ಸುಮಲತಾ ಕೈ ಹಿಡಿದ ಮಹಿಳಾ ಮತದಾರರು

ಗುಪ್ತಗಾಮಿನಿಯಂತೆ ಹರಿದುಬಂದ ಮತಗಳು • ಸ್ವಯಂಪ್ರೇರಣೆಯಿಂದ ಮತ ಚಲಾಯಿಸಿದ್ದ ನಾರಿಯರು

Team Udayavani, May 25, 2019, 4:23 PM IST

mandya-tdy-1..

ಮಂಡ್ಯ: ಅಂಬರೀಶ್‌ ಸಾವಿನ ಅನುಕಂಪದ ಅಲೆಯ ಜೊತೆಗೆ ಜಿಲ್ಲೆಯ ಮಹಿಳಾ ಮತದಾರರು ಕೈ ಹಿಡಿದ ಪರಿಣಾಮ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪ್ರಚಂಡ ಜಯ ಸಾಧಿಸಲು ಸಾಧ್ಯವಾಯಿತು.

ಮಂಡ್ಯ ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಮಹಿಳಾ ಮತದಾರರು ಸ್ವಯಂಪ್ರೇರಣೆಯಿಂದ ಬಂದ ಮತ ಚಲಾಯಿಸಿದ್ದರು. ಬಹಿರಂಗ ಪ್ರಚಾರದ ಅಂತಿಮ ದಿನ ಸುಮಲತಾ ಜಿಲ್ಲೆಯ ಜನರೆದುರು ಸೆರಗೊಡ್ಡಿ ಸ್ವಾಭಿಮಾನದ ಭಿಕ್ಷೆ ಬೇಡಿದರು. ಜನರು ಅದನ್ನು ದಯಪಾಲಿಸಿ ವಿಜಯಮಾಲೆ ತೊಡಿಸಿದರು.

ಲೋಕಸಭಾ ಚುನಾವಣೆಯಲ್ಲಿ 680859 ಮಹಿಳೆಯರು ಮತ ಚಲಾಯಿಸಿದ್ದರು. ಇದರಲ್ಲಿ ಬಹುತೇಕ ಮತಗಳು ಸುಮಲತಾ ಪರವಾಗಿ ಹರಿದುಬಂದಿವೆ. ಚುನಾವಣೋತ್ತರದಲ್ಲಿ ಬಹಳಷ್ಟು ಮಹಿಳಾ ಮತದಾರರು ಬಹಿರಂಗವಾಗಿಯೇ ಸುಮಲತಾ ಪರ ಮತ ಚಲಾಯಿಸಿರುವ ಬಗ್ಗೆ ಮಾತನಾಡುತ್ತಿದ್ದುದು ಸುಮಲತಾ ಗೆಲುವಿನ ಮುನ್ಸೂಚನೆ ನೀಡಿತ್ತು. ಫ‌ಲಿತಾಂಶದಲ್ಲಿ ಅದು ನಿಜವೂ ಆಯಿತು.

ಮಹಿಳಾ ಮತಗಳು ಒಗ್ಗೂಡಿದ್ದು ಹೇಗೆ: ಚುನಾವಣೆ ಪೂರ್ವ ಹಾಗೂ ಪ್ರಚಾರ ಸಮಯದಲ್ಲಿ ಜೆಡಿಎಸ್‌ ನಾಯಕರು ಸುಮಲತಾ ವಿರುದ್ಧವಾಗಿ ಆಡಿದ ಅಸಹನೀಯ ಮಾತುಗಳೂ ಮಹಿಳೆಯರನ್ನು ಕೆರಳುವಂತೆ ಮಾಡಿತ್ತು. ಅಂಬರೀಶ್‌ ಕಳೆದುಕೊಂಡು ದುಃಖದಲ್ಲಿದ್ದ ಸುಮಲತಾ ಪರ ಮಹಿಳೆಯರಿಗಿದ್ದ ಅನುಕಂಪ ಜೆಡಿಎಸ್‌ ನಾಯಕರ ಟೀಕಾ ಪ್ರಹಾರದಿಂದ ಇನ್ನಷ್ಟು ಹೆಚ್ಚಾಗುವಂತೆ ಮಾಡಿತು. ಈ ಬೆಳವಣಿಗೆ ಮಹಿಳಾ ಮತಗಳೆಲ್ಲವೂ ಕೇಂದ್ರೀಕೃತವಾಗುವುದಕ್ಕೆ ಎಡೆಮಾಡಿಕೊಟ್ಟವು.

