ಭದ್ರಕೋಟೆ ಛಿದ್ರ ಮಾಡಿಕೊಂಡ ಕಾಂಗ್ರೆಸ್‌

ವಿರೋಧಿಗಳ ಪ್ರತಿತಂತ್ರದ ಮುಂದೆ ನಡೆಯದ ಮುನಿಯಪ್ಪರ ತಂತ್ರ | ಮನೆ ಸೇರಿದ ಸೋಲಿಲ್ಲದ ಸರದಾರ

Team Udayavani, May 25, 2019, 3:59 PM IST

kolar-tdy-2..

ಕೋಲಾರ ಮತ ಎಣಿಕೆ ಕೇಂದ್ರದ ಬಳಿ ವಿದಾಯ ಹೇಳಿ ತೆರಳುತ್ತಿರುವ ಕೆ.ಎಚ್.ಮುನಿಯಪ್ಪ.

ಕೋಲಾರ: ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಸತತ 7 ಬಾರಿ ಗೆದ್ದು ಸೋಲಿಲ್ಲದ ಸರದಾರರೆ ಎಸಿಕೊಂಡಿದ್ದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ, ಬಿಜೆಪಿ ಅಭ್ಯರ್ಥಿ ಎಸ್‌.ಮುನಿಸ್ವಾಮಿ ಅವರಿಗಿಂತಲೂ 2.09 ಲಕ್ಷ ಮತಗಳ ಭಾರಿ ಅಂತರದಿಂದ ಸೋತಿದ್ದಾರೆ. ಇದರಿಂದ ಕೋಲಾರ ಕಾಂಗ್ರೆಸ್‌ನ ಭದ್ರಕೋಟೆ ಇದೀಗ ಛಿದ್ರವಾದಂತಾಗಿದೆ.

ಅವರ ಸೋಲಿನ ಈ ಅಂತರವನ್ನು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ, ಅವರಿಗೆ ಸ್ವಪಕ್ಷೀಯರೂ ಸೇರಿ ಹಿಂದೆಂದೂ ಕಂಡರಿಯದ ವಿರೋಧಿ ಅಲೆ ಮುತ್ತಿಕೊಂಡಿದ್ದರಿಂದಲೇ ಅವರು ಹೀನಾಯವಾಗಿ ಸೋಲು ಅನುಭವಿಸಬೇಕಾಯಿತು. ಹಾಗೆ ನೋಡಿದರೆ ಮುನಿಯಪ್ಪಗೆ ಚುನಾವಣೆ ವೇಳೆ ಹೀಗೆ ವಿರೋಧಗಳನ್ನು ಎದುರಿಸಿದ್ದು ಹೊಸದೇನಲ್ಲ. ಮೊದಲಿನಿಂದಲೂ ಸ್ವಪಕ್ಷಿಯರಿಂದ ವಿರೋಧ ಮತ್ತು ಕೆಲ ನಾಯಕರಿಂದ, ಮತದಾರರಿಂದಲೂ ಸಾಕಷ್ಟು ವಿರೋಧಗಳು ಇರುತ್ತಿದ್ದವು. ಆದರೆ, ಈ ಮಟ್ಟಿಗೆ ವಿರೋಧ ಕಟ್ಟಿಕೊಂಡಿದ್ದು ಎಂದೂ ಇಲ್ಲ.

