ಗುರುದಾಸ್ಪುರ ಸರಣಿ ವಾಹನ ಅಪಘಾತ: ಸನ್ನಿ ದೇವಲ್ ಪವಾಡಸದೃಶ ಪಾರು
Team Udayavani, May 13, 2019, 4:28 PM IST
ಗುರುದಾಸ್ಪುರ : ಪಂಜಾಬ್ ನ ಗುರುದಾಸ್ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಬಾಲಿವುಡ್ ನಟ ಸನ್ನಿ ದೇವಲ್ ಅವರಿಂದು ಸರಣಿ ವಾಹನ ಅಪಘಾತದಲ್ಲಿ ಸಿಲುಕಿಯೂ ಯಾವುದೇ ಗಾಯಗಳಿಲ್ಲದೆ ಪವಾಡ ಸದೃಶ ಪಾರಾದರೆಂದು ಪೊಲೀಸರು ತಿಳಿಸಿದ್ದಾರೆ. ದೇವಲ್ ಮಾತ್ರವಲ್ಲದೆ ಯಾರೊಬ್ಬರೂ ಈ ಸರಣಿ ಅವಘಡದಲ್ಲಿ ಗಾಯಗೊಳ್ಳಲಿಲ್ಲ ಎನ್ನುವುದು ಇನ್ನೊಂದ ವಿಶೇಷ.
ಸೋಹಾಲ್ ಗ್ರಾಮದಲ್ಲಿನ ಗುರುದ್ವಾರದ ಸಮೀಪ ಸಾಗುತ್ತಿದ್ದಂತೆಯೇ ಸನ್ನಿ ದೇವಲ್ ಅವರ ಕಾರಿನ ಒಂದು ಟೈರ್ ಸ್ಫೋಟಗೊಂಡಿತು. ಪರಿಣಾಮವಾಗಿ ಅವರ ಮೂರು ಕಾರು ಮತ್ತು ಗ್ರಾಮಸ್ಥರೊಬ್ಬರ ಒಂದು ಕಾರು ಸೇರಿದಂತೆ ಒಟ್ಟು ನಾಲ್ಕು ಕಾರುಗಳು ಹಾನಿಗೊಂಡವು. ಸುದೈವದಿಂದ ಸನ್ನಿ ದೇವಲ್ ಅವರಿಗೆ ಯಾವುದೇ ಗಾಯಗಳಾಗಲಿಲ್ಲ.
ದೇವಲ್ ಅವರು ಫತೇಗಢ ಶೂರಿಯಾನ್ ನಲ್ಲಿ ಚುನವಾಣಾ ರಾಲಿಯನ್ನು ಉದ್ದೇಶಿಸಿ ಮಾತನಾಡಲು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಗಾಯಗಳಿಲ್ಲದ ಪಾರಾದ ಅವರು ಅನಂತರ ತಮ್ಮ ಪ್ರಯಾಣ ಮುಂದುವರಿಸಿದರು ಎಂದು ಗುರುದಾಸ್ಪುರ ಡಿವೈಎಸ್ಪಿ ಮಂಜಿತ್ ಸಿಂಗ್ ಹೇಳಿದರು.