ಕೊಟ್ಟ ಮಾತಿಗೆ ತಪ್ಪಿದ ಸಿಎಂ: ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಸ್ತ್ರೀಶಕ್ತಿ ಸಾಲ ಮನ್ನಾ ಮಾಡಲಿಲ್ಲ. ಇದೂ ಕೂಡ ಮಹಿಳೆಯರಲ್ಲಿ ಅಸಮಾಧಾನ ಮೂಡಿಸಿತ್ತು. ಮುಖ್ಯಮಂತ್ರಿ ಗದ್ದುಗೆ ಏರಿದ ಬಳಿಕ ಕೊಟ್ಟ ಮಾತಿಗೆ ತಪ್ಪಿದ ಸಿಎಂ ಕುಮಾರಸ್ವಾಮಿ ವಿರುದ್ಧದ ಕೋಪವನ್ನು ಸುಮಲತಾ ಪರ ಮತ ಚಲಾಯಿಸಿ ತೀರಿಸಿಕೊಂಡರು.

ಸುಮಲತಾ ಮಾತು: ನಟನಾಗಿ ಅಂಬರೀಶ್‌ ಅವರನ್ನು ಇಷ್ಟಪಡುತ್ತಿದ್ದ ಮಹಿಳೆಯರು ಅಂಬರೀಶ್‌ ಪತ್ನಿಯನ್ನು ಸುಲಭವಾಗಿಯೇ ರಾಜಕಾರಣಿಯಾಗಿ ಒಪ್ಪಿಕೊಂಡರು. ನಾನು ಈ ಮಣ್ಣಿನ ಮಗಳು, ಜಿಲ್ಲೆಯ ಸೊಸೆ ಎಂದು ಹೇಳಿದ ಮಾತುಗಳು ಮಹಿಳೆಯರ ಮನಸ್ಸಿನ ಮೇಲೆ ಪರಿಣಾಮ ಬೀರಿದವು. ಸುಮಲತಾ ಹೋದಲೆಲ್ಲಾ ಮಹಿಳೆಯರು ಗುಂಪು ಗುಂಪಾಗಿ ಸೇರುತ್ತಿದ್ದರು. ಸುಮಲತಾ ಡ್ರೆಸ್‌ ಕೋಡ್‌, ನಡವಳಿಕೆ, ಮಾತುಗಾರಿಕೆ ಇವೆಲ್ಲ ಕಂಡು ಮಾರುಹೋದರು. ಸುಮಲತಾ ನಟಿ ಎಂಬುದಕ್ಕಿಂತ ಹೆಚ್ಚಾಗಿ ಅಂಬರೀಶ್‌ ಪತ್ನಿ, ತವರಿಗೆ ಸೇರಿದವಳು ಎಂಬುದನ್ನು ಹೃದಯದಲ್ಲಿರಿಸಿಕೊಂಡರು.

ಜಿಲ್ಲೆಯ ಮಹಿಳೆಯರು ಈ ಬಾರಿ ಹಣಕ್ಕೆ ಮರುಳಾಗಲಿಲ್ಲ. ಹಣದ ಹರಿದಾಟ ತೀವ್ರತೆಯಿಂದ ಕೂಡಿದ್ದರೂ ಸುಮಲತಾ ಅವರನ್ನು ತಿರಸ್ಕರಿಸುವುದಕ್ಕೆ ಮಹಿಳೆಯರ ಮನಸ್ಸು ಒಪ್ಪಲಿಲ್ಲ. ಜೆಡಿಎಸ್‌ನವರು ನೀಡಿದ ಹಣ ಪಡೆದು ಕೊನೆಗೆ ಸುಮಲತಾ ಪರ ನಿಂತರು. ಸ್ವಾಭಿಮಾನದ ಉಳಿವಿಗೆ ಬದ್ಧರಾದರು.