ಬಿಜೆಪಿಗೆ ಜನಮತ: 1984ರಲ್ಲಿ ಜಿ.ವೈ.ಕೃಷ್ಣನ್‌ ಅವರೂ ಇದೇ ರೀತಿಯ ವಿರೋಧವನ್ನು ಕಟ್ಟಿಕೊಂಡು ಹೀನಾಯ ಸೋಲು ಅನುಭವಿಸಬೇಕಾಯಿತು. ಆಗ ಜನತಾ ಪರಿವಾರದ ಡಾ.ವೆಂಕಟೇಶ್‌ ಅವರು ಗೆಲುವನ್ನು ಸಾಧಿಸಿದ್ದರು. ಕಾಂಗ್ರೆಸ್‌ನ ಭದ್ರಕೋಟೆ ಎನಿಸಿರುವ ಕೋಲಾರ ಕ್ಷೇತ್ರದ ಇತಿಹಾಸದಲ್ಲಿ ಎಂದೂ ಬಿಜೆಪಿ ಗೆಲ್ಲಿಸಿರಲಿಲ್ಲ. ಗ್ರಾಪಂ ಮಟ್ಟದಲ್ಲಿಯೂ ಬೆಳೆಯದ ಬಿಜೆಪಿಗೆ ಈ ಬಾರಿ ಮುನಿಯಪ್ಪ ಅವರನ್ನು ಸೋಲಿಸುವ ಕಾರಣಕ್ಕಾಗಿಯೇ ಬಿಜೆಪಿಗೆ ಜನ ಮತ ಹಾಕಿದ್ದಾರೆ ಎಂದು ಹೇಳಿದರು.

10 ಸಾವಿರ ಮತಗಳಿಂದ ಸೋಲು: ಪ್ರತಿ ಬಾರಿಯೂ ತಮ್ಮದೇ ತಂತ್ರಗಳ ಮೂಲಕ ವಿರೋಧಿಗಳನ್ನು ಎದುರಿಸಿ ಬಂದಿದ್ದಾರೆ, ಒಂದು ಬಾರಿ ಬಿಜೆಪಿ ಶಾಸಕರ ಬೆಂಬಲ ಪಡೆದು ಸಂಸತ್‌ಗೆ ಆಯ್ಕೆಯಾದರೆ ಮತ್ತೂಂದು ಬಾರಿ ಜೆಡಿಎಸ್‌ ಪಕ್ಷದವರನ್ನು ಸೆಳೆಯುತ್ತಿದ್ದರು. ಕೆ.ಎಚ್.ಮುನಿಯಪ್ಪ ಅವರಿಗೆ ಪ್ರತಿ ಬಾರಿಯೂ ಪ್ರಬಲ ಪೈಪೋಟಿ ಒಡ್ಡುತ್ತಿದ್ದುದು ಜೆಡಿಎಸ್‌ ಮತ್ತು ಬಿಜೆಪಿಯ ಅಭ್ಯರ್ಥಿಗಳು ಮಾತ್ರ, ಚುನಾವಣೆಯಲ್ಲಿ ಇನ್ನೇನು ಬಿಜೆಪಿ ಅಭ್ಯರ್ಥಿ ಗೆದ್ದೇ ಬಿಟ್ಟರು ಎನ್ನುವ ಸಂದರ್ಭದಲ್ಲಿ ಬಿಜೆಪಿಯ ಶಾಸಕ ಕೃಷ್ಣಯ್ಯಶೆಟ್ಟರನ್ನು ಬುಟ್ಟಿಗೆ ಹಾಕಿಕೊಂಡು ಚುನಾವಣೆಯಲ್ಲಿ ಗೆದ್ದಿದ್ದಾರೆ. ಆಗ ಬಿಜೆಪಿಯ ವೀರಯ್ಯ ಕೇವಲ 10 ಸಾವಿರ ಮತಗಳ ಅಂತರದಿಂದ ಸೋತಿದ್ದರು.

