವೆ. ಅದರಲ್ಲೂ ಬನ್ನೆಂಗಳ ಸೇತುವೆ ಅಪಾಯಕಾರಿಯಾಗಿದ್ದು, ಈಗಾಗಲೇ ಸಾಕಷ್ಟು ವಾಹನಗಳು ಸೇತುವೆಯ ಕೆಳಗೆ ಬಿದ್ದ ಘಟನೆಗಳು ನಡೆದಿವೆ. ಹೀಗಾಗಿ ಸೇತುವೆಗೂ ಕಾಯಕಲ್ಪ ನಡೆಯಬೇಕಿದೆ.

 ಕಳೆದ ವರ್ಷ
ತೇಪೆ ಕಾರ್ಯ
ಪೆದಮಲೆ-ಸರಳೀಕಟ್ಟೆ ರಸ್ತೆಯು ತೀರಾ ಹದಗೆಟ್ಟ ಪರಿಣಾಮ ಅನುದಾನ ಇಲ್ಲದಿದ್ದರೂ ಜನರಿಗೆ ತೊಂದರೆಯಾಗದಂತೆ ರಸ್ತೆಗೆ ತೇಪೆ ಕಾರ್ಯ ನಡೆದಿತ್ತು. ಹೀಗಾಗಿ ಈಗ ಮತ್ತೆ ತೇಪೆ ಕಾರ್ಯ ಅಸಾಧ್ಯ. ಮುಂದೆ ಶಾಸಕರ ಜತೆ ಚರ್ಚಿಸಿ ಅನುದಾನಕ್ಕೆ ಪ್ರಯತ್ನಿಸಲಾಗುವುದು.
 - ಚೆನ್ನಪ್ಪ ಮೊಲಿ
ಎಇಇ, ಪಂಚಾಯತ್‌ ರಾಜ್‌ ಇಲಾಖೆ, ಬೆಳ್ತಂಗಡಿ

ಟಾಪ್ ನ್ಯೂಸ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Shivraj tangadagi

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ

1-qwewe

Odisha ಜನರು ನಿಂದನೀಯ ಭಾಷೆ ಮೆಚ್ಚಿಕೊಳ್ಳುವುದಿಲ್ಲ:ಬಿಜೆಪಿಗೆ ಪಟ್ನಾಯಕ್ ತಿರುಗೇಟು

6-rabakavi

Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Bantwal: ಬಾವಿಗೆ ಬಿದ್ದ ಮಗು; ರಕ್ಷಿಸಿದ ಯುವಕ

Puttur: ಚೆಂಡೆವಾದಕ ನೇಣು ಬಿಗಿದುಕೊಂಡು ಆತ್ಮಹತ್ಯೆ

Puttur: ಚೆಂಡೆವಾದಕ ನೇಣು ಬಿಗಿದುಕೊಂಡು ಆತ್ಮಹತ್ಯೆ

11

Puttur: ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವು ವೈದ್ಯರ ವಿರುದ್ಧ ದೂರು ದಾಖಲು

Bike theft: ಬಿ.ಸಿ.ರೋಡಿನಲ್ಲಿ ಬೈಕ್‌ ಕಳವು; ಪ್ರಕರಣ ದಾಖಲು

Bike theft: ಬಿ.ಸಿ.ರೋಡಿನಲ್ಲಿ ಬೈಕ್‌ ಕಳವು; ಪ್ರಕರಣ ದಾಖಲು

Bantwal: ಗಾಂಜಾ ಸೇವನೆ, ಸಾಗಾಟ; ಓರ್ವ ವಶಕ್ಕೆ

Bantwal: ಗಾಂಜಾ ಸೇವನೆ, ಸಾಗಾಟ; ಓರ್ವ ವಶಕ್ಕೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-qwewqewqe

Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

1——-qweweqw

Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.