ಅಳಿಯನಾಗುವೆನೆಂದರೂ ಒಪ್ಪಲಿಲ್ಲ: ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಕೆ.ನಿಖೀಲ್ ಕೂಡ ನಾನೂ ಈ ಜಿಲ್ಲೆಯ ಮಗ, ಒಳ್ಳೆಯ ಹುಡುಗಿ ಸಿಕ್ಕರೆ ಮದುವೆಯಾಗಿ ಅಳಿಯನಾಗುತ್ತೇನೆ ಎಂದರೂ ಯಾರೊಬ್ಬರೂ ಅದನ್ನು ಒಪ್ಪಿಕೊಳ್ಳಲಿಲ್ಲ. ಜಮೀನು ಖರೀದಿಸಿ, ತೋಟದ ಮನೆ ಮಾಡಿಕೊಂಡು ಇಲ್ಲೇ ಉಳಿಯುತ್ತೇನೆ ಎಂದರೂ ಮಂಡ್ಯ ಜನತೆ ನಂಬಲಿಲ್ಲ. ಮಂಡ್ಯದ ಸೊಸೆ ಸುಮಲತಾ ಅಂಬರೀಶ್‌ ಪರ ಮತ ಚಲಾಯಿಸಿ ಗೆಲುವಿಗೆ ಕಾರಣರಾದರು.

ಸುಮಲತಾ ಸೆರಗೊಡ್ಡಿ ಬೇಡಿದ ಸ್ವಾಭಿಮಾನದ ಭಿಕ್ಷೆ ಮಹಿಳೆಯರ ಮನಸ್ಸು ಪರಿವರ್ತನೆಯಾಗುವಂತೆ ಮಾಡಿತು. ಒಟ್ಟು ಚಲಾವಣೆಯಾದ ಮಹಿಳಾ ಮತಗಳಲ್ಲಿ ಶೇ.70ರಷ್ಟು ಮತಗಳು ಸುಮಲತಾ ಪರ ಇದ್ದುದರಿಂದಲೇ ಗೆಲುವು ಸುಲಭವಾಯಿತು.

● ಮಂಡ್ಯ ಮಂಜುನಾಥ್‌

ಟಾಪ್ ನ್ಯೂಸ್

ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್

ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್

8-uv-fusion

UV Fusion: ಬಾಯಾರಿ ಬರುವ ಬಾನಾಡಿಗಳ ರಕ್ಷಿಸೋಣ

veerappa-moily

Prajwal case; ಪಾತ್ರ ಯಾರದ್ದು ಮುಖ್ಯವಲ್ಲ; ಅಭಿನಯ ಮಾಡಿದ್ದು ಮುಖ್ಯ; ವೀರಪ್ಪ ಮೊಯ್ಲಿ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Aravinda Limbavali reacts to Prajwal Case

Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

6-virtual-world

UV Fusion: ವರ್ಚುವಲ್‌  ಪ್ರಪಂಚದಲ್ಲಿ ಅನಾಥರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬರಪೀಡಿತ ಪಟ್ಟಿಯಲ್ಲಿ ಸೇರಿದ ಕಾರ್ಕಳಕ್ಕೆ 152 ಕೆರೆಗಳೇ ಶ್ರೀರಕ್ಷೆ

ಬರಪೀಡಿತ ಪಟ್ಟಿಯಲ್ಲಿ ಸೇರಿದ ಕಾರ್ಕಳಕ್ಕೆ 152 ಕೆರೆಗಳೇ ಶ್ರೀರಕ್ಷೆ

Davanagere; ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರಿಗೆ ಮಾತೃ ವಿಯೋಗ

Davanagere; ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರಿಗೆ ಮಾತೃ ವಿಯೋಗ

ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್

ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್

8-uv-fusion

UV Fusion: ಬಾಯಾರಿ ಬರುವ ಬಾನಾಡಿಗಳ ರಕ್ಷಿಸೋಣ

ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್‌ ಪಡೀಲ್‌ ಆಯ್ಕೆ

ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್‌ ಪಡೀಲ್‌ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.