ಲಾರಿಗೆ ಕಾರು ಡಿಕ್ಕಿ, ಐವರ ದುರ್ಮರಣ
Team Udayavani, May 27, 2019, 6:00 AM IST
ನವಲಗುಂದ: ಕಾರಿನ ಟಯರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಎರಡು ಕುಟುಂಬದ ಐವರು ಮೃತಪಟ್ಟ ಘಟನೆ ಭಾನುವಾರ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಅಮರಗೋಳ ಕ್ರಾಸ್ ಹತ್ತಿರ ಸಂಭವಿಸಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐಹೊಳ್ಳಿ (ಹಾಲಿ ತಿರುಚನಾಪಳ್ಳಿ ತಮಿಳುನಾಡು ನಿವಾಸಿ) ಗ್ರಾಮದ ರವಿ ಜಂಬುಲಿಂಗಪ್ಪ ಹಂಡಿ (40), ಪುತ್ರಿ ಲೇಖಾಶ್ರೀ ರವಿ ಹಂಡಿ (19), ಪುತ್ರ ನವೀನ ರವಿ ಹಂಡಿ (14), ಬಾಗಲಕೋಟೆಯ ಕೌಲಪೇಟೆಯ ಹಿರಿಯ ಪತ್ರಕರ್ತ ಆನಂದ ಜಿಗಜಿನ್ನಿ ಅವರ ಪುತ್ರಿ ವರ್ಷಾ ಜಿಗಜಿನ್ನಿ (12), ಸಹೋದರನ ಪುತ್ರ ಶರಣ ವಿನೋದ ಜಿಗಜಿನ್ನಿ (7) ಮೃತರು. ಪತ್ರಕರ್ತ ಆನಂದ ಅವರ ಸಹೋದರಿ ಪತಿ ರವಿ ಹಂಡಿ, ನವೀನ ಹಂಡಿ ಹಾಗೂ ವರ್ಷಾ ಜಿಗಜಿನ್ನಿ ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ಲೇಖಾಶ್ರೀ ಹಂಡಿ ಹಾಗೂ ಶರಣ ಜಿಗಜಿನ್ನಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪ ಟ್ಟಿದ್ದಾರೆ. ಮೃತಪಟ್ಟವರು ಸೋಮವಾರ ಶ್ರೀಶೈಲಕ್ಕೆ ಹೋಗುವವರಿದ್ದರು. ದಾವಣಗೆರೆಯಲ್ಲಿರುವ ರವಿ ಹಂಡಿ ಸಹೋದರಿಮನೆಯಿಂದ ಭಾನುವಾರ ಬಾಗಲಕೋಟೆ ಕಡೆಗೆ ಅವರೆಲ್ಲ ಪ್ರಯಾಣ ಬೆಳೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
MUST WATCH
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