ನೆರೆ ಸಂತ್ರಸ್ತರಿಗೆ ಹಸ್ತಾಂತರವಾಗದ ಮನೆ

ಆಮೆಗತಿಯಲ್ಲಿದೆ ಕಾಮಗಾರಿ, ಆತಂಕದಲ್ಲಿ ಸಂಪಾಜೆ ಸಂತ್ರಸ್ತರು

Team Udayavani, May 20, 2019, 3:10 PM IST

sampaje

ಅರಂತೋಡು: ಜೋಡುಪಾಲ ಮತ್ತು ಎರಡನೇ ಮೊಣ್ಣಂಗೇರಿಯ ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣ ವರ್ಷವೊಂದು ಕಳೆದರೂ ಪೂರ್ಣಗೊಂಡಿಲ್ಲ. ಕೆಲಸ ಆಮೆಗತಿಯಲ್ಲಿದ್ದು, ಈ ಮಳೆಗಾಲಕ್ಕೆ ಮುನ್ನ ಹಸ್ತಾಂತರವಾಗುವ ಭರವಸೆ ಇಲ್ಲ.

ಜೋಡು ಪಾಲ, 2ನೇ ಮೊಣ್ಣಂಗೇರಿ ಯಲ್ಲಿ ನೆರೆ, ಭೂಕುಸಿತ ದಿಂದ ಅನೇಕರು ಸಂತ್ರಸ್ತ ರಾಗಿದ್ದರು. ಇವರಲ್ಲಿ ಅರ್ಹ ರಿಗೆ ಮನೆ ಕಟ್ಟಿಕೊಡುವ ಭರವಸೆ ಯನ್ನು ಕೊಡಗು ಜಿಲ್ಲಾಡಳಿತ ನೀಡಿತ್ತು. ಇವುಗಳ ನಿರ್ಮಾಣ ಕೊಡಗಿನ ಆರು ಕಡೆ ನಡೆಯುತ್ತಿದೆ. ಸಂಪಾಜೆ ಮತ್ತು ಜೋಡುಪಾಲ, ಎರಡನೇ ಮೊಣ್ಣಂಗೇರಿಗಳಿಗೆ ಮದೆನಾಡು ಗ್ರಾಮದ ಗೋಳಿಕಟ್ಟೆ ಯಲ್ಲಿ 11 ಎಕ್ರೆ ಜಾಗದಲ್ಲಿ 80 ಮನೆಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ.

ನಿಧಾನಗತಿ
ಗೋಳಿಕಟ್ಟೆಯಲ್ಲಿ ಮನೆಗಳ ಕಾಮಗಾರಿ ಅತ್ಯಂತ ನಿಧಾನಗತಿ ಯಲ್ಲಿದೆ. ಜೂನ್‌ನಲ್ಲಿ ಮುಂಗಾರು ಆರಂಭವಾಗುತ್ತದಾದರೂ ಮೇ ಕೊನೆ ವೇಳೆಗೆ ಮನೆ ಪೂರ್ಣವಾಗದು ಎನ್ನುವ ಆತಂಕ ಸಂತ್ರಸ್ತರದು. ವಾರದ ಹಿಂದೆ ಜೋಡುಪಾಲ, ಮೊಣ್ಣಂಗೇರಿ ಪರಿಸರದಲ್ಲಿ ಒಂದು ಭಾರೀ ಮಳೆ ಸುರಿದು ಕಳೆದ ಆಗಸ್ಟ್‌ನ ಸಂಕಷ್ಟವನ್ನು ಸ್ಮರಣೆಗೆ ತಂದಿತ್ತು.

ಎಲ್ಲರಿಗೂ ಇಲ್ಲ
ಗೋಳಿಕಟ್ಟೆಯ 80 ಮನೆಗಳನ್ನು ಎರಡನೇ ಮೊಣ್ಣಂಗೇರಿ, ಜೋಡು ಪಾಲ, ಸಂಪಾಜೆ, ಕಾಟಿಗೇರಿ ಭಾಗದ ಸಂತ್ರಸ್ತರಿಗೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ. ಆದರೆ ಈ ಭಾಗ ದಲ್ಲಿ ಮನೆ ಕಳೆದುಕೊಂಡವರು ನೂರಕ್ಕೂ ಅಧಿಕ ಮಂದಿ ಇದ್ದು, ಪ್ರಥಮ ಪಟ್ಟಿಯಲ್ಲಿದ್ದವರಿಗೆ ಮನೆ ನೀಡಲಾಗುವುದು. ಉಳಿದವರಿಗೆ ತಿಂಗಳ ಮನೆ ಬಾಡಿಗೆ 10,000 ರೂ.ಗಳನ್ನು ಮುಂದುವರಿಸಲಾಗುತ್ತದೆ.