ಮೈತ್ರಿ ಅಭ್ಯರ್ಥಿಯಾಗಿದ್ದೇ ಮುಳುವಾಯ್ತು: ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಗ್ರಾಪಂನಿಂದಲೂ ಪ್ರಬಲ ಪೈಪೋಟಿ ಒಡ್ಡುತ್ತಾ ಬರುವುದು ಜನತಾ ಪರಿವಾರಗಳು ಮಾತ್ರ. ಆದರೆ, ರಾಜಕೀಯ ತಂತ್ರಗಳನ್ನು ಹೆಣೆಯುವುದರಲ್ಲಿ ಚಾಣಕ್ಷರಾದ ಮುನಿಯಪ್ಪ ಚುನಾವಣೆ ಹೊತ್ತಿಗೆ ಜೆಡಿಎಸ್‌ ಪಕ್ಷದ ವರಿಷ್ಠರನ್ನೂ ಸೆಳೆದುಕೊಂಡು ತಮ್ಮ ವಿರೋಧಿ ಮತಗಳು ಜೆಡಿಎಸ್‌ ಅಭ್ಯರ್ಥಿಗೆ ಹೋಗುವಂತೆ ಮಾಡಿ ಗೆಲುವು ಸಾಧಿಸುತ್ತಾ ಬಂದವರು ಮುನಿಯಪ್ಪ. ಆದರೆ, ಈ ಬಾರಿ ಅವರ ಈ ತಂತ್ರ ಈಡೇರಲಿಲ್ಲ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ಮುನಿಯಪ್ಪ ಕಣಕ್ಕಿಳಿದಿದ್ದೇ ಮುಳುವಾಯಿತು ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.

ಜಾತಿಯ ಲೆಕ್ಕಾಚಾರ: ಮುನಿಯಪ್ಪರಿಗೆ ಈ ಬಾರಿ ದಲಿತರಲ್ಲೇ ಒಂದು ವರ್ಗ ಸಿಡಿದೆದ್ದಿತ್ತು, ಪರಿಶಿಷ್ಟ ಜಾತಿಯಲ್ಲಿ ಹೊಲೆಯರ ಗುಂಪು.(ಬಲಗೈ) ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಕ್ಷೇತ್ರದಲ್ಲಿ ಬಲಗೈ ಗುಂಪಿನವರನ್ನು ಬೆಳೆಯಲು ಬಿಡದ ಮುನಿಯಪ್ಪ ಮೊದಲಿನಿಂದಲೂ ತುಳಿಯುತ್ತಾ ಬಂದಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. 4.5 ಲಕ್ಷ ಮತದಾರರಿರುವ ಈ ಗುಂಪು ಬಿಜೆಪಿಯಲ್ಲಿ ಇದೇ ಗುಂಪಿಗೆ ಟಿಕೆಟ್ ಕೊಡಬೇಕೆಂದು ಪಟ್ಟು ಹಿಡಿದು, ಈ ಗುಂಪಿಗೆ ಸೇರಿದ ಎಸ್‌.ಮುನಿಸ್ವಾಮಿ ಅವರನ್ನು ಕಣಕ್ಕಿಳಿಯುವಂತೆ ಮಾಡಿತು.

ಎಲ್ಲರೂ ಕೈ ಬಿಟ್ಟರು: ಮುನಿಯಪ್ಪ ಅವರಿಗೆ ಜಿಲ್ಲೆಯ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳೂ ಕೈಕೊಟ್ಟವು ಯಾವ ಕ್ಷೇತ್ರದಲ್ಲಿಯೂ ಜನ ಕೈ ಹಿಡಿಯಲಿಲ್ಲ, ಸ್ವತಃ ಅವರ ಪುತ್ರಿ ರೂಪಾಕಲಾ ಶಾಸಕರಾಗಿರುವ ಕೆ.ಜಿ.ಎಫ್‌ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಸ್ವಲ್ಪಮಟ್ಟಿಗೆ ಮುನ್ನಡೆ ಬಂದಿದೆ. ಕೆ.ಜಿಎಫ್‌ ಕ್ಷೇತ್ರ ಸೇರಿದಂತೆ ಮಾಲೂರು ವಿಧಾನಸಭಾ ಕ್ಷೇತ್ರಗಳಲ್ಲಿ ಲೀಡ್‌ ಬರುತ್ತದೆ ಎನ್ನುವ ಮುನಿಯಪ್ಪ ಅವರ ಕನಸು ನುಚ್ಚು ನೂರಾಯಿತು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.