ಬಾಡಿಗೆ ಮನೆ ವಾಸ ಕಡಿಮೆ
ಸರಕಾರ ಬಾಡಿಗೆ ನೀಡುತ್ತಿದ್ದರೂ ಕೆಲವರು ತಮ್ಮ ಹರುಕಲು ಮನೆ ಯಲ್ಲೇ ವಾಸ್ತವ್ಯ ಇದ್ದು, ಬಾಡಿಗೆ ಹಣವನ್ನು ಇತರ ಖರ್ಚುವೆಚ್ಚಕ್ಕೆ ಬಳಸು ತ್ತಿದ್ದಾರೆ. ಕೆಲವರು ಮಾತ್ರ ಬಾಡಿಗೆ ಮನೆಯಲ್ಲಿದ್ದಾರೆ. ಇನ್ನು ಕೆಲವರು ಭೂಕುಸಿತವಾದ ಪ್ರದೇಶದಲ್ಲೇ ಇದ್ದಾರೆ. ಬಾಡಿಗೆ ಹಣ ಪಡೆದು ಅಪಾಯಕಾರಿ ಸ್ಥಳದಲ್ಲೇ ವಾಸ್ತವ್ಯ ಇರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಂಥವರಿಗೆ ಸೂಚನೆ ಕೊಟ್ಟಿದೆ.

ಬಾಡಿಗೆ ಮನೆ ಇಲ್ಲ
ಬಾಡಿಗೆ ಮನೆ ದೊರೆಯುತ್ತಿಲ್ಲ. ದೊರೆತರೂ ಜಮೀನು, ಕೆಲಸದ ಸ್ಥಳಕ್ಕೆ ದೂರ. ಗೋಳಿಕಟ್ಟೆ ತುಂಬಾ ಒಳಭಾಗವಾಗಿದ್ದು, ಅಲ್ಲಿ ಸರಕಾರಿ ಬಸ್ಸು ಮತ್ತು ಇತರ ಖಾಸಗಿ ವಾಹನ ಸಂಚಾರ ಇಲ್ಲ ಎಂಬ ಅಸಮಾಧಾನ ಸಂತ್ರಸ್ತರದು.

ಶಾಲೆಯಲ್ಲಿ ವಾಸ
ನೆರೆ ಸಂತ್ರಸ್ತ 5 ಕುಟುಂಬಗಳ 20 ಮಂದಿ ಸದಸ್ಯರು ಈಗಲೂ ಕಲ್ಲುಗುಂಡಿ ಪ್ರಾ. ಶಾಲೆಯಲ್ಲಿ ವಾಸವಿದ್ದಾರೆ. ಈ ಪೈಕಿ ಅರ್ಹ ಕುಟುಂಬಕ್ಕೆ ಮಾತ್ರ ಮನೆ ಬಾಡಿಗೆ ನೀಡಲಾಗುತ್ತಿದೆ. ಮಳೆಗಾಲದ ಮೊದಲು ಮನೆ ನಿರ್ಮಾಣ ವಾಗದಿದ್ದರೆ ಮತ್ತು ಎಲ್ಲರಿಗೂ ಮನೆ ದೊರೆಯಲು ಅವಕಾಶ ಇಲ್ಲದಿರುವುದರಿಂದ ಈ ಮಳೆಗಾಲವೂ ಪುನರ್ವಸತಿ ಕೇಂದ್ರ ತೆರೆಯುವ ಸಾಧ್ಯತೆ ಇದೆ.

ಶೀಘ್ರ ಹಸ್ತಾಂತರ
ಕೊಡಗಿನ ಕೆಲವು ಭಾಗಗಳಲ್ಲಿ ಈಗಾಗಲೇ ನಿರಾಶ್ರಿತರಿಗೆ ಪುನರ್ವಸತಿ ಕಾಮಗಾರಿ ನಡೆಯುತ್ತಿದೆ. ಒಂದು ಕಡೆ ಪೂರ್ಣಗೊಂಡಿದೆ. ಮದೆನಾಡು ಪ್ರದೇಶದ ಗೋಳಿಕಟ್ಟೆಯಲ್ಲಿ 80 ಮನೆಗಳ ನಿರ್ಮಾಣ ಕಾರ್ಯ ಕೊನೆಯ ಹಂತ ತಲುಪಿದೆ. ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಜಿಲ್ಲಾಡಳಿತ ಅದನ್ನು ಫ‌ಲಾನುಭವಿಗಳಿಗೆ ಹಸ್ತಾಂತರಿಸುವ ಕಾರ್ಯವನ್ನು ಜರೂರಾಗಿ ಮಾಡಲಾಗುವುದು.
ಜವರೇಗೌಡ, ಉಪವಿಭಾಗಾಧಿಕಾರಿ, ಕೊಡಗು

ಮನೆ ನಿರ್ಮಾಣ ಕೆಲಸ ಬಹಳ ನಿಧಾನಗತಿಯಲ್ಲಿ ನಡೆಯುತ್ತಿದೆ. ನನ್ನ ಹೆಸರು ಎರಡನೇ ಲಿಸ್ಟ್‌ನಲ್ಲಿದೆ. ನಮಗೂ ಬೇಗನೆ ಮನೆ ದೊರೆಯಬೇಕು.
ರಾಮಕೃಷ್ಣ, ಜೋಡುಪಾಲ ಸಂತ್ರಸ್ತ

ತೇಜೇಶ್ವರ್‌ ಕುಂದಲ್ಪಾಡಿ